ಆ್ಯಪ್ನಗರ

ಸರಕಾರದ ನಿರ್ಲಕ್ಷದ ನಡುವೆಯೂ ಆಯೋಗದಿಂದ ಉತ್ತಮ ಕೆಲಸ

ರಾಜ್ಯ ಆಹಾರ ಆಯೋಗಕ್ಕೆ ಸರಕಾರ ಸಂರ್ಪೂಣವಾಗಿ ಸಹಕಾರ, ಸೌಲಭ್ಯ ನೀಡದಿದ್ದರೂ ಆಯೋಗವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೆ.ಕೃಷ್ಣಮೂರ್ತಿ ಹೇಳಿದರು.

Vijaya Karnataka 22 Oct 2019, 3:57 pm
ಚಿಕ್ಕಬಳ್ಳಾಪುರ: ರಾಜ್ಯ ಆಹಾರ ಆಯೋಗಕ್ಕೆ ಸರಕಾರ ಸಂರ್ಪೂಣವಾಗಿ ಸಹಕಾರ, ಸೌಲಭ್ಯ ನೀಡದಿದ್ದರೂ ಆಯೋಗವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೆ.ಕೃಷ್ಣಮೂರ್ತಿ ಹೇಳಿದರು.
Vijaya Karnataka Web good work by the commission in spite of the governments negligence
ಸರಕಾರದ ನಿರ್ಲಕ್ಷದ ನಡುವೆಯೂ ಆಯೋಗದಿಂದ ಉತ್ತಮ ಕೆಲಸ


ಜಿಲ್ಲಾಪ್ರವಾಸದ ಸಂದರ್ಭದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಆಹಾರ ಆಯೋಗವು 2013ರಲ್ಲಿಅಸ್ತಿತ್ವಕ್ಕೆ ಬಂದರೂ, 2017ರಿಂದ ಅದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಆಯೋಗದ ಸಮಿತಿಯಲ್ಲಿ5 ಮಂದಿ ಸದಸ್ಯದ್ದು, ರಾಜ್ಯಾದ್ಯಂತ ಈಗಾಗಲೇ 22 ಜಿಲ್ಲೆಗಳಲ್ಲಿಪ್ರವಾಸ ಮಾಡಿ, ಅಲ್ಲಿನ್ಯಾಯಬೆಲೆ ಅಂಗಡಿಗಳ ಸ್ಥಿತಿಗತಿ, ಆಹಾರ ಗೋದಾಮುಗಳು ಯಾವ ರೀತಿ ಕೆಲಸ ಮಾಡುತ್ತಿವೆ. ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆ ಯಾವ ರೀತಿಯಲ್ಲಿಕೆಲಸ ನಿರ್ವಹಿಸುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿಮಕ್ಕಳಿಗೆ ಪೌಷ್ಟಿಕ ಆಹಾರ, ಶಾಲೆಗಳಲ್ಲಿಬಿಸಿಯೂಟ ಯಾವ ಗುಣಮಟ್ಟದಲ್ಲಿದೆ. ಹಾಸ್ಟೆಲ್‌ಗಳ ಸ್ಥಿತಿ-ಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಸಾಕಷ್ಟು ಕಡೆ ಸುಧಾರಣೆ
: ಕೆಲವು ಜಿಲ್ಲೆಗಳಲ್ಲಿಪರವಾಗಿಲ್ಲ. ಇನ್ನೂ ಕೆಲವೆಡೆ ಸಾಕಷ್ಟು ಸುಧಾರಣೆಗಳು ಆಗಬೇಕು. ಕೆಲವು ಕಡೆ ನ್ಯಾಯಬೆಲೆ ಅಂಗಡಿಗಳಲ್ಲಿಹಣ ಪಡೆವ ಬಗ್ಗೆ ದೂರುಗಳು ಕೇಳಿಬಂದಿವೆ. ಗೂದಾಮುಗಳಲ್ಲಿಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರುವ ಬಗ್ಗೆಯೂ ಕಂಡುಬಂದಿದೆ. ಆಯೋಗ ತಂಡ ಭೇಟಿ ಕೊಟ್ಟ ಬಳಿಕ ಸಾಕಷ್ಟು ಕಡೆ ಸುಧಾರಣೆಯಾಗಿದೆ. ಬಿಸಿಯೂಟ ವ್ಯವಸ್ಥೆಯಲ್ಲೂಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ರಾಜ್ಯಾದ್ಯಂತ ಪ್ರವಾಸ ಮುಗಿದ ಬಳಿಕ ಇದೆಲ್ಲರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.

ಆಯೋಗದ ತಂಡವು ಅನಿರೀಕ್ಷಿತ ಭೇಟಿ ಮಾಡುವ ಸಂದರ್ಭದಲ್ಲಿಮಾತ್ರವಲ್ಲದೆ ಆಯೋಗದ ಕಚೇರಿಗೂ ಸಾಕಷ್ಟು ದೂರುಗಳು ಬಂದಿವೆ. ಆಯೋಗದ ಇನ್ನೂ ಹೆಚ್ಚಿನ ಪ್ರಚಾರ ಇಲ್ಲದ ಕಾರಣ, ನಿರೀಕ್ಷಿತ ಮಟ್ಟದಲ್ಲಿದೂರುಗಳು ಬರುತ್ತಿಲ್ಲ. ಈಗ ಎಲ್ಲಕಡೆ ಭೇಟಿ ಕೈಗೊಂಡಿರುವುದರಿಂದ ಮುಂದಿನ ದಿನಗಳಲ್ಲಿಹೆಚ್ಚಿನ ದೂರುಗಳು ಬರುವ ಸಾಧ್ಯತೆ ಇದ್ದು, ಅದರಂತೆ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸರಕಾರದಿಂದ ಸಹಕಾರ ಸಿಗುತ್ತಿಲ್ಲ: ಆಯೋಗಕ್ಕೆ ಸರಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿಸಹಕಾರ ಸಿಗುತ್ತಿಲ್ಲ. ಸದ್ಯಕ್ಕೆ ಕಚೇರಿಯೊಂದನ್ನು ಮಾತ್ರ ಕೊಟ್ಟಿದ್ದು, ಅಗತ್ಯ ಸಿಬ್ಬಂದಿ, ವಾಹನಗಳು ಇನ್ನೂ ಕೊಟ್ಟಿಲ್ಲ. ಅದಕ್ಕೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 37 ಸಿಬ್ಬಂದಿ ಪೈಕಿ ಕೇವಲ ಇಬ್ಬರನ್ನು ಮಾತ್ರ ನೀಡಿದ್ದು, ಇನ್ನೂ 35 ಮಂದಿ ಅಗತ್ಯವಿದೆ. ಎಂದರು.

ಸರಕಾರಕ್ಕೆ ವರದಿ ಸಲ್ಲಿಕೆ
ಆಯೋಗದ ತಂಡವು ರಾಜ್ಯದ ಎಲ್ಲಜಿಲ್ಲೆಗಳಿಗೂ ಪ್ರವಾಸ ಕೈಗೊಂಡಿದ್ದು, ಸೋಮವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯ ಆರೂ ತಾಲೂಕುಗಳಲ್ಲಿಪ್ರವಾಸ ಮಾಡಿ ಅಧ್ಯಯನ ನಡೆಸಲಿದೆ. ಅ.24ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿಆಹಾರ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಪರಿಶೀಲನಾ ವರದಿಗಳನ್ನು ತಾಳೆ ನೋಡಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಡಾ.ಕೆ. ಕೃಷ್ಣಮೂರ್ತಿ ತಿಳಿಸಿದರು.

ಜಿಲ್ಲಾವ್ಯಾಪ್ತಿಯಲ್ಲಿಬರುವ ನ್ಯಾಯಬೆಲೆ ಅಂಗಡಿಗಳು, ಅಂಗನವಾಡಿ ಕೇಂದ್ರಗಳು ಹಾಗೂ ಮಧ್ಯಾಹ್ನ ಉಪಾಹಾರ ಕೇಂದ್ರಗಳಲ್ಲಿಕಂಡು ಬಂದಿರುವ ಸಾಮಾನ್ಯ ಸೌಲಭ್ಯಗಳ ಕೊರತೆಗೆ ಶೀಘ್ರವೇ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಬೇಕು
-ಡಾ.ಕೃಷ್ಣಮೂರ್ತಿ | ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ