ಆ್ಯಪ್ನಗರ

ವಿದ್ಯೆಯಿಂದ ಜ್ಞಾನ ವೃದ್ಧಿಯಾದರೆ, ಕ್ರೀಡೆಯಿಂದ ಆರೋಗ್ಯ ಸದೃಢ

ವಿದ್ಯೆಯಿಂದ ಜ್ಞಾನ ವೃದ್ಧಿಯಾದರೆ, ಕ್ರೀಡೆಯಿಂದ ಆರೋಗ್ಯ ಸದೃಢವಾಗುತ್ತದೆ. ಆದ್ದರಿಂದ ಲಿಂಗ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಕ್ರೀಡಾಕೂಟಗಳಲ್ಲಿನಿರಂತರವಾಗಿ ಭಾಗವಹಿಸಬೇಕು. ಅಂತೆಯೇ ಸಮಾಜವೂ ಸಹ ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದರು.

Vijaya Karnataka 14 Oct 2019, 5:00 am
ಚಿಕ್ಕಬಳ್ಳಾಪುರ: ವಿದ್ಯೆಯಿಂದ ಜ್ಞಾನ ವೃದ್ಧಿಯಾದರೆ, ಕ್ರೀಡೆಯಿಂದ ಆರೋಗ್ಯ ಸದೃಢವಾಗುತ್ತದೆ. ಆದ್ದರಿಂದ ಲಿಂಗ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಕ್ರೀಡಾಕೂಟಗಳಲ್ಲಿನಿರಂತರವಾಗಿ ಭಾಗವಹಿಸಬೇಕು. ಅಂತೆಯೇ ಸಮಾಜವೂ ಸಹ ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದರು.
Vijaya Karnataka Web if knowledge is enhanced by education then health by sport
ವಿದ್ಯೆಯಿಂದ ಜ್ಞಾನ ವೃದ್ಧಿಯಾದರೆ, ಕ್ರೀಡೆಯಿಂದ ಆರೋಗ್ಯ ಸದೃಢ


ನಗರದ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನ ಆಡಿಟೋರಿಯಂನಲ್ಲಿಭಾನುವಾರ ನಡೆದ 10ನೇ ರಾಷ್ಟ್ರೀಯ ಮೆಮೋರಿ ಚಾಂಪಿಯನ್‌ ಶಿಪ್‌ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಪ್ರಸ್ತುತ ವಿಜ್ಞಾನ ತಂತ್ರಜ್ಞಾನದ ದಿನಮಾನದಲ್ಲಿವಿದ್ಯಾರ್ಥಿಗಳ ವಿಚಾರಧಾರೆಗಳು ಉನ್ನತವಾಗಬೇಕು. ಅವರಲ್ಲಿ ಜ್ಞಾನಾರ್ಜನೆಯ ಜತೆಗೆ ಕೌಶಲವೃದ್ಧಿ ಆಗಬೇಕು ಎಂದರು.

ಮಕ್ಕಳು ಶಿಕ್ಷಣದ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ಜೀವನದಲ್ಲಿರೂಢಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಪ್ರತಿಯೊಂದು ಕ್ಷೇತ್ರದಲ್ಲಿಮುಂದುವರಿಯಲು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿಒಳ್ಳೆಯ ಸಂಸ್ಕಾರವನ್ನು ಬೆಳೆಸಬೇಕು. ಸಂಸ್ಕಾರ ಇಲ್ಲದಿದ್ದರೆ ಮನುಷ್ಯ ಮುಂದೆ ಬರಲು ಸಾಧ್ಯವಿಲ್ಲಎಂದು ಹೇಳಿದರು.

ಗುರಿ ಸಾಧನೆಗೆ ಶ್ರಮಿಸಿ: ಸ್ಪರ್ಧೆಗಳಲ್ಲಿಸೋಲು-ಗೆಲುವು ಸಹಜ. ದೃಢಸಂಕಲ್ಪದ ಪ್ರಯತ್ನಕ್ಕೆ ಮುಂದೊಂದು ದಿನ ಗೆಲುವು ನಿಶ್ಚಿತ. ಆದ್ದರಿಂದ ಕ್ರೀಡಾಪಟುಗಳು ಕೀಳರಿಮೆ ಬಿಟ್ಟು ಸ್ಪರ್ಧೆಗಳಲ್ಲಿಭಾಗವಹಿಸಬೇಕು. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಗುರಿ ಸಾಧನೆಗೆ ಪಟ್ಟು ಬಿಡದೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಸವಾಲುಗಳಿಗೆ ಅಂಜದೆ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಯಶಸ್ಸು ಸಿಗುತ್ತದೆ. ಕೌಶಲ ಹೆಚ್ಚಿಸಿಕೊಳ್ಳುತ್ತ, ದೌರ್ಬಲ್ಯಗಳನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಂಡು ಸಾಧನೆಯ ಶಿಖರವನ್ನೇರಬೇಕು ಎಂದು ಕಿವಿಮಾತು ಹೇಳಿದರು.

ಪರಿಶ್ರಮ ಅಗತ್ಯ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪರಿಶ್ರಮ ಶ್ರದ್ಧೆ, ಆಸಕ್ತಿ, ನಿರಂತರ ಅಭ್ಯಾಸ ನಡೆಸಿದರೆ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆಯಬಹುದು. ಎಚ್ಚರಿಕೆ ಮತ್ತು ಸಾಮರ್ಥ್ಯ ಗುಣ ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿಗುರಿ ತಲುಪಲು ಸಾಧ್ಯವಿದೆ. ವೃತ್ತಿ ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆಂದು ಪರಿಗಣಿಸಬಾರದು. ಅದು ಜೀವನದ ಗುರಿ ಎಂಬುದಾಗಿ ಕಾಣಬೇಕು ಎಂದು ಹೇಳಿದರು

ವಲ್ಡ…ರ್‍ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್‌(ಭಾರತ) ಅಧ್ಯಕ್ಷ ಜಯಸಿಂಹ, ಇಂಡಿಯನ್‌ ಮೆಮೋರಿ ಚಾಂಪಿಯನ್‌ ಶಿಪ್‌ ಸಂಘಟನಾ ಸಮಿತಿ ಅಧ್ಯಕ್ಷ ಆರ್‌.ಕೆ.ಮಂಡಲ…, ಮುಖ್ಯ ತೀರ್ಪುಗಾರರಾದ ಫಿಲ್‌ ಚಾಂಬರ್ಸ್ರ್‍, ಡೊಮೆನಿಕ್‌ ಒ ಬ್ರಿಯನ್‌, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ