ಆ್ಯಪ್ನಗರ

ಹಸಿ, ಒಣ ಕಸ ಬೇರ್ಪಡಿಸಿ ನೀಡಿ

​ಸಾರ್ವಜನಿಕರು ಕಸವನ್ನು ರಸ್ತೆಗೆ ಎಸೆಯುವ ಚಾಳಿ ಬಿಟ್ಟು, ಒಂದು ಕಡೆ ಸಂಗ್ರಹಿಸಿ ಪೌರಸೇವಾ ನೌಕರರು ತಮ್ಮ ಮನೆಗಳ ಬಳಿ ಬಂದಾಗ ಅವರಿಗೆ ಒಪ್ಪಿಸಿ ಎಂದು ಪುರಸಭೆ ಸದಸ್ಯೆ ಬಿ.ಎಸ್‌.ಸುಜಾತನಾಯ್ಡು ತಿಳಿಸಿದರು.

Vijaya Karnataka 19 Oct 2019, 3:22 pm
ಬಾಗೇಪಲ್ಲಿ: ಸಾರ್ವಜನಿಕರು ಕಸವನ್ನು ರಸ್ತೆಗೆ ಎಸೆಯುವ ಚಾಳಿ ಬಿಟ್ಟು, ಒಂದು ಕಡೆ ಸಂಗ್ರಹಿಸಿ ಪೌರಸೇವಾ ನೌಕರರು ತಮ್ಮ ಮನೆಗಳ ಬಳಿ ಬಂದಾಗ ಅವರಿಗೆ ಒಪ್ಪಿಸಿ ಎಂದು ಪುರಸಭೆ ಸದಸ್ಯೆ ಬಿ.ಎಸ್‌.ಸುಜಾತನಾಯ್ಡು ತಿಳಿಸಿದರು.
Vijaya Karnataka Web 18BPL3_10

ಪಟ್ಟಣದ 8ನೇ ವಾರ್ಡ್‌ನಲ್ಲಿಜನರಿಗೆ ಹಸಿರು, ನೀಲಿ ಬಣ್ಣದ ಡಸ್ಟ್‌ಬಿನ್‌ಗಳನ್ನು ವಿತರಿಸಿ, ಅವರು ಮಾತನಾಡಿದರು. ಹಸಿರು ಡಸ್ಟ್‌ಬಿನ್‌ನಲ್ಲಿಅನುಪಯುಕ್ತ ಸೊಪ್ಪು, ತರಕಾರಿ, ಹಣ್ಣು ಹಂಪಲು, ಹೂವು, ಆಹಾರ ಪದಾರ್ಥಗಳು, ಉದುರಿದ ಎಲೆಗಳು ಹಾಗೂ ಮನೆ ಕಸವನ್ನು ಹಾಕಿ ಸಂಗ್ರಹಿಸಿ ಹಾಗೂ ನೀಲಿ ಡಸ್ಟ್‌ಬಿನ್‌ನಲ್ಲಿಉಪಯೋಗಿಸಿದ ಪ್ಲಾಸ್ಟಿಕ್‌ ವಸ್ತುಗಳು, ರಬ್ಬರ್‌, ಗಾಜಿನ ಬಾಟಲ್‌ಗಳು, ಮರದ ವಸ್ತುಗಳು, ಚರ್ಮ ವಸ್ತುಗಳು, ಪೇಪರ್‌, ತೆಂಗಿನ ಚಿಪ್ಪುಗಳು, ಎಲೆಕ್ಟ್ರಿಕಲ್‌ ವೈರ್‌, ಹಳೆಯ ಪಾದರಕ್ಷೆಗಳು ಹಾಕಿ ಸಂಗ್ರಹಿಸಿ, ಕಸದ ಆಟೋಗೆ ನೀಡಿ. ಕೊಳೆಯುವ, ಕೊಳೆಯದ ತ್ಯಾಜ್ಯ ರಸ್ತೆ, ಚರಂಡಿಗಳಿಗೆ ಬಿಸಾಕುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಡೆಂಗೆ, ಚಿಕ್ಯೂನ್‌ ಗುನ್ಯಾ, ಮಲೇರಿಯಾ ಮತ್ತಿತರ ಜ್ವರಗಳು ಕಾಣಿಸಿಕೊಂಡು ಸಾರ್ವಜನಿಕರು ಆಸ್ಪತ್ರೆಗಳಿಗೆ ಅನಗತ್ಯವಾಗಿ ಅಲೆದು ಹಣ ವ್ಯರ್ಥ ಮಾಡಿಕೊಳ್ಳುತ್ತೀರಾ, ಸರಕಾರ ಕಸವನ್ನು ಸಂಗ್ರಹಿಸಿಲು ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯ ಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯಯುತ ಜೀವನ ನಡೆಸಿ ಎಂದರು.
ಆರೋಗ್ಯ ನಿರೀಕ್ಷಕ ಎ.ಮುರಳೀಧರ್‌, ಸಿಬ್ಬಂದಿ ಶಿವಪ್ಪ, ಸೀನಾ ಸಾರ್ವಜನಿಕರಾದ ಮುನಿರ್‌ ಅಹಮದ್‌, ನಜೀರ್‌, ಪರ್ವಿನ್‌ಬೇಗ, ಶಮೀನ್‌ತಾಜ್‌, ಶಮಿ, ನಿಸಾರ್‌ ಅಹಮದ್‌, ನಜೀಂ ಉನ್ನಿಸಾ,ಫಾತಿಮಾ, ಸಲ್ಮಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ