ಆ್ಯಪ್ನಗರ

ಕೋಚಿಮುಲ್‌ ಅಧ್ಯಕ್ಷಗಿರಿ ನನ್ನೊಬ್ಬನ ತೀರ್ಮಾನವಲ್ಲ: ಸಚಿವ ಕೃಷ್ಣಬೈರೇಗೌಡ

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬರಗಾಲ ಕಾಲು ಮುರಿದುಕೊಂಡು ಬಿದ್ದಿದೆ. ಆದರೂ ಬರವನ್ನು ಸಮರ್ಥವಾಗಿ ಎದುರಿಸಲು ಸರಕಾರ ಬದ್ಧವಾಗಿದೆ. ಅಗತ್ಯ ಯೋಜನೆಯನ್ನು ರೂಪಿಸಿ ಹಣವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Vijaya Karnataka 20 May 2019, 5:00 am
ಕೃಷ್ಣಬೈರೇಗೌಡರ ಭೇಟಿ, ಅಧ್ಯಕ್ಷ ಗಾದಿಗೆ ಸಹಕರಿಸಲು ಕೋಚಿಮುಲ್‌ ನೂತನ ನಿರ್ದೇಶಕ ಶ್ರೀನಿವಾಸ್‌ ಮನವಿ
Vijaya Karnataka Web kochimuls presidency is not my decision minister krishna birega gowda
ಕೋಚಿಮುಲ್‌ ಅಧ್ಯಕ್ಷಗಿರಿ ನನ್ನೊಬ್ಬನ ತೀರ್ಮಾನವಲ್ಲ: ಸಚಿವ ಕೃಷ್ಣಬೈರೇಗೌಡ


ವಿಕ ಸುದ್ದಿಲೋಕ ಶಿಡ್ಲಘಟ್ಟ

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬರಗಾಲ ಕಾಲು ಮುರಿದುಕೊಂಡು ಬಿದ್ದಿದೆ. ಆದರೂ ಬರವನ್ನು ಸಮರ್ಥವಾಗಿ ಎದುರಿಸಲು ಸರಕಾರ ಬದ್ಧವಾಗಿದೆ. ಅಗತ್ಯ ಯೋಜನೆಯನ್ನು ರೂಪಿಸಿ ಹಣವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಕೋಚಿಮುಲ್‌)ಕ್ಕೆ ನೂತನವಾಗಿ ಚುನಾಯಿತರಾದ ನಿರ್ದೇಶಕ ಕೆ.ಮುತ್ತುಕದಹಳ್ಳಿಯ ಆರ್‌.ಶ್ರೀವಾಸ್‌ ರಾಮಯ್ಯ ಅವರು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದ ಬಳಿಕ ಪ್ರತಿಕ್ರಿಯಿಸಿದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಹಲವು ವರ್ಷಗಳಿಂದಲೂ ಬರಗಾಲ ಎದುರಾಗುತ್ತಿದೆ. ಇದು ನೇರವಾಗಿ ರೇಷ್ಮೆ ಬೆಳೆಗಾರರು ಹಾಗೂ ಅದಕ್ಕೂ ಮಿಗಿಲಾಗಿ ಹಾಲು ಉತ್ಪಾದಕರ ಮೇಲೆ ತೊಂದರೆ ಉಂಟು ಮಾಡಿದೆ. ದನಕರುಗಳಿಗೆ ಹಸಿರು ಮೇವು ಹಾಗೂ ಕುಡಿಯುವ ನೀರನ್ನು ಒದಗಿಸುವುದೇ ಕಷ್ಟವಾಗಲಿದೆ. ಇದು ಹಾಲಿನ ಉತ್ಪಾದನೆಯ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರಿ ರೈತರ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ವಿಷಾದಿಸಿದರು.

ಹಾಗಾಗಿ ರೈತನ ಬೆನ್ನಿಗೆ ಕೋಚಿಮುಲ್‌ ನಿಲ್ಲಬೇಕಿದೆ. ಜತೆಗೆ ನಮ್ಮ ಇಲಾಖೆಯು ಅಗತ್ಯ ಎಲ್ಲ ನೆರವನ್ನು ಕೂಡ ನಿಯಮಾನುಸಾರ ನೀಡಲಾಗುವುದು ಎಂದು ಹೇಳಿದರು.

ಕೋಚಿಮುಲ್‌ ನಿರ್ದೆಶಕ ಆರ್‌.ಶ್ರೀನಿವಾಸ್‌ ಮಾತನಾಡಿ, ಕೋಚಿಮುಲ್‌ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈರೇಗೌಡರು, ಕೋಲಾರ ಚಿಕ್ಕಬಳ್ಳಾಪುರದ ಎಲ್ಲ ಶಾಸಕರು, ಸಂಸದರು, ಕೋಚಿಮುಲ್‌ ನಿರ್ದೆಶಕರು ಹಾಗೂ ಮುಖಂಡರು ಕುಳಿತು ಚರ್ಚಿಸಿ ಈ ತೀರ್ಮಾನ ಕೈಗೊಳ್ಳಬೇಕಿದೆ. ಅದು ನಾನೊಬ್ಬ ತೆಗೆದುಕೊಳ್ಳುವ ತೀರ್ಮಾನವಲ್ಲ ಎಂದರು.

ನಂತರ ಕರ್ನಾಟಕ ಹಾಲು ಮಹಾಮಂಡಳಕ್ಕೆ ನಾಮ ನಿರ್ದೇಶನ ಮಾಡುವ ಬಗ್ಗೆಯೂ ಚರ್ಚಿಸಿ ಆ ಬಗ್ಗೆ ನನ್ನಿಂದ ಆಗುವ ನೆರವು ನೀಡುವುದಾಗಿ ಹೇಳಿ ಭರವಸೆ ನೀಡಿದ್ದಾರೆ. ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಬೆಳ್ಳೂಟಿ ಸಂತೋಷ್‌, ವಿಶ್ವನಾಥ್‌, ಪ್ರಕಾಶ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ