ಆ್ಯಪ್ನಗರ

ಮಳೆ ನೀರು ಹಿಡಿದಿಟ್ಟು, ಅಂತರ್ಜಲ ವೃದ್ಧಿಸಿ

ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ, ಇಂಗಿಸುವ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಸಬೇಕಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜ್ಞಾನೇಶ್‌ ತಿಳಿಸಿದರು.

Vijaya Karnataka 11 Sep 2019, 5:00 am
ಚಿಕ್ಕಬಳ್ಳಾಪುರ: ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ, ಇಂಗಿಸುವ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಸಬೇಕಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜ್ಞಾನೇಶ್‌ ತಿಳಿಸಿದರು.
Vijaya Karnataka Web hold rain water and increase groundwater
ಮಳೆ ನೀರು ಹಿಡಿದಿಟ್ಟು, ಅಂತರ್ಜಲ ವೃದ್ಧಿಸಿ


ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿಸೋಮವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ 'ಚೋಟಾ ಸೈಂಟಿಸ್ಟ್‌' ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಬರಪೀಡಿತ ಜಿಲ್ಲೆಯಲ್ಲಿಕುಡಿವ ಹನಿ ನೀರಿಗೂ ಜನರು ಪರಿದಾಡುವಂತಾಗಿದೆ. ಮರಗಳ ಹನನದಿಂದ ಪರಿಸರದಲ್ಲಿಅಸಮತೋಲನ ಉಂಟಾಗಿದೆ. ಸಮರ್ಪಕ ಮಳೆ ಇಲ್ಲದೇ ಅಂತರ್ಜಲ ಮಟ್ಟ ಕುಸಿದಿದೆ. ಇಂತಹ ಸ್ಥಿತಿಯಲ್ಲಿಅಂತರ್ಜಲ ವೃದ್ಧಿಸಲು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ, ಇಂಗಿಸುವ ವೈಜ್ಞಾನಿಕ ವಿಧಾನವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಇಂದಿನ ಮಕ್ಕಳು ನಾಳಿನ ವಿಜ್ಞಾನಿಗಳಾಗುವ ಅವಕಾಶಗಳಿದ್ದು, ಹೊಸ ಆವಿಷ್ಕಾರಗಳಂತಹ ವಿಷಯಗಳಲ್ಲಿಕಲಿಕಾಸಕ್ತಿ ಹೆಚ್ಚು ಬೆಳೆಸಿಕೊಳ್ಳಬೇಕು. ಇಸ್ತೊ್ರೕದ ವಿಜ್ಞಾನಿಗಳು ಬಾಹ್ಯಕಾಶದಲ್ಲಿತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಇಸ್ತೊ್ರೕದ ಚಂದ್ರಯಾನ-2 ಯೋಜನೆ ನಮ್ಮ ದೇಶದ ವಿಜ್ಞಾನ ಲೋಕಕ್ಕೆ ಕೀರಿಟವಾಗಿದೆ ಎಂದು ಹೇಳಿದರು.

ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೈಲಜಾ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದೇ ಮುಖ್ಯ ಉದ್ದೇಶವಾಗಬಾರದು. ಬದಲಿಗೆ ವೈಜ್ಞಾನಿಕ ಚಿಂತನೆ, ಆಲೋಚನೆ, ಹೊಸ ಆವಿಷ್ಕಾರ, ಸಂಶೋಧನೆಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಆದಶ್‌ರ್‍, ಶಿಫಾ, ಅಂಜಲಿ ಶರ್ಮ, ವರ್ಷಿಣಿ ಹಾಗೂ ನೂರ್‌ ಫಾತಿಮಾ ವಿಜೇತರಾಗಿ, ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪದ್ಮಾ, ವೈಷ್ಣವಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಿನ್ಸಿಪಾಲ್‌ ವಿಜಯಲಕ್ಷಿತ್ರ್ಮರಾವ್‌, ಸಿಬ್ಬಂದಿ ಹಾಗೂ ಪೋಷಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ