ಆ್ಯಪ್ನಗರ

ಜೀವಸಂಕುಲದ ಉಳಿವಿಗೆ ಗಿಡ, ಮರ ಬೆಳೆಸಿ

ಮಾನವ ಸೇರಿದಂತೆ ಪ್ರಾಣಿ ಸಂಕುಲಗಳು ಬದುಕುಳಿಯಲು ಶುದ್ಧ ಗಾಳಿ ಅವಶ್ಯ. ಅದಕ್ಕಾಗಿ ಗಿಡ, ಮರಗಳನ್ನು ಬೆಳೆಸಲು ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಮುತುವರ್ಜಿ ವಹಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಗೀತಾ ಜಯೆಂಧರ್‌ ಹೇಳಿದರು.

Vijaya Karnataka 8 Jan 2019, 5:00 am
ಗೌರಿಬಿದನೂರು: ಮಾನವ ಸೇರಿದಂತೆ ಪ್ರಾಣಿ ಸಂಕುಲಗಳು ಬದುಕುಳಿಯಲು ಶುದ್ಧ ಗಾಳಿ ಅವಶ್ಯ. ಅದಕ್ಕಾಗಿ ಗಿಡ, ಮರಗಳನ್ನು ಬೆಳೆಸಲು ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಮುತುವರ್ಜಿ ವಹಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಗೀತಾ ಜಯೆಂಧರ್‌ ಹೇಳಿದರು.
Vijaya Karnataka Web grow tree and tree for survival of life
ಜೀವಸಂಕುಲದ ಉಳಿವಿಗೆ ಗಿಡ, ಮರ ಬೆಳೆಸಿ


ನಗರದ ಎಸ್‌ಎಸ್‌ಇಎ ಪ್ರೌಢಶಾಲೆಯ ಆವರಣದಲ್ಲಿ ಗೌರಿಬಿದನೂರು ಶ್ರೇಣಿಕ್‌ ಎಂಟರ್‌ಪ್ರೈಸಸ್‌ ಸಂಸ್ಥೆಯು ಎನ್ನೆಸ್ಸೆಸ್‌ ಘಟಕದ ಸಹಕಾರದೊಂದಿಗೆ ಏರ್ಪಡಿಸಿದ್ದ 'ಪರಿಸರದಲ್ಲಿ ಹೊಗೆ ಅಳಿಸಿ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ' ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಕಳೆದ ಸುಮಾರು ಎರಡ್ಮೂರು ದಶಕಗಳಿಂದ ರಸ್ತೆ ಬದಿಯಲ್ಲಿರುವ ಗಿಡ-ಮರಗಳನ್ನು ನಾವುಗಳು ನಮ್ಮ ಸ್ವಾರ್ಥ ಸಾಧನೆಗಾಗಿ ಕಡಿಯುತ್ತಿದ್ದೇವೆ. ಪರಿಸರದಲ್ಲಿ ಹಸಿರು ಕಣ್ಮರೆಯಾಗುತ್ತಿದೆ. ಇದು ಆತಂಕಕಾರಿ ಸಂಗತಿ ಎಂದರು.

ಪರಿಸರ ಸಮತೋಲನಕ್ಕೆ ಗಿಡ, ಮರಗಳು ಅವಶ್ಯ. ಇದರಿಂದ ನಿಯಮಿತವಾಗಿ ಮಳೆ ಸುರಿಯುತ್ತದೆ. ಭೂಮಿಯಲ್ಲಿ ಅಂತರ್ಜಲ ಕಾಪಾಡಲು ಅನುಕೂಲವಾಗುತ್ತದೆ ಎನ್ನುವುದು ಗಮನಹರಿಸಬೇಕಾದ ಅಂಶ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಗೃಹಬಳಕೆಗೆ ಹೊಗೆಯಿಂದ ಕೂಡಿರುವ ಇಂಧನವನ್ನು ಬಳಸುವುದರಿಂದ ಪರಿಸರವು ಕಲುಷಿತಗೊಳ್ಳುತ್ತದೆ. ಇದು ಎಲ್ಲರ ಆರೋಗ್ಯದ ಮೇಲೆ ದುಷ್ಪರಿಣಾ ಬೀರುತ್ತದೆ. ಈ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ವೈಸ್‌ ಪ್ರಿನ್ಸಿಪಾಲ್‌ ಆಂಜನೇಯ, ಶ್ರೇಣಿಕ್‌ ಎಂಟರ್‌ಪ್ರೈಸಸ್‌ ಮಾಲೀಕ ಶ್ರೇಣಿಕ್‌, ಶಿಕ್ಷ ಕರಾದ ಎಚ್‌.ಎನ್‌.ಪವನ್‌ ಕುಮಾರ್‌, ನಾರಾಯಣಸ್ವಾಮಿ, ಎನ್ನೆಸ್ಸೆಸ್‌ ಯೋಜನಾಧಿಕಾರಿ ಎನ್‌.ಕೆ.ಕೆಂಚವೀರ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ