ಆ್ಯಪ್ನಗರ

ಸರಕಾರಿ ಕಚೇರಿಯಲ್ಲಿ ಗಡತ್ ನಿದ್ದೆ ಸಿಬ್ಬಂದಿಯ ಅಮಾನತು

‘ಸರಕಾರಿ ಕೆಲಸ ದೇವರ ಕೆಲಸ ಅಲ್ಲಘಿ. ನಿದ್ದೆ ಮಾಡೊ ಕೆಲಸ’ ಎಂಬ ಸಾರ್ವಜನಿಕರ ಆರೋಪಕ್ಕೆ ಪುಷ್ಠಿ ನೀಡುವಂತಹ ವಿಚಿತ್ರ ಘಟನೆ ಚಿಕ್ಕಬಳ್ಳಾಪುರದ ತಾಲೂಕು ಕಚೇರಿಯಲ್ಲಿ ನಡೆದಿದೆ.

Vijaya Karnataka 26 Mar 2018, 8:45 pm
ಚಿಕ್ಕಬಳ್ಳಾಪುರ: ‘ಸರಕಾರಿ ಕೆಲಸ ದೇವರ ಕೆಲಸ ಅಲ್ಲಘಿ. ನಿದ್ದೆ ಮಾಡೊ ಕೆಲಸ’ ಎಂಬ ಸಾರ್ವಜನಿಕರ ಆರೋಪಕ್ಕೆ ಪುಷ್ಠಿ ನೀಡುವಂತಹ ವಿಚಿತ್ರ ಘಟನೆ ಚಿಕ್ಕಬಳ್ಳಾಪುರದ ತಾಲೂಕು ಕಚೇರಿಯಲ್ಲಿ ನಡೆದಿದೆ.
Vijaya Karnataka Web government officer suspended
ಸರಕಾರಿ ಕಚೇರಿಯಲ್ಲಿ ಗಡತ್ ನಿದ್ದೆ ಸಿಬ್ಬಂದಿಯ ಅಮಾನತು


ಏನಿದು ಘಟನೆ?
ಸಾರ್ವಜನಿಕರ ಸೇವೆ ಮಾಡಬೇಕಾದ ಸರಕಾರಿ ಸಿಬ್ಬಂದಿಯೊರ್ವ ಬೆಳಗ್ಗೆಯೇ ಸರಕಾರಿ ಕಚೇರಿಯಲ್ಲೇ ಗಡತ್ ಆಗಿ ನಿದ್ದೆ ಮಾಡಿದ್ದಾನೆ. ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಎಸ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಸೊಂಪಾಗಿ ಸುಖ ನಿದ್ರೆ ಮಾಡಿದ್ದಾನೆ. ಬೆಳಗ್ಗೆ ೧೦ ಗಂಟೆಗೆ ಕಚೇರಿಗೆ ಬಂದ ಈತ ರೆಕಾರ್ಡ್ ರೊಂ ಬೀಗ ಹಾಕಿಕೊಂಡು ನಿದ್ರೆ ಹೋಗಿದ್ದಾನೆ.

ಬೆಳಿಗ್ಗೆ 12 ಗಂಟೆಯಾದ್ರೂ ರೆಕಾರ್ಡ್ ರೂಂ ಬಾಗಿಲು ತರೆಯದಿದ್ದನ್ನ ಕಂಡ ಸಾರ್ವಜನಿಕರು ಬಾಗಿಲಿನ ಮೇಲಿನ ಕಿಟಕಿ ಮೂಲಕ ಇಣುಕಿ ನೋಡಿದಾಗ, ರೆಕಾರ್ಡ್ ರೂಂನ ದಾಖಲೆಗಳನ್ನೆ ತಲೆದಿಂಬು ಮಾಡಿಕೊಂಡಿದ್ದ ಮಂಜುನಾಥ್ ನಿದ್ರೆ ಮಾಡ್ತಿರೋದು ಕಂಡು ಬಂದಿದೆ. ಇದರಿಂದ ಅಲ್ಲಿದ್ದ ಕೆಲ ಸಾರ್ವಜನಿಕರೇ ಮಂಜುನಾಥ್ ಮುಖಕ್ಕೆ ನೀರು ಎರಚಿ ಮಂಜುನಾಥ್‌ನನ್ನು ಎಬ್ಬಿಸಿದ್ದಾರೆ.

ಇನ್ನೂ ಯಾಕಪ್ಪಾ ನಿದ್ದೇ ಮಾಡ್ತಿದೀಯಾ ಅಂತ ಪ್ರಶ್ನಿಸಿದರೆ, ಹುಷಾರಿಲ್ಲ ಅಂತ ನೆಪ ಹೇಳಿದ್ದಾನೆ. ಇನ್ನೂ ಹಿರಿಯ ಅಕಾರಿಗಳು ಕೂಡ ಈತ ನಿದ್ದೆ ಮಾಡ್ತಿರೋದು ತಿಳಿದಿದ್ದರೂ, ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಇನ್ನೂ ಸರ್ವೆಯರ್ ಜೋಸೆಫ್ ಎಂಬುವವರು ಮಂಜುನಾಥ್ ಬೆಂಬಲಕ್ಕೆ ಬಂದಿದ್ದು, ಈತನ ನಿದ್ರಾವತಾರ ರೆಕಾರ್ಡ್ ಮಾಡುತ್ತಿದ್ದ ಮಾಧ್ಯಮದವರು ಹಾಗೂ ಸಾರ್ವಜನಿಕರನ್ನ ರೆಕಾರ್ಡ್ ರೂಂ ನಿಂದ ಹೊರದಬ್ಬಿದ್ದಾರೆ.

ಕುಡಿದಿದ್ದಾರೆ ?
ಮಂಜುನಾಥ್ ಮದ್ಯಪಾನ ಸೇವಿಸಿ ಮಲಗಿದ್ದರು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಪ್ರತಿ ದಿನವು ಇದೇ ಕಥೆ ಮುಂದುವರಿದಿದ್ದುಘಿ, ಸಾರ್ವಜನಿಕರಿಗೆ ಯಾವುದೇ ಸೇವೆ ದೊರೆಯುತ್ತಿಲ್ಲಘಿ. ಕುಡಿದ ಅಮಲಿನಲ್ಲಿ ನಿದ್ರೆ ಮಾಡಿಕೊಂಡು, ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.

ಈ ಸಂಬಂಧ ತಹಸೀಲ್ದಾರ್ ಕೆ.ನರಸಿಂಹ ಮೂರ್ತಿ ಮಧ್ಯಪ್ರವೇಶಿಸಿ, ಸಿಬ್ಬಂದಿ ಮಂಜುನಾಥ್ ಅನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ. ಆದರೆ, ಮಂಜುನಾಥ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಅಕಾರಿಗಳ ವಾದ..!
ಮಂಜುನಾಥ್ ಮದ್ಯ ಸೇವಿಸಿರಲಿಲ್ಲಘಿ. ಬೆಳಗ್ಗೆ ಹೋಟೆಲ್‌ನಲ್ಲಿ ತಿಂಡಿ ತಿದ್ದು ಕಚೇರಿಗೆ ಬಂದ ತಕ್ಷಣ ಈ ರೀತಿ ಮಲಗಿದ್ದಾರೆ ಎಂದು ಅಕಾರಿಗಳು ವಾದಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ವಿರೋಧವು ವ್ಯಕ್ತವಾಗಿದೆ.

ಆತ ಮದ್ಯ ಸೇವಿಸಿದ್ದ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದರೆ, ಅಕಾರಿಗಳು ಬೆಳಗ್ಗೆ ತಿದ್ದ ತಿಂಡಿಯಿಂದ ಈ ರೀತಿ ಅವಾತರ ಆಗಿದೆ ಎನ್ನುತ್ತಿದ್ದಾರೆ. ಆದರೆ, ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಿದ್ದ ಸಮಯದಲ್ಲಿ ಮಂಜುನಾಥ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ ಅವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.
-ಕೆ.ನರಸಿಂಹ ಮೂರ್ತಿ, ತಹಸೀಲ್ದಾರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ