ಆ್ಯಪ್ನಗರ

ಭಾರಿ ಮಳೆ, ತುಂಬಿ ಹರಿದ ಚಿತ್ರಾವತಿ ಚೆಕ್‌ ಡ್ಯಾಂ

ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ನಲ್ಲಪ್ಪನಹಳ್ಳಿಗೆ ಹೋಗುವ ದಾರಿಯ ಚಿತ್ರಾವತಿ ನದಿಗೆ ಅಡ್ಡಲಾಗಿ ನೂತನವಾಗಿ ನಿರ್ಮಿಸಿದ ಚೆಕ್‌ ಡ್ಯಾಂ ಮೊದಲ ಬಾರಿಗೆ ತುಂಬಿ ಕೋಡಿ ಹರಿದಿದೆ.

Vijaya Karnataka 12 Oct 2019, 4:39 pm
ಸೋಮೇನಹಳ್ಳಿ: ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ನಲ್ಲಪ್ಪನಹಳ್ಳಿಗೆ ಹೋಗುವ ದಾರಿಯ ಚಿತ್ರಾವತಿ ನದಿಗೆ ಅಡ್ಡಲಾಗಿ ನೂತನವಾಗಿ ನಿರ್ಮಿಸಿದ ಚೆಕ್‌ ಡ್ಯಾಂ ಮೊದಲ ಬಾರಿಗೆ ತುಂಬಿ ಕೋಡಿ ಹರಿದಿದೆ.
Vijaya Karnataka Web 01SOMENAHALLI11_10

ನದಿಯ ಪಾತ್ರವೇ ಬದಲಾಗಿ ನದಿಯಲ್ಲಿನೀರು ರಭಸವಾಗಿ ಹರಿದಿದೆ. ಚೆಕ್‌ ಡ್ಯಾಂನಿಂದ ಕೋಡಿಯ ನೀರು ಜೋರಾಗಿ ಬಿದ್ದ ಕಾರಣ ಕೋಡಿಯ ಕೆಳಗೆ ಚೆಕ್‌ಗೆ ಕಂಬಿಗಳನ್ನು ಹಾಕದೆ ನಿರ್ಮಿಸಿರುವುದರಿಂದ ಕಲ್ಲುಗಳು ಕಿತ್ತುಹೋಗಿ ಸೀಮೆಂಟ್‌ ಗೋಡೆ ಕುಸಿದು ಬಿದ್ದಿದೆ. ಒಂದೇ ಮಳೆಗೆ ಹೀಗೆ ಕಿತ್ತುಹೋದರೆ ಇನ್ನೂ ಜೋರಾಗಿ ಮಳೆ ಬಂದರೆ ಕಲ್ಲುಗಳು ಒಂದೂ ಇರುವುದಿಲ್ಲ. ಕಾಮಗಾರಿ ಮಾಡುವಾಗ ಕೆಳಗಡೆ ಕಲ್ಲುಗಳಿಗೆ ಅಡ್ಡಲಾಗಿ ಕಟ್ಟಿದ ತಡೆಗೋಡೆಗೆ ಕಬ್ಬಿಣದ ಕಂಬಿಗಳನ್ನು ಹಾಕದೆ ಕಾಮಗಾರಿ ಮಾಡಿರುವುದರಿಂದ ಕಲ್ಲುಗಳು ಕಿತ್ತುಹೋಗಲು ಕಾರಣವಾಗಿದೆ. ಚಿತ್ರಾವತಿ ಚೆಕ್‌ ಡ್ಯಾಂನ್ನು ನೋಡಲು ಜನರು ಸಾಲುಗಟ್ಟಿಕೊಂಡು ಬರುತ್ತಿದ್ದು ಗಂಗೆಗೆ ಹರಿಶಿನ, ಕುಂಕುಮ, ಹೂವು ಅರ್ಪಿಸಿ ಕಾಯಿ ಹೊಡೆದು ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
ಸೋಮೇನಹಳ್ಳಿ ಗ್ರಾಮದ ಜನರಿಗೆ ಕುಡಿಯುವ ನೀರಿಗೂ ಅನುಕೂಲವಾಗಲಿದೆ ಎಂದು ಜನರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 7 ವರ್ಷಗಳ ನಂತರ ಚಿತ್ರಾವತಿ ನದಿ ರಭಸದಿಂದ ಹರಿಯುತ್ತಿದ್ದು, ನದಿಯಲ್ಲಿಇದ್ದ ಗುಂಡಿಗಳೆಲ್ಲನೀರಿನಲ್ಲಿ ಮುಚ್ಚಿ ಹೋಗಿವೆ. ಸುಮಾರು ವಾರದಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಜೋಳ ನೆಲಕ್ಕೆ ಬಾಗಿದೆ. ಟೊಮೇಟೊ ಕೊಳೆಯುತ್ತಿದ್ದು, ಕಾಯಿಗಳು ನೆಲದ ಮೇಲೆ ಬಿದ್ದಿದೆ. ಸೇವಂತಿಗೆ ಗಿಡಗಳಿಗೆ ನೀರು ಹೆಚ್ಚಾಗಿ ಗಿಡಗಳು ಕೊಳೆಯುವ ಹಂತಕ್ಕೆ ಬಂದಿದೆ.
ಕಲ್ಯಾಣಿಗೆ ನೀರು: ಶ್ರೀ ಲಕ್ಷಿತ್ರ್ಮೕವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಕಲ್ಯಾಣಿಯು ಮಳೆಯ ನೀರಿನಿಂದ ತುಂಬಿ ತುಳುಕುತ್ತಿದೆ. ಗ್ರಾಮದ ಮನೆಗಳಲ್ಲಿರುವ ಬಾವಿಗಳಲ್ಲಿಸ್ವಲ್ಪಮಟ್ಟಿಗೆ ನೀರು ಕಾಣಿಸಿಕೊಳ್ಳುತ್ತಿದೆ. ಮುಸಕಿನ ಜೋಳ, ರಾಗಿ ಹೊಲ, ನೆಲಗಡಲೆ ಹೊಲಗಳಲ್ಲಿನೀರು ನಿಂತಿದ್ದು ರೈತರು ಜಮೀನುಗಳಲ್ಲಿಓಡಾಡುವುದು ಕಷ್ಟವಾಗಿದೆ. ಹೊಲಗಳಲ್ಲಿಹುಲ್ಲುಚೆನ್ನಾಗಿ ಬೆಳೆದಿದ್ದು ಜಾನುವಾರುಗಳ ಮೇವಿಗೆ ಆಸರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ