ಆ್ಯಪ್ನಗರ

ಗಡಿಭಾಗದ ಜನರ ಹೃದಯಗಳಲ್ಲಿ ಕನ್ನಡಾಭಿಮಾನದ ಬೀಜ ಬಿತ್ತೋಣ

ಕನ್ನಡ ಸಾಹಿತ್ಯ ಪರಿಷತ್ತು ಗಡಿಭಾಗದ ಜನರ ಹೃದಯಗಳಲ್ಲಿ ಕನ್ನಡಾಭಿಮಾನದ ಬೀಜ ಬಿತ್ತುವ ಮೂಲಕ ಜನತೆಯಲ್ಲಿ ಭಾಷಾಭಿಮಾನ ಹುಟ್ಟುಹಾಕುತ್ತಿದೆಯೆಂದು ಹಿರಿಯ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ ಹೇಳಿದರು.

Vijaya Karnataka Web 9 May 2018, 3:42 pm
ಕಸಾಪ 104ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಹಿರಿಯ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌
Vijaya Karnataka Web kannada in the hearts of the people of the border
ಗಡಿಭಾಗದ ಜನರ ಹೃದಯಗಳಲ್ಲಿ ಕನ್ನಡಾಭಿಮಾನದ ಬೀಜ ಬಿತ್ತೋಣ


ಚಿಂತಾಮಣಿ: ಕನ್ನಡ ಸಾಹಿತ್ಯ ಪರಿಷತ್ತು ಗಡಿಭಾಗದ ಜನರ ಹೃದಯಗಳಲ್ಲಿ ಕನ್ನಡಾಭಿಮಾನದ ಬೀಜ ಬಿತ್ತುವ ಮೂಲಕ ಜನತೆಯಲ್ಲಿ ಭಾಷಾಭಿಮಾನ ಹುಟ್ಟುಹಾಕುತ್ತಿದೆಯೆಂದು ಹಿರಿಯ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಕಸಾಪ 104ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಸೊಗಡನ್ನು ಅರಿಯಲು ಹಿರಿಯರ ಪುಸ್ತಕಗಳನ್ನು ಓದಿದಾಗ ಮಾತ್ರ ಸಾಧ್ಯ. ಉತ್ತಮ ಸಾಹಿತ್ಯದಿಂದ ಉತ್ತಮ ಸಂಸ್ಕೃತಿ ಬೆಳೆಸಬಹುದೆಂದರು.

ಕಸಾಪ ಜಿಲ್ಲಾಧ್ಯಕ್ಷ ರಾದ ಕೈವಾರ ಎನ್‌.ಶ್ರೀನಿವಾಸ್‌ ಮಾತನಾಡಿ, ತಾಲೂಕು ಕಸಾಪ ಅಧ್ಯಕ್ಷ ರಾದ ಮು.ಪಾಪಣ್ಣನವರು ಪರಿಷತ್ತು ವತಿಯಿಂದ ಪ್ರತಿ ಮಾಹೆಯು ತಪ್ಪದೆ ವಿಶೇಷ ಒಂದೊಂದು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದರು.

ಸರಕಾರಿ ಬಾಲಕಿಯರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘುರವರು ತಮ್ಮ ವಿಶೇಷ ಉಪನ್ಯಾಸ ನೀಡಿ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆ, ಬೆಳೆದು ಬಂದ ದಾರಿ, ಪರಿಷತ್ತಿನ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಂಗೀತ ವಿದ್ವಾಂಸ ಎಲ್‌.ವೈ.ಶ್ರೀನಿವಾಸರೆಡ್ಡಿರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭರತನಾಟ್ಯ, ನೃತ್ಯ, ಸಂಗೀತ, ಭಾವಗೀತೆಗಳ ಗಾಯನದ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಶವ್‌ ಡ್ಯಾನ್ಸ್‌ ಅಕಾಡೆಮಿ ಸಂಸ್ಥೆಯಿಂದ ಮತ್ತು ಎಮ್‌.ಕೆ.ಬಿ.ಶಾಲೆ ಮಕ್ಕಳಿಮದ ವಿವಿಧ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಕಾಗತಿ ವಿ.ವೆಂಕಟರತ್ನಂ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಾದ ಮಂಚನಬೆಲೆ ಶ್ರೀನಿವಾಸ್‌, ಚಿಕ್ಕಬಳ್ಳಾಪುರ ಕಸಾಪ ಅಧ್ಯಕ್ಷ ನಂಜುಂಡಪ್ಪ, ಶಿಡ್ಲಘಟ್ಟ ಕಸಾಪ ಅಧ್ಯಕ್ಷ ಮಂಜುನಾಥ್‌, ಪದಾಧಿಕಾರಿಗಳಾದ ಜಿ.ವಿ.ಶ್ರೀನಿವಾಸಶೆಟ್ಟಿ, ಬಿ.ಎನ್‌. ಶ್ರೀನಿವಾಸರೆಡ್ಡಿ ನರಸಿಂಹಪ್ಪ, ಕೆ.ಬಾಲಾಜಿ, ಶಿವರಾಂ, ಇಸಾಹ್‌ ಖಾನ್‌, ಮುನಿಕೃಷ್ಣ, ರವಿ ಚಂದ್ರ, ಮಂಜುನಾಥ್‌, ಜನಾರ್ದನ್‌ ಪೂಜಾರಿ, ಕಂಚಿ ನಾಗೇಶ್‌, ಅಶ್ವತ್ಥಮ್ಮ, ಸ್ವರ್ಣಗೌರಿ, ರಾಜೇಶ್ವರಿ, ಸೀತಮ್ಮ, ವಿದ್ಯಾ ಮತ್ತಿತರರು ಭಾಗವಹಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ