ಶಿಡ್ಲಘಟ್ಟ: ಹೋಳಿ ಆಚರಣೆ ವೇಳೆ ದಾಂಧಲೆ ನಡೆಸಿದ ಕಾಲೇಜು ವಿದ್ಯಾರ್ಥಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು, ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ ಘಟನೆ ಗುರುವಾರ ನಡೆದಿದೆ.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೋಳಿ ಆಚರಣೆ ಸಂದರ್ಭದಲ್ಲಿ ಸಹಪಾಠಿ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಈ ವೇಳೆ ಹೊರಗಿನವರೂ ಕೂಡ ಕಾಲೇಜು ಆವರಣಕ್ಕೆ ಪ್ರವೇಶಿಸಿದ್ದಾರೆ. ಒಬ್ಬರ ಮೇಲೊಬ್ಬರು ಬಣ್ಣ ಎರಚಿಕೊಂಡಿದ್ದು, ತರಗತಿಗಳು ನಡೆಯುತ್ತಿದ್ದ ಕೊಠಡಿಗಳ ಒಳಗೂ ತೆರಳಿ ಬಣ್ಣ ಎರಚಿದ್ದಾರೆ. ಇದನ್ನು ಉಪನ್ಯಾಸಕರು, ಪ್ರಿನ್ಸಿಪಾಲರು ವಿರೋಧಿಸಿದರೂ ಅವರ ಮಾತನ್ನು ಕೇಳದೆ ಕೆಲ ವಿದ್ಯಾರ್ಥಿಗಳು ದಾಂಧಲೆ ಮುಂದುವರಿಸಿದ್ದಾರೆ.
ಬುದ್ದಿ ಹೇಳಿದ ಪೊಲೀಸರು: ಈ ವೇಳೆ ಕಾಲೇಜಿನ ಪ್ರಿನ್ಸಿಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಗರಠಾಣೆಯ ಪೊಲೀಸ್ ಸಿಬ್ಬಂದಿ ಕಾಲೇಜಿಗೆ ತೆರಳಿ ಹೋಳಿ ಆಡುತ್ತಿದ್ದ ವಿದ್ಯಾರ್ಥಿಗಳಿಗೆ, ಕಾಲೇಜು ಆವರಣದಲ್ಲಿ ಹಾಗೂ ತರಗತಿಗಳಲ್ಲಿ ಹೋಳಿ ಬಣ್ಣ ಎರಚದಂತೆ ಬುದ್ಧಿ ಹೇಳಿ ಹಿಂದಿರುಗಿದ್ದಾರೆ. ಆದರೆ ವಿದ್ಯಾರ್ಥಿಗಳು ಷ್ಟಕ್ಕೆ ಸುಮ್ಮನಾಗಿಲ್ಲ. ನಂತರ ಎಸ್ಐ ಹಾಗೂ ಸಿಬ್ಬಂದಿಯೇ ಮತ್ತೆ ಕಾಲೇಜಿಗೆ ತೆರಳಿ ಲಘು ಲಾಠಿ ಪ್ರಹಾರ ನಡೆಸಿ, ಕೈಗೆ ಸಿಕ್ಕ ಇಬ್ಬರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಪ್ರಿನ್ಸಿಪಾಲರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಕಾಲೇಜು ಆವರಣಕ್ಕೆ ಪೊಲೀಸರು ಪ್ರವೇಶಿಸಿ, ಲಘು ಲಾಠಿ ಪ್ರಹಾರ ನಡೆಸಿದ್ದಲ್ಲದೆ, ಇಬ್ಬರು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆಲ್ಲ ಪ್ರಿನ್ಸಿಪಾಲರೇ ಕಾರಣ ಎಂದು ಅವರ ವಿರುದ್ಧ ಹರಿಹಾಯ್ದರು. ಎಷ್ಟೋ ವರ್ಷಗಳಿಂದಲೂ ಕಾಲೇಜಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ, ಆದರೆ ಎಂದೂ, ಯಾರೂ ದೂರು ಕೊಟ್ಟಿಲ್ಲ. ಹೋಳಿ ಆಚರಿಸಬೇಡಿ ಎಂದು ಮೊದಲೇ ಹೇಳಬೇಕಿತ್ತು, ಸುಮ್ಮನೆ ಪೊಲೀಸರನ್ನು ಕರೆಸಿ ನಮ್ಮನ್ನು ಹೊಡೆಸಿದ್ದೇಕೆ. ನೀವು ನಮಗೆ ಬೇಡ, ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡ ಹೋಗಿ ಎಂದು ಆಗ್ರಹಿಸಿದರು.
ಪ್ರಿನ್ಸಿಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಪೊಲೀಸರು ಕರೆದೊಯ್ದಿದ್ದ ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಿದ ಮೇಲೆ ಪರಿಸ್ಥಿತಿ ತಿಳಿಯಾಯಿತು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೋಳಿ ಆಚರಣೆ ಸಂದರ್ಭದಲ್ಲಿ ಸಹಪಾಠಿ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಈ ವೇಳೆ ಹೊರಗಿನವರೂ ಕೂಡ ಕಾಲೇಜು ಆವರಣಕ್ಕೆ ಪ್ರವೇಶಿಸಿದ್ದಾರೆ. ಒಬ್ಬರ ಮೇಲೊಬ್ಬರು ಬಣ್ಣ ಎರಚಿಕೊಂಡಿದ್ದು, ತರಗತಿಗಳು ನಡೆಯುತ್ತಿದ್ದ ಕೊಠಡಿಗಳ ಒಳಗೂ ತೆರಳಿ ಬಣ್ಣ ಎರಚಿದ್ದಾರೆ. ಇದನ್ನು ಉಪನ್ಯಾಸಕರು, ಪ್ರಿನ್ಸಿಪಾಲರು ವಿರೋಧಿಸಿದರೂ ಅವರ ಮಾತನ್ನು ಕೇಳದೆ ಕೆಲ ವಿದ್ಯಾರ್ಥಿಗಳು ದಾಂಧಲೆ ಮುಂದುವರಿಸಿದ್ದಾರೆ.
ಬುದ್ದಿ ಹೇಳಿದ ಪೊಲೀಸರು: ಈ ವೇಳೆ ಕಾಲೇಜಿನ ಪ್ರಿನ್ಸಿಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಗರಠಾಣೆಯ ಪೊಲೀಸ್ ಸಿಬ್ಬಂದಿ ಕಾಲೇಜಿಗೆ ತೆರಳಿ ಹೋಳಿ ಆಡುತ್ತಿದ್ದ ವಿದ್ಯಾರ್ಥಿಗಳಿಗೆ, ಕಾಲೇಜು ಆವರಣದಲ್ಲಿ ಹಾಗೂ ತರಗತಿಗಳಲ್ಲಿ ಹೋಳಿ ಬಣ್ಣ ಎರಚದಂತೆ ಬುದ್ಧಿ ಹೇಳಿ ಹಿಂದಿರುಗಿದ್ದಾರೆ. ಆದರೆ ವಿದ್ಯಾರ್ಥಿಗಳು ಷ್ಟಕ್ಕೆ ಸುಮ್ಮನಾಗಿಲ್ಲ. ನಂತರ ಎಸ್ಐ ಹಾಗೂ ಸಿಬ್ಬಂದಿಯೇ ಮತ್ತೆ ಕಾಲೇಜಿಗೆ ತೆರಳಿ ಲಘು ಲಾಠಿ ಪ್ರಹಾರ ನಡೆಸಿ, ಕೈಗೆ ಸಿಕ್ಕ ಇಬ್ಬರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಪ್ರಿನ್ಸಿಪಾಲರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಕಾಲೇಜು ಆವರಣಕ್ಕೆ ಪೊಲೀಸರು ಪ್ರವೇಶಿಸಿ, ಲಘು ಲಾಠಿ ಪ್ರಹಾರ ನಡೆಸಿದ್ದಲ್ಲದೆ, ಇಬ್ಬರು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆಲ್ಲ ಪ್ರಿನ್ಸಿಪಾಲರೇ ಕಾರಣ ಎಂದು ಅವರ ವಿರುದ್ಧ ಹರಿಹಾಯ್ದರು. ಎಷ್ಟೋ ವರ್ಷಗಳಿಂದಲೂ ಕಾಲೇಜಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ, ಆದರೆ ಎಂದೂ, ಯಾರೂ ದೂರು ಕೊಟ್ಟಿಲ್ಲ. ಹೋಳಿ ಆಚರಿಸಬೇಡಿ ಎಂದು ಮೊದಲೇ ಹೇಳಬೇಕಿತ್ತು, ಸುಮ್ಮನೆ ಪೊಲೀಸರನ್ನು ಕರೆಸಿ ನಮ್ಮನ್ನು ಹೊಡೆಸಿದ್ದೇಕೆ. ನೀವು ನಮಗೆ ಬೇಡ, ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡ ಹೋಗಿ ಎಂದು ಆಗ್ರಹಿಸಿದರು.
ಪ್ರಿನ್ಸಿಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಪೊಲೀಸರು ಕರೆದೊಯ್ದಿದ್ದ ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಿದ ಮೇಲೆ ಪರಿಸ್ಥಿತಿ ತಿಳಿಯಾಯಿತು.