ಚಿಂತಾಮಣಿ: ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಗಿಂತ ಯುವಕರೇ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಯುವಕರಿಗೆ ಅದರಿಂದ ಆಗುವ ಹಾನಿ, ತೊಂದರೆಗಳನ್ನು ಅರ್ಥಮಾಡಿಸಲು ಈ ದಿನ ಒಂದು ಪ್ರಯತ್ನವಾಗಿ ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ರಾಜೇಂದ್ರ ಹೇಳಿದರು.
ಅವರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಕೀಲರ ಸಂಘ, ಎಪಿಎಂಸಿ, ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಶ್ವತಂಬಾಕು ದಿನಾಚರಣೆ ಅಂಗವಾಗಿ ಯುವಕರಿಗೆ ಮತ್ತು ರೈತರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ತಂಬಾಕು ಸೇವನೆಯಿಂದ ಆಗುತ್ತಿರುವ ಸಾವಿನ ಸಂಖ್ಯೆಯು ಕ್ಷೀಣವಾಗಿ ಹೆಚ್ಚುತ್ತಲೇ ಇದೆ. ಸಿಗರೇಟ್ ಸೇವನೆ ಮೂಲಕ ತಮಗೆ ಕಾಯಿಲೆಯನ್ನು ತಂದುಕೊಳ್ಳುವುದಲ್ಲದೆ, ತಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕಾಯಿಲೆಗಳನ್ನು ಬರಿಸುತ್ತಾರೆ. ಹೀಗಾಗಿ ಬಹಳಷ್ಟು ಜನ ಸಾಯುತ್ತಿದ್ದಾರೆ.
ಇದನ್ನು ತಡೆಯುವ ದಿನವನ್ನು ವಿಶ್ವ ತಂಬಾಕು ನಿಷೇಧ ದಿನವನ್ನಾಗಿ ಆಚರಿಸುತ್ತಾರೆ. ಈ ದಿನವನ್ನು ಬೂದಿ ಟ್ರೇಗಳಲ್ಲಿ ಧೂಮುಗಳನ್ನು ಇಟ್ಟು ಆಚರಿಸುತ್ತಾರೆ. ತಂಬಾಕು ಹಾಗೂ ಅದರಿಂದ ತಯಾರಿಸುವ ವಸ್ತುಗಳಿಂದ ಆಗುವ ಹಾನಿ ತಡೆಗಟ್ಟಲು ಈ ದಿನ ಆಚರಿಸುವರು ಎಂದರು.
ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಹಿರಿಯವ ವಕೀಲ ಇಬ್ರಾಹಿಂ, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿ ಯಿಂದ ತಂಬಾಕು ನಿಷೇಧದ ಬಗ್ಗೆ ಚಿಂತನೆಯನ್ನು ಕೈಗೊಂಡಿತು. ತಂಬಾಕು ಸೇವನೆಯಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಆರು ಮಿಲಿಯನ್ನಷ್ಟು ಜನರು ಮರಣ ಹೊಂದುತ್ತಿದ್ದಾರೆ ಎಂದರು.
ಸರಕಾರ ಮನುಷ್ಯನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧ ಮಾಡಿದೆ. ಭಾರತ ದೇಶದಲ್ಲಿ ಹಲವು ಎನ್ಜಿಒ ಸಂಸ್ಥೆಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸಗಳನ್ನು, ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮೂಡಿಸುತ್ತಿವೆ. ಹಾಗೆಯೇ ತಂಬಾಕಿನ ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ ಕೊಡುತ್ತಿಲ್ಲ. ತಮಿಳುನಾಡಿನಲ್ಲಿ ಕ್ಯಾನ್ಸರ್ ಸಂಸ್ಥೆ ತಂಬಾಕು ನಿಯಂತ್ರಣ ತೆರೆದಿದೆ. ಇದರ ಮುಖ್ಯ ಉದ್ದೇಶವೆಂದರೆ ಒಂದು ಸಂಪೂರ್ಣ ದಿನ ಅಂದು ಘಂಟೆಗಳ ಕಾಲ ಯಾವುದೇ ರೀತಿಯ ತಂಬಾಕು ಇರುವ ವಸ್ತುಗಳನ್ನು ಸೇವಿಸದಿರುವುದು ಅಥವಾ ಉಪಯೋಗಿಸದೆ ಇರುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ಎ.ಸಾತ್ವಿಕ್, ಸಹಾಯಕ ಅಭಿಯೋಜಕ ವೇಣುಕುಮಾರ್, ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಪದಾಧಿಕಾರಿಗಳಾದ ಈಶ್ವರಗೌಡ, ಎಪಿಎಂಸಿ ಕಾರ್ಯದರ್ಶಿ ಕಿರಣ್, ಎಪಿಎಂಸಿ ನಿರ್ದೇಶಕರು, ಹಿರಿಯ ವಕೀಲರು ಮತ್ತಿತರರು ಭಾಗವಹಿಸಿದ್ದರು.
ಅವರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಕೀಲರ ಸಂಘ, ಎಪಿಎಂಸಿ, ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಶ್ವತಂಬಾಕು ದಿನಾಚರಣೆ ಅಂಗವಾಗಿ ಯುವಕರಿಗೆ ಮತ್ತು ರೈತರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ತಂಬಾಕು ಸೇವನೆಯಿಂದ ಆಗುತ್ತಿರುವ ಸಾವಿನ ಸಂಖ್ಯೆಯು ಕ್ಷೀಣವಾಗಿ ಹೆಚ್ಚುತ್ತಲೇ ಇದೆ. ಸಿಗರೇಟ್ ಸೇವನೆ ಮೂಲಕ ತಮಗೆ ಕಾಯಿಲೆಯನ್ನು ತಂದುಕೊಳ್ಳುವುದಲ್ಲದೆ, ತಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕಾಯಿಲೆಗಳನ್ನು ಬರಿಸುತ್ತಾರೆ. ಹೀಗಾಗಿ ಬಹಳಷ್ಟು ಜನ ಸಾಯುತ್ತಿದ್ದಾರೆ.
ಇದನ್ನು ತಡೆಯುವ ದಿನವನ್ನು ವಿಶ್ವ ತಂಬಾಕು ನಿಷೇಧ ದಿನವನ್ನಾಗಿ ಆಚರಿಸುತ್ತಾರೆ. ಈ ದಿನವನ್ನು ಬೂದಿ ಟ್ರೇಗಳಲ್ಲಿ ಧೂಮುಗಳನ್ನು ಇಟ್ಟು ಆಚರಿಸುತ್ತಾರೆ. ತಂಬಾಕು ಹಾಗೂ ಅದರಿಂದ ತಯಾರಿಸುವ ವಸ್ತುಗಳಿಂದ ಆಗುವ ಹಾನಿ ತಡೆಗಟ್ಟಲು ಈ ದಿನ ಆಚರಿಸುವರು ಎಂದರು.
ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಹಿರಿಯವ ವಕೀಲ ಇಬ್ರಾಹಿಂ, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿ ಯಿಂದ ತಂಬಾಕು ನಿಷೇಧದ ಬಗ್ಗೆ ಚಿಂತನೆಯನ್ನು ಕೈಗೊಂಡಿತು. ತಂಬಾಕು ಸೇವನೆಯಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಆರು ಮಿಲಿಯನ್ನಷ್ಟು ಜನರು ಮರಣ ಹೊಂದುತ್ತಿದ್ದಾರೆ ಎಂದರು.
ಸರಕಾರ ಮನುಷ್ಯನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧ ಮಾಡಿದೆ. ಭಾರತ ದೇಶದಲ್ಲಿ ಹಲವು ಎನ್ಜಿಒ ಸಂಸ್ಥೆಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸಗಳನ್ನು, ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮೂಡಿಸುತ್ತಿವೆ. ಹಾಗೆಯೇ ತಂಬಾಕಿನ ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ ಕೊಡುತ್ತಿಲ್ಲ. ತಮಿಳುನಾಡಿನಲ್ಲಿ ಕ್ಯಾನ್ಸರ್ ಸಂಸ್ಥೆ ತಂಬಾಕು ನಿಯಂತ್ರಣ ತೆರೆದಿದೆ. ಇದರ ಮುಖ್ಯ ಉದ್ದೇಶವೆಂದರೆ ಒಂದು ಸಂಪೂರ್ಣ ದಿನ ಅಂದು ಘಂಟೆಗಳ ಕಾಲ ಯಾವುದೇ ರೀತಿಯ ತಂಬಾಕು ಇರುವ ವಸ್ತುಗಳನ್ನು ಸೇವಿಸದಿರುವುದು ಅಥವಾ ಉಪಯೋಗಿಸದೆ ಇರುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ಎ.ಸಾತ್ವಿಕ್, ಸಹಾಯಕ ಅಭಿಯೋಜಕ ವೇಣುಕುಮಾರ್, ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಪದಾಧಿಕಾರಿಗಳಾದ ಈಶ್ವರಗೌಡ, ಎಪಿಎಂಸಿ ಕಾರ್ಯದರ್ಶಿ ಕಿರಣ್, ಎಪಿಎಂಸಿ ನಿರ್ದೇಶಕರು, ಹಿರಿಯ ವಕೀಲರು ಮತ್ತಿತರರು ಭಾಗವಹಿಸಿದ್ದರು.