ಆ್ಯಪ್ನಗರ

ನಂದಿ ಬೆಟ್ಟದಲ್ಲಿ ಹೈ ಸೆಕ್ಯೂರಿಟಿ, ವಾಹನ ತಪಾಸಣೆ

ಎರಡು ದಿನ ಸರಕಾರಿ ರಜೆ, ಗೌರಿ ಗಣೇಶ ಹಬ್ಬದ ಪ್ರಯಕ್ತ ಪ್ರವಾಸಿಗರು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನಂದಿ ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ತಪಾಸಣೆ ನಡೆಸಲಾಗುತ್ತಿದೆ.

Vijaya Karnataka Web 31 Aug 2019, 7:06 pm
ಚಿಕ್ಕಬಳ್ಳಾಪುರ: ಉಗ್ರರ ಭೀತಿ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಹೈ ಸೆಕ್ಯೂರಿಟಿ ನಿಯೋಜಿಸಲಾಗಿದ್ದು, ಪ್ರತಿಯೊಂದು ವಾಹನ ಸೇರಿದಂತೆ ಎಲ್ಲಾ ಪ್ರವಾಸಿಗರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ.
Vijaya Karnataka Web ಡಿ ಸ್ವಾಟ್‌ ತಂಡ
ಡಿ ಸ್ವಾಟ್‌ ತಂಡ


ಭಾನುವಾರ, ಸೋಮವಾರ ಎರಡು ದಿನ ರಜೆ ಇರುವ ಹಿನ್ನೆಲೆಯಲ್ಲಿ ನಂದಿಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ದಿಸೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ‘ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಮತ್ತು ಯುದ್ಧತಂತ್ರ ಪಡೆ’ (ಡಿ-ಸ್ವಾಟ್) ಜತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ರಾಜ್ಯಕ್ಕೆ ಉಗ್ರರ ಎಂಟ್ರಿ ಶಂಕೆ, ಹೈ ಅಲರ್ಟ್‌, ಜಾಗೃತಗೊಂಡ ‘ಡಿ-ಸ್ವಾಟ್’ನಿಂದ ತಪಾಸಣೆ
ವಿಧ್ವಂಸಕ ಕೃತ್ಯ ನಿಯಂತ್ರಿಸುವ ಡಿ-ಸ್ವಾಟ್?

ಸಾರ್ವಜನಿಕರಿಗೆ ಧೈರ್ಯ

ಉಗ್ರರ ಭೀತಿಯು ಸಾರ್ವಜನಿಕರು ಮಾತ್ರವಲ್ಲದೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೂ ಸಾಕಷ್ಟು ಗೊಂದಲ ಮೂಡಿಸುತ್ತಿದೆ. ಅಲ್ಲದೆ, ದಿನೇ ದಿನಕ್ಕೆ ಗಿರಿಧಾಮದಲ್ಲಿ ಭದ್ರತೆಯೂ ಕೂಡ ಹೆಚ್ಚಿಸಲಾಗುತ್ತಿದ್ದು, ಮತ್ತೊಂದೆಡೆ ಪೊಲೀಸ್ ಸಿಬ್ಬಂದಿ ಯಾವುದೇ ಭಯ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ