ಆ್ಯಪ್ನಗರ

ಮಲೆನಾಡಲ್ಲಿ ಮುಂದುವರಿದ ಮಳೆ, ಚಿಕ್ಕಮಗಳೂರಿನಲ್ಲಿ 30 ಅಡಿ ಆಳಕ್ಕೆ ಕುಸಿದ ಭೂಮಿ

ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಸುಧೀರ್‌ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಭೂ ಕುಸಿತ ನಡೆದಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಭೂ ಕುಸಿತ ಹೆಚ್ಚಾಗಿದ್ದು 1 ಎಕರೆಯಷ್ಟು ಕಾಫಿ ತೋಟ ಭೂ ಕುಸಿತದಲ್ಲಿ ನಾಶವಾಗಿದೆ.

Vijaya Karnataka Web 7 Sep 2019, 3:26 pm
ಚಿಕ್ಕಮಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ತನ್ನ ರುದ್ರ ನರ್ತನ ಮುಂದುವರಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತ ನಡೆದಿರುವುದು ವರದಿಯಾಗಿವೆ.
Vijaya Karnataka Web Chikkamagaluru landslide


ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಸುಧೀರ್‌ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಭೂ ಕುಸಿತ ನಡೆದಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಭೂ ಕುಸಿತ ಹೆಚ್ಚಾಗಿದ್ದು 1 ಎಕರೆಯಷ್ಟು ಕಾಫಿ ತೋಟ ಭೂ ಕುಸಿತದಲ್ಲಿ ನಾಶವಾಗಿದೆ.

ಸುಮಾರು 30 ಅಡಿ ಕಂದಕ್ಕೆ ಮಣ್ಣ ಜಾರಿದ್ದು, ಕುಸಿದಲ್ಲೇ ಮತ್ತೆ ಮತ್ತೆ ಭೂಮಿ ಕುಸಿಯುತ್ತಿರುವುದರಿಂದ ತೋಟದ ಮಾಲಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯೂ ಮುಂದುವರಿದಿರುವುದರಿಂದ ಭೂ ಕುಸಿತದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಮೂಡಿಗೆರೆಯ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿ ಜನರು ತೋಟಗಳನ್ನು ಕಳೆದುಕೊಂಡಿದ್ದರು. ಇದೀಗ ಮತ್ತೆ ಮಳೆ ಜೋರಾಗಿದ್ದು ಮಗದೊಮ್ಮೆ ಭೂ ಕುಸಿತ ನಡೆಯುತ್ತಿರುವ ಮಲೆನಾಡಿಗರಲ್ಲಿ ಅದರಲ್ಲೂ ಮುಖ್ಯವಾಗಿ ಚಿಕ್ಕಮಗಳೂರಿಗರಲ್ಲಿ ಆತಂಕ ಹುಟ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ