ಆ್ಯಪ್ನಗರ

ಹೆಲ್ಮೆಟ್‌ ಮೇಳಕ್ಕೆ ಒತ್ತಾಯ

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಮೋಟಾರ್‌ ವಾಹನ ಕಾಯ್ದೆಯಿಂದ ಸಾರ್ವಜನಿಕರಿಗೆ ತುಂಬಾ ತೊದರೆಯಾಗುತ್ತಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಚಾಲನಾ ಪರವಾನಗಿ, ವಿಮೆ ಮತ್ತು ಹೆಲ್ಮೆಟ್‌ ಮೇಳ ಹಮ್ಮಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರವೇ ಪದಾಧಿಕಾರಿಗಳು ಎಆರ್‌ಟಿಓ ಆಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Vijaya Karnataka 21 Sep 2019, 4:08 pm
ಕರವೇ ಪದಾಧಿಕಾರಿಗಳಿಂದ ಎಆರ್‌ಟಿಓ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ
Vijaya Karnataka Web insist on helmet fair
ಹೆಲ್ಮೆಟ್‌ ಮೇಳಕ್ಕೆ ಒತ್ತಾಯ


ಚಿಂತಾಮಣಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಮೋಟಾರ್‌ ವಾಹನ ಕಾಯ್ದೆಯಿಂದ ಸಾರ್ವಜನಿಕರು, ರೈತರು ಹಾಗೂ ಬಡವರಿಗೆ ತುಂಬಾ ತೊದರೆಯಾಗುತ್ತಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಚಾಲನಾ ಪರವಾನಗಿ, ವಿಮೆ ಮತ್ತು ಹೆಲ್ಮೆಟ್‌ ಮೇಳ ಹಮ್ಮಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರವೇ ಪದಾಧಿಕಾರಿಗಳು ಎಆರ್‌ಟಿಓ ಆಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಕೆ.ಎಲ್‌.ಶ್ರೀನಿವಾಸ ಮಾತನಾಡಿ, ತಾಲೂಕಿನಲ್ಲಿತುಂಬಾ ಬಡ ಕುಟುಂಬಗಳಿದ್ದು, ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುವ ಜನರು ತುಂಬಾ ಇದ್ದಾರೆ. ಕೆಲವು ಬಡ ಸಣ್ಣ ರೈತಾಪಿ ವರ್ಗದವರಿದ್ದು, ಕೂಲಿ ಕಾರ್ಮಿಕರು ತಾಲೂಕಿನಲ್ಲಿಹೆಚ್ಚಾಗಿ ಇರುವುದರಿಂದ ಚಾಲನಾ ಪರವಾನಗಿ, ವಿಮೆ ಮತ್ತು ಹೆಲ್ಮೆಟ್‌ ಮೇಳ ಹಮ್ಮಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರಿಗೆ ಅಧಿಕಾರಿಗಳಲ್ಲಿಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಂಬರೀಷ್‌, ಜಿಲ್ಲಾಸಂಘಟನಾ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ. ತಾಲ್ಲೂಕು ಉಪಾಧ್ಯಕ್ಷ ಕೆ.ಸಿ.ಮುರಳಿ ಮೋಹನ್‌, ತಾಲ್ಲೂಕು ಸಂಚಾಲಕರು ಕೆ.ಎಸ್‌.ಸತ್ಯನಾರಾಯಣಶೆಟ್ಟಿ, ಕ.ಸಾ.ಪ ತಾಲ್ಲೂಕು ಅಧ್ಯಕ್ಷರ ಮು.ಪಾಪನ್ನ, ಕಸಬಾ ಹೋಬಳಿ ಅಧ್ಯಕ್ಷ ಎ.ನಾರಾಯಣ(ಡಿಸ್‌), ಕೈವಾರ ಹೋಬಳಿ ಅಧ್ಯಕ್ಷ ಚಂದ್ರಶೇಖರ್‌. ನೆರ್ನಕಲ್ಲುಗ್ರಾಮ ಶಾಖೆ ಅಧ್ಯಕ್ಷ ಎನ್‌.ಎಸ್‌.ಮಾದೇಶ. ಕೋನಪಲ್ಲಿಗ್ರಾಮ ಶಾಖೆ ಅಧ್ಯಕ್ಷ ಕೆ.ರಾಜೀವ್‌. ಮುಖಂಡರಾದ ಅಮರೇಶ್‌, ವೆಂಕಟೇಶ್‌, ಜಿ.ನಾಗೇಶ್‌, ಕೆ.ಎಸ್‌.ಸಂತೋಷ್‌, ಅಂಬರೀಶ್‌.ರಿ, ಸಿ.ಟಿ.ಗೋಪಾಲಕೃಷ್ಣ, ಕೆ.ಸಿ.ಸತ್ಯನಾರಾಯಣ, ವೆಂಕಟೇಶಪ್ಪ, ಮಧು, ರಮೇಶ, ಲಕ್ಷಿತ್ರ್ಮೕಪತಿ ಮತಿತ್ತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ