ಆ್ಯಪ್ನಗರ

ಸ್ವಾತಂತ್ರ್ಯ ಕ್ರಿಕೆಟ್‌ ಕಪ್‌ ಪಂದ್ಯಾವಳಿ

ಕ್ರೀಡೆಗೆ ದೇಶ, ಭಾಷೆ, ಜಾತಿಯ ಗಡಿ ಇಲ್ಲ. ಎಲ್ಲವನ್ನೂ ಮೀರಿ ಒಗ್ಗೂಡಿಸು ಶಕ್ತಿ ಕ್ರೀಡೆಗಿದೆ ಎಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್‌ ಅಭಿಪ್ರಾಯಪಟ್ಟರು.

Vijaya Karnataka 11 Aug 2019, 5:18 pm
ಶಿಡ್ಲಘಟ್ಟ: ಕ್ರೀಡೆಗೆ ದೇಶ, ಭಾಷೆ, ಜಾತಿಯ ಗಡಿ ಇಲ್ಲ. ಎಲ್ಲವನ್ನೂ ಮೀರಿ ಒಗ್ಗೂಡಿಸು ಶಕ್ತಿ ಕ್ರೀಡೆಗಿದೆ ಎಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್‌ ಅಭಿಪ್ರಾಯಪಟ್ಟರು.
Vijaya Karnataka Web independence cricket cup tournament
ಸ್ವಾತಂತ್ರ್ಯ ಕ್ರಿಕೆಟ್‌ ಕಪ್‌ ಪಂದ್ಯಾವಳಿ


ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಸಮಿತಿಯಿಂದ ಹಮ್ಮಿಕೊಂಡಿದ್ದ ನಾನಾ ಇಲಾಖೆಗಳ ನಡುವಿನ ಸ್ವಾತಂತ್ರ್ಯ ಕ್ರಿಕೆಟ್‌ ಕಪ್‌ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಗಳು ವೈಯುಕ್ತಿಕವಾಗಿ ಬಹಳ ಪ್ರಯೋಜಕಾರಿ. ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಎಲ್ಲರೂ ತಮಗೆ ಇಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಂಡು ಬದುಕಲ್ಲಿನ ಜಡತ್ವವನ್ನು ಹೋಗಲಾಡಿಸಿಕೊಳ್ಳಬೇಕು. ಸದಾ ಚಟುವಟಿಕೆಯ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ನಮ್ಮ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾನಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ವಿಜೇತ ತಂಡಗಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ತಾಲೂಕು ಆಡಳಿತದಿಂದ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್‌, ಆರೋಗ್ಯ, ಕಂದಾಯ, ಶಿಕ್ಷ ಣ, ಬೆಸ್ಕಾಂ, ತಾಲೂಕು ಪಂಚಾಯಿತಿ, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರನ್ನೊಳಗೊಂಡ 7 ಕ್ರಿಕೆಟ್‌ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ತಂಡಗಳ ನಾಯಕರನ್ನು ಪರಿಚಯಿಸಿಕೊಂಡು ಜಯ ಸಿಗಲಿ ಎಂದು ಹಾರೈಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಸಮಿತಿಯ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ, ರಾಷ್ಟ್ರೀಯ ಅಥ್ಲೆಟ್‌ ಜಯಚಂದ್ರ, ಚೆಸ್‌ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷ ಕ ಆರ್‌.ಸುಂದರಾಚಾರಿ, ಕ್ರೀಡಾಂಗಣದ ಉಸ್ತುವಾರಿ ಶ್ರೀನಿವಾಸ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ