ಆ್ಯಪ್ನಗರ

ಪ್ರತಿ ಬೆಳೆಗೆ ಮುನ್ನಾ ಮಣ್ಣು ಪರೀಕ್ಷಿಸಿ

ಇತ್ತಿಚಿನ ದಿನಗಳಲ್ಲಿರೈತರು ಹೆಚ್ಚಾಗಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವ ಕಾರಣ ಮಣ್ಣು ಸತ್ವವನ್ನು ಕಳೆದುಕೊಳ್ಳುತ್ತಿದ್ದು, ಪ್ರತಿಯೊಂದು ಬೆಳೆ ಬೆಳೆಯುವಾಗ ಮಣ್ಣನ್ನು ಪರೀಕ್ಷಿಸುವುದನ್ನು ರೈತರು ಮರೆಯಬಾರದು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ರೈತರಿಗೆ ಕಿವಿಮಾತು ಹೇಳಿದರು.

Vijaya Karnataka 28 Aug 2019, 3:59 pm
ಮೈಲಾಂಡ್ಲಹಳ್ಳಿಯಲ್ಲಿಸಮಗ್ರ ಕೃಷಿ ಅಭಿಯಾನದಲ್ಲಿಎಂ.ಕೃಷ್ಣಾರೆಡ್ಡಿ ಸಲಹೆ
Vijaya Karnataka Web 27CMYV4_10

ಚಿಂತಾಮಣಿ ಗ್ರಾ.: ಇತ್ತಿಚಿನ ದಿನಗಳಲ್ಲಿರೈತರು ಹೆಚ್ಚಾಗಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವ ಕಾರಣ ಮಣ್ಣು ಸತ್ವವನ್ನು ಕಳೆದುಕೊಳ್ಳುತ್ತಿದ್ದು, ಪ್ರತಿಯೊಂದು ಬೆಳೆ ಬೆಳೆಯುವಾಗ ಮಣ್ಣನ್ನು ಪರೀಕ್ಷಿಸುವುದನ್ನು ರೈತರು ಮರೆಯಬಾರದು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ರೈತರಿಗೆ ಕಿವಿಮಾತು ಹೇಳಿದರು.

ತಾಲೂಕಿನ ಕಸಬಾ ಹೊಬಳಿ ಮೈಲಾಂಡ್ಲಹಳ್ಳಿ ಗ್ರಾಮದಲ್ಲಿಜಿಲ್ಲಾಪಂಚಾಯತ್‌ ಚಿಕ್ಕಬಳ್ಳಾಪುರ, ತಾಲೂಕು ಪಂಚಾಯಿತಿ ಚಿಂತಾಮಣಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿಹಮ್ಮಿಕೊಂಡಿದ್ದ 2019-20 ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿಮಣ್ಣು ತನ್ನ ಸತ್ವ ಕಳೆದುಕೊಂಡಿರುವ ಕಾರಣ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ರೈತರು ಬಳಸುತ್ತಿದ್ದಾರೆ. ಆದರೆ ಗೊಬ್ಬರವನ್ನು ಬಳಸುವ ಮುನ್ನ ಮಣ್ಣಿನಲ್ಲಿಯಾವುದರ ಕೊರತೆ ಇದೆ ಎಂಬುದನ್ನು ಪರೀಕ್ಷೆ ನಡೆಸಿ ಅದಕ್ಕೆ ಬೇಕಾದ ಸೂಕ್ತ ಗೊಬ್ಬರವನ್ನು ಬಳಸಿದರೆ ಉತ್ತಮವಾದ ಇಳುವರಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಸರಕಾರ ರೈತರ ಅಭಿವೃದ್ದಿಗಾಗಿ ಸಾವಿರಾರು ಕೋಟಿ ರೂ. ವ್ಯಯಿಸುತ್ತಿದೆ. ಆದರೆ ಆ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಧ್ಯವರ್ತಿಗಳ ಪಾಲಾಗುತ್ತಿರುವುದು ದುರಂತದ ಸಂಗತಿ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ಸರಕಾರದ ಸವಲತ್ತುಗಳನ್ನು ಆರ್ಹ ಪಲಾನುಭವಿಗಳಿಗೆ ತಲುಪಿಸಬೇಕಿದೆ ಎಂದು ತಾಕೀತು ಮಾಡಿದರು.

ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆಇಲಾಖೆಗಳ ಅಧಿಕಾರಿಗಳು ವಿವಿಧ ಯೋಜನೆಗಳನ್ನು ಬಿಂಬಿಸುವ ಪ್ರದರ್ಶಿಕೆಗಳು, ಮಾದರಿಗಳು, ಪ್ರಾತ್ಯಕ್ಷಿಕೆಗಳನ್ನು ಒಳಗೊಂಡ ಕೃಷಿ ವಸ್ತು ಪ್ರದರ್ಶ ಏರ್ಪಡಿಸಲಾಗಿತ್ತು.

ತಹಸೀಲ್ದಾರ್‌ ವಿಶ್ವನಾಥ್‌, ರೈತ ಸಂಘದ ರಮಣಾರೆಡ್ಡಿ, ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್‌, ಗ್ರಾಪಂ ಸದಸ್ಯ ರಮೇಶ್‌, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತನಾಡಿದರು.

ಕುರುಬೂರು ಗ್ರಾಪಂ ಅಧ್ಯಕ್ಷೆ ಸುಜಾತ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಕುರುಬೂರು ನೇತಾಜಿಗೌಡ, ಕೃಷಿ ಉಪನಿರ್ದೇಶಕಿ ಪಂಕಜ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್‌, ತೋಟಗಾರಿಕೆ ಇಲಾಖೆ ಬಾಲಕೃಷ್ಣ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಭೋಜಣ್ಣ, ಪಶುಪಾಲನಾ ಇಲಾಖೆಯ ಬೈರಾರೆಡ್ಡಿ, ಕೃಷಿ ಇಲಾಖೆಯ ಪ್ರಸಾದ್‌, ರಮೇಶ್‌, ನಾಗರಾಜ್‌, ಶ್ರೀರಾಮರೆಡ್ಡಿ, ಪಾಪಿರೆಡ್ಡಿ, ಶಶಿ, ಶ್ವೇತ, ಶಿಲ್ಪ, ಸಂಧ್ಯಾ, ಆಶಾ ಉಪಸ್ಥಿತಿರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ