ಆ್ಯಪ್ನಗರ

ಚಿಕ್ಕಬಳ್ಳಾಪುರದ ಹಳ್ಳಿ ಹೈದನಿಗೆ ಮದ್ವೆ ಆಗೋಣವೆಂದು ಲಕ್ಷ ಲಕ್ಷ ದೋಚಿದಳು ಇಟಲಿ ಬ್ಯೂಟಿ!

ಫಾರಿನ್ ಬ್ಯೂಟಿ ಮೋಸದಾಟಕ್ಕೆ ಸಾಲಗಾರನಾದ ಹಳ್ಳಿ ಹೈದ ಚಿಕ್ಕಬಳ್ಳಾಪುರದಲ್ಲಿ ತಡವಾಗಿ ಬೆಳಕಿಗೆ ಬಂದ ಘಟನೆ

Vijaya Karnataka Web 19 Sep 2019, 6:11 pm
ಚಿಕ್ಕಬಳ್ಳಾಪುರ: ಮ್ಯಾಟ್ರಿಮೋನಿಯಲ್‌ನಲ್ಲಿ ಸಿಕ್ಕ ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಹಳ್ಳಿ ಹೈದನೋರ್ವ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಕೊನೆಗೆ ಸಾಲಗಾರನಾಗಿ ಈಗ ಪೊಲೀಸ್ ಠಾಣೆಗೆ ಅಲೆದಾಡುವಂತಹ ಘಟನೆ ಚಿಕ್ಕಬಳ್ಳಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವಿಚ್ಚೇತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಮೋಸಕ್ಕೊಳಗಾದ ವ್ಯಕ್ತಿ.
Vijaya Karnataka Web Honey trap


ಏನಿದು ಘಟನೆ?: ಮುನಿರಾಜು ಮದುವೆ ಆಗಬೇಕು ಎಂದು ಕನ್ನಡ ಮ್ಯಾಟ್ರಿಮೋನಿಯಲ್‌ನಲ್ಲಿ ತಮ್ಮ ಪ್ರೊಫೈಲ್‌ ಕ್ರಿಯೇಟ್ ಮಾಡಿ ವಧುವಿನ ಹುಡಕಾಟದಲ್ಲಿ ತೊಡಗಿದ್ದರು. ಒಂದು ದಿನ ಇಂಟರ್ ನ್ಯಾಷನಲ್ ನಂಬರ್‌ನಿಂದ ವಾಟ್ಸಾಪ್ ಮುಖಾಂತರ ಚಾಟ್ ಮಾಡಿದ ಬ್ಯೂಟಿ ನಾನು ಮ್ಯಾಟ್ರಿಮೋನಿಯನ್‌ನಲ್ಲಿ ನಿಮ್ಮ ಪ್ರೊಫೈಲ್‌ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.

ಬ್ಯೂಟಿಯ ಫೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಕುಣಿದಾಡಿದ ಮುನಿರಾಜು ಬ್ಯೂಟಿ ಜೊತೆ ಚಾಟಿಂಗ್‌ಗೆ ಇಳಿದಿದ್ದಾರೆ. ಅತ್ತ ಕಡೆಯಿಂದ ವಾಟ್ಸಪ್ ಮುಖಾಂತರ ಕರೆ ಮಾಡಿದ ಬ್ಯೂಟಿ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲಾ ನಿಮ್ಮ ಪ್ರೊಫೈಲ್‌ ತೋರಿಸಿದ್ದೇನೆ. ಭಾರತಕ್ಕೆ ಬಂದು ನಿಮ್ಮನ್ನ ಮದುವೆಯಾಗ್ತೀನಿ ಅಂದಿದ್ದಾಳೆ. ಮೊದೆಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಬ್ಯೂಟಿ, ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಎಂದು ಹಣ ಪಡೆದುಕೊಂಡಿದ್ದಾಳೆ.

ನಂತರ ಇಟಲಿಯಿಂದ ದೆಹಲಿಗೆ ಬಂದಿದ್ದೀನಿ. ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ. ಏರ್‌ಪೋರ್ಟ್ನಲ್ಲಿ ಕಸ್ಟಮ್ಸ್ ಅಕಾರಿಗಳು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದರೆ ಎಲ್ಲಾ ಹಣ ವಾಪಾಸ್ ಮಾಡುತ್ತಾರೆ. ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ಪಡೆದ ಲಪಟಾಯಿಸಲಾಗಿದೆ. ಕೊನೆಗೆ ಫೋನ್‌ ಸ್ವಿಚ್ ಆಫ್‌ ಮಾಡಿ ಸುಮ್ಮನಾಗಿದ್ದಾಳೆ. ಫೋನ್‌ ಸ್ವಿಚ್ಡ್ ಆಫ್‌ ಆದ್ದರಿಂದ ಅನುಮಾನಗೊಂಡ ಮುನಿರಾಜು ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾರೆ. ಆಗ ಅವೆಲ್ಲವೂ ಫೇಕ್‌ ಅಕೌಂಟ್ಸ್ ಅಂತ ಗೊತ್ತಾಗಿದೆ.

ಫಾರಿನ್ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ ಅಂತ ಸಾಲ ಸೋಲ ಮಾಡಿ ಸರಿ ಸುಮಾರು 30 ಲಕ್ಷ ಸುರಿದ ಮುನಿರಾಜು, ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಇಟಲಿ ಸುಂದರಿಯ ಸೌಂದರ್ಯಕ್ಕೆ ಮರುಳಾದ ಹಳ್ಳಿ ಹೈದ ಈಗ ಸಾಲದ ಸುಳಿಗೆ ಸಿಲುಕಿದ್ದಾರೆ. ಸ್ವಾಮಿ ನನ್ನ ದುಡ್ಡು ವಾಪಾಸ್ ಕೊಡಿಸಿ ಅಂತ ಪೊಲೀಸರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ