ಆ್ಯಪ್ನಗರ

Karnataka Elections 2023 : ನನ್ನ ಬಳಿ ಹಂಚಲು ದುಡ್ಡಿಲ್ಲ; ಯಾರೂ ನನ್ನ ಕಿಡ್ನಾಪ್‌ ಕೂಡಾ ಮಾಡಿಲ್ಲ - ಪ್ರದೀಪ್‌ ಈಶ್ವರ್‌

chikkaballapur constituency Congress Candidate Pradeep Eshwar : ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಮಂಗಳವಾರ ಸಂಜೆಯಿಂದ ಕಾಣೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಪ್ರದೀಪ್‌ ಈಶ್ವರ್‌ ಸ್ಪಷ್ಟನೆ ನೀಡಿದ್ದು, ಅಕ್ಕನ ಮನೆಯಲ್ಲಿದ್ದೆ. ಐಟಿ ದಾಳಿ ಮಾಡಿದ್ದರು. ಫೋನ್‌ ಟ್ರ್ಯಾಪ್‌ ಆಗಿತ್ತು ಎಂದು ಹೇಳಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆದ್ದೆ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈಲೈಟ್ಸ್‌:

  • ನಾನೂ ಎಲ್ಲೂ ಹೋಗಿಲ್ಲ ಪೆರೇಸಂದ್ರದಲ್ಲೇ ಇದ್ದೆ ಡಬಲ್‌ ಗೇಮ್‌ ನಾಯಕರನ್ನು ದೂರ ಇಟ್ಟಿದ್ದೇನೆ ಎಂದ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌.
  • ನನ್ನ ಬಳಿ ಹಂಚಲು ದುಡ್ಡಿಲ್ಲ. ಎಲ್ಲಿಂದ ದುಡ್ಡು ತರಲಿ. ಹೀಗಾಗಿ ಯಾರಿಗೂ ಹಣ ಕೊಟ್ಟಿಲ್ಲ ಎಂದ ಪ್ರದೀಪ್‌
  • ಪೆರೇಸಂದ್ರದ ನಮ್ಮ ಅಕ್ಕನ ಮನೆ ಮೇಲೆ ಐಟಿ ದಾಳಿಯಾಗಿದೆ. ಏನು ಸಿಗದೆ ವಾಪಸ್‌ ಹೋಗಿದ್ದಾರೆ ಎಂದು ಮಾಹಿತಿ ನೀಡಿದ ಕಾಂಗ್ರೆಸ್‌ ಅಭ್ಯರ್ಥಿ.


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಪ್ರದೀಪ್‌ ಈಶ್ವರ್‌
ಪ್ರದೀಪ್‌ ಈಶ್ವರ
ಚಿಕ್ಕಬಳ್ಳಾಪುರ : ನನ್ನ ಬಳಿ ಹಂಚಲು ದುಡ್ಡಿಲ್ಲ. ಎಲ್ಲಿಂದ ದುಡ್ಡು ತರಲಿ. ಹೀಗಾಗಿ ಯಾರಿಗೂ ಹಣ ಕೊಟ್ಟಿಲ್ಲ. ಕೆಲವು ನಾಯಕರು ಡಬಲ್‌ ಗೇಮ್‌ ಆಡಿದ್ದಾರೆ. ಅವರನ್ನು ನಾನೇ ದೂರ ಇಟ್ಟಿದ್ದೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.
ಮಂಗಳವಾರ ರಾತ್ರಿಯಿಂದ ಪ್ರದೀಪ್‌ ಈಶ್ವರ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಯಾರ ಕೈಗೂ ಸಿಗುತ್ತಿಲ್ಲ. ಅವರ ಎಲ್ಲೂ ಕಾಣುತ್ತಿಲ್ಲ ಎಂದು ಸುದ್ದಿಯಾಗಿತ್ತು. ಬುಧಾವಾರ ಬೆಳಗ್ಗೆ ಪೆರೇಸಂದ್ರ ಮತಗಟ್ಟೆ ಬಳಿ ಕಾಣಿಸಿಕೊಂಡ ಪ್ರದೀಪ್‌ ಈಶ್ವರ್‌ ಮಾತನಾಡಿ, "ನನ್ನನ್ನು ಯಾರೂ ಕಿಡ್ನಾಪ್‌ ಮಾಡಿಲ್ಲ ನಾನು ಪೆರೇಸಂದ್ರದಲ್ಲಿ ಇದ್ದೆ'' ಎಂದು ಸ್ಪಷ್ಟಪಡಿಸಿದ್ದಾರೆ.


ಗಾಸಿಪ್‌ ನಂಬಬೇಡಿ; ಫೋನ್‌ ಟ್ರಾಪ್‌ ಆಗಿತ್ತು

ನನ್ನ ವಿರೋದಿಗಳ ಹರಡಿಸಿರುವ ಗಾಸಿಪ್‌ ನಂಬಬೇಡಿ. ನನ್ನನ್ನ ಯಾರು ಕಿಡ್ನಾಪ್ ಮಾಡಿಲ್ಲ. ನಾನು ರಾತ್ರಿಯೆಲ್ಲ ಪೆರೇಸಂದ್ರದಲ್ಲೇ ಇದ್ದೆ. ಮನೆ ಮನೆಗೂ ಭೇಟಿ ನೀಡಿ ಮತ ಕೇಳಿದ್ದೇನೆ. ರಾತ್ರಿ 1 ಗಂಟೆವರೆಗೂ ಕೆಲವು ಮುಖಂಡರುಗಳೊಂದಿಗೆ ಮಾತುಕತೆ ಮಾಡಿದ್ದೇನೆ. ಆನಂತರ ಫೋನ್‌ ಟ್ರ್ಯಾಪ್‌ ಆಗಿದ್ದ ಕಾರಣ ಕೆರೆಗಳನ್ನು ಸ್ವೀಕರಿಸಲು ಆಗಲಿಲ್ಲ ಎಂದರು.

ಬಿಜೆಪಿಯಲ್ಲಿ ಮಾತ್ರ ಲಿಂಗಾಯತರು ಸಿಎಂ ಆಗಲು ಸಾಧ್ಯ, ಕಾಂಗ್ರೆಸ್ ನದ್ದು ಮೊಸಳೆ ಕಣ್ಣೀರು ಅಷ್ಟೇ: ಸಚಿವ ಸುಧಾಕರ್‌

ಅಕ್ಕನ ಮನೆ ಮೇಲೆ ಐಟಿ ದಾಳಿ

" ಪೆರೇಸಂದ್ರದ ನಮ್ಮ ಅಕ್ಕನ ಮನೆ ಮೇಲೆ ಐಟಿ ದಾಳಿಯಾಗಿದೆ. ಏನು ಸಿಗದೆ ವಾಪಸ್‌ ಹೋಗಿದ್ದಾರೆ. ನನ್ನ ಬಳಿ ದುಡ್ಡು ಕೊಡಲು ಹಣವಿಲ್ಲ. ನನ್ನ ಬಳಿ ಇದ್ದಿದ್ದೆ 27 ಲಕ್ಷ ರೂಪಾಯಿ. ಕೆಲವರ ಬಳಿ ಸಾಲ ಮಾಡಿಕೊಂಡಿದ್ದೇನೆ. ದುಡ್ಡು ಎಲ್ಲಿಂದ ತೆಗೆದುಕೊಂಡು ಬಂದು ಕೊಡೋಣ. ಪ್ರಾಮಾಣಿಕ ಸೇವೆಗಾಗಿ ಚುನಾವಣೆಗೆ ನಿಂತಿದ್ದೇನೆ. ನಾನೇ ಗೆಲ್ಲುತ್ತೇನೆ. ನಾನು ಶಾಸಕನಾಗುವುದು ಖಚಿತ " ಎಂದು ತಿಳಿಸಿದರು.

ಕೆಲವರು ನಂಬಿಕೆ ದ್ರೋಹ

" ನಾನು ಪೆರೇಸಂದ್ರದಲ್ಲಿ ವೋಟ್‌ ಮಾಡಿದ್ದೇನೆ. ಎಲ್ಲ ಕಡೆ ಕಾಂಗ್ರೆಸ್‌ ಬಗ್ಗೆ ಒಳ್ಳೆಯ ಒಲವಿದೆ. ನನ್ನ ಜತೆಗೆ ಇದ್ದು ಕೆಲವರು ನಂಬಿಕೆ ದ್ರೋಹ ಕೆಲಸ ಮಾಡಿದ್ದಾರೆ. ಅದಕ್ಕೆ ಅವರನ್ನ ನಾನು ದೂರ ಇಟ್ಟಿದ್ದೀನಿ. ಯಾರು ನನ್ನ ಪರ ಕೆಲಸ ಮಾಡುತ್ತಿದ್ದಾರೋ ಅವರ ಜೊತೆ ಇದ್ದೇನೆ. ನೂರಾರು ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದಾರೆ ಅವರಿಗಾಗಿ ನಾನು ಶ್ರಮಿಸುತ್ತಿದೇನೆ " ಎಂದರು.

ನಾನು ಶಾಸಕನಾಗುವೆ ಪ್ರತಿ ಮನೆಗೂ ಭೇಟಿ ನೀಡುವೆ
ಮೇ 13 ರಂದು ನಾನು ಶಾಸಕನಾಗುತ್ತೇನೆ. ಮೇ 16ರ ನಂತರ ಕ್ಷೇತ್ರದ ಪ್ರತಿ ಮನೆಗೂ ಭೇಟಿ ಕೊಡುತ್ತೇನೆ. ನಾನು ಈಗಾಗಲೇ ಸ್ಟಾರ್‌ ಆಗಿದ್ದೇನೆ. ಜನರನ್ನು ಸ್ಟಾರ್‌ ಮಾಡಲು ನಾನು ಹೊರಟಿದ್ದೇನೆ. ನನಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಿಕ್ಕೆ ಸಿಗುತ್ತದೆ ಎಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಪ್ರದೀಪ್‌ ಈಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರದೀಪ್‌ ಈಶ್ವರ್‌ ತಮ್ಮ ವಿಶೇಷ ಪ್ರಚಾರ/ ಹೇಳಿಕೆಗಳಿಂದ ಸಾಕಷ್ಟು ಸದ್ದು ಮಾಡಿದ್ದರು.
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ