ಆ್ಯಪ್ನಗರ

ಕೆ.ಎಚ್‌.ಮುನಿಯಪ್ಪನ ಮೇಲೆ ಸಿಟ್ಟಿದೆ, ಆದರೆ ಪಕ್ಷ ಕ್ಕೆ ದ್ರೋಹ ಮಾಡಿಲ್ಲ

ಕೆ.ಎಚ್‌.ಮುನಿಯಪ್ಪ ನನಗೆ ರಾಜಕೀಯವಾಗಿ ಸಾಕಷ್ಟು ಕಿರುಕುಳ ಕೊಟ್ಟರೂ, ಕಳೆದ ಸಂಸತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಕೆ.ಎಚ್‌.ಮುನಿಯಪ್ಪ ಮೇಲೆ ನನಗೆ ಸಾಕಷ್ಟು ಸಿಟ್ಟು ಇತ್ತಾದರೂ ಮತಗಟ್ಟೆಗೆ ಹೋದಾಗ ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಕ್ಕೆ ಮತ ಹಾಕುವ ಮನಸು ಬರಲಿಲ್ಲ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

Vijaya Karnataka 22 Aug 2019, 5:00 am
ಶಿಡ್ಲಘಟ್ಟ: ಕೆ.ಎಚ್‌.ಮುನಿಯಪ್ಪ ನನಗೆ ರಾಜಕೀಯವಾಗಿ ಸಾಕಷ್ಟು ಕಿರುಕುಳ ಕೊಟ್ಟರೂ, ಕಳೆದ ಸಂಸತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಕೆ.ಎಚ್‌.ಮುನಿಯಪ್ಪ ಮೇಲೆ ನನಗೆ ಸಾಕಷ್ಟು ಸಿಟ್ಟು ಇತ್ತಾದರೂ ಮತಗಟ್ಟೆಗೆ ಹೋದಾಗ ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಕ್ಕೆ ಮತ ಹಾಕುವ ಮನಸು ಬರಲಿಲ್ಲ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
Vijaya Karnataka Web kh is angry with muniappa but has not betrayed the party
ಕೆ.ಎಚ್‌.ಮುನಿಯಪ್ಪನ ಮೇಲೆ ಸಿಟ್ಟಿದೆ, ಆದರೆ ಪಕ್ಷ ಕ್ಕೆ ದ್ರೋಹ ಮಾಡಿಲ್ಲ


ತಾಲೂಕಿನ ಕಾಕಚೊಕ್ಕಂಡಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಕಚೊಕ್ಕಂಡಹಳ್ಳಿ-ಭಕ್ತರಹಳ್ಳಿ-ಮಳಮಾಚನಹಳ್ಳಿ ಮಾರ್ಗದ ರಸ್ತೆಯನ್ನು 6.5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ಡಾಂಬರು ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆ.ಎಚ್‌.ಮುನಿಯಪ್ಪ ಅವರು ನನಗೆ ರಾಜಕೀಯವಾಗಿ ಕೊಟ್ಟ ಕಿರುಕುಳದಿಂದ ನಾನು ಸಾಕಷ್ಟು ಮಾನಸಿಕವಾಗಿ ನೋವನ್ನು ಅನುಭವಿಸಿದ್ದೇನೆ. ಯಾರ ಬಳಿಯೂ ಹೇಳಿಕೊಳ್ಳದೆ ನೊಂದಿದ್ದೇನೆ. ಈಗಲೂ ಅವರು ನನ್ನ ಎದುರಿಗೆ ಬಂದರೆ ಮುಖ ಕೊಟ್ಟು ಮಾತನಾಡದೆ ಗಂಟು ಮೂಟೆ ಕಟ್ಟಿಕೊಂಡು ಎದ್ದು ಹೋಗು ಎನ್ನುವಷ್ಟು ಸಿಟ್ಟಿದೆ. ಆದರೆ ಕಾಂಗ್ರೆಸ್‌ ಪಕ್ಷ ನನಗೆ ಬದುಕು ನೀಡಿದೆ. ರಾಜಕೀಯವಾಗಿ ನೆಲೆ ನೀಡಿದೆ. ಆ ಕಾರಣಕ್ಕೆ ನಾನು ಕೆ.ಎಚ್‌.ಮುನಿಯಪ್ಪ ಅವರ ಮುಖ ನೋಡದೆ ಪಕ್ಷ ನೋಡಿ ಮತ ಹಾಕಿದ್ದೇನೆ. ಮತದಾರರು ಬುದ್ದಿವಂತರಾಗಬೇಕಿದೆ, ಅಭಿವೃದ್ಧಿ ಪರ ನಿಲ್ಲಬೇಕು. ಯಾರೋ ಬಂದು ಹಣ ಕೊಟ್ಟರೆ ಮತ ಹಾಕುವ ಮಟ್ಟಕ್ಕೆ ಇಳಿಯಬಾರದು ಎಂದರು.

ಗುಣಮಟ್ಟದ ಕಾಮಗಾರಿ: ಅನೇಕ ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಈ ಮಾರ್ಗದ ರಸ್ತೆಗೆ 6.5 ಕೋಟಿ ರೂ.ಬಿಡುಗಡೆಯಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಯಲಿದೆ. ಗ್ರಾಮಸ್ಥರು ಈ ಬಗ್ಗೆ ಜಾಗೃತಗೊಂಡು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಮುನೇಗೌಡ, ಪಶು ಭಾಗ್ಯ ಸಮಿತಿ ಮಾಜಿ ಸದಸ್ಯ ಚಿದಾನಂದಮೂರ್ತಿ, ನಾಗಮಂಗಲ ತಮ್ಮಣ್ಣ, ಎಸ್‌ಎಫ್‌ಸಿಎಸ್‌ ಬ್ಯಾಂಕ್‌ ನಿರ್ದೇಶಕ ಮುನಿರಾಜು, ಕಾಕಚೊಕ್ಕಂಡಹಳ್ಳಿ ಮುಖಂಡರಾದ ಕಾಳಪ್ಪ, ಚಿಕ್ಕನಾಗಪ್ಪ, ನಾರಾಯಣಸ್ವಾಮಿ, ಮಂಜುನಾಥ್‌, ವೆಂಕಟೇಶ್‌, ಗುತ್ತಿಗೆದಾರ ಭಾಸ್ಕರ್‌ ನಾಯ್ಡು ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ