ಟ್ಯಾಂಕರ್ ನೀರಿಗೆ ಮೊರೆ | ಜಿಲ್ಲೆಯಲ್ಲಿ ವೈನ್ ತಯಾರಿಕಾ ಘಟಕ ಸ್ಥಾಪಿಸಿ
ಕೆಂಪೇಗೌಡ ಎನ್. ವೆಂಕಟೇನಹಳ್ಳಿ ಚಿಕ್ಕಬಳ್ಳಾಪುರ
ಮುಂಗಾರು, ಹಿಂಗಾರು ವೈಫಲ್ಯಗಳ ನಡುವೆ ತಾಲೂಕಿನಲ್ಲಿ ದ್ರಾಕ್ಷಿ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರ ಬದುಕು ದುಸ್ತರವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುವುದೋ ಇಲ್ಲವೋ ಎಂಬ ಆತಂಕದಲ್ಲಿ ದ್ರಾಕ್ಷಿ ಬೆಳೆಗಾರರಿದ್ದಾರೆ.
ಜಿಲ್ಲೆ ದ್ರಾಕ್ಷಿ ಬೆಳೆಗೆ ಹೆಸರುವಾಸಿ, ಈ ಭಾಗದಲ್ಲಿ ಸೀಡ್ಲೆಸ್, ಕೃಷ್ಣ ಶರತ್ತು, ಸೊನೆಕಾ, ರೆಡ್ಗ್ಲೋಬ್, ಸುಪರ್ ಸೊನೆಕಾ, ದಿಲ್ ಕುಷ್, ಅನಾಭಿಶ್, ಕಾಬೂಲ್, ಕಪ್ಪು ದ್ರಾಕ್ಷಿ ಸೇರಿದಂತೆ ಇನ್ನೂ ನಾನಾ ತಳಿಯ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ಈಗಾಗಲೇ ಶೇ. 60ರಷ್ಟು ಆಸುಪಾಸಿನ ಬೆಳೆ ಅರ್ಧ ಫಸಲಿಗೆ ಬಂದಿದ್ದು, ಈ ಬೇಸಿಗೆಯಲ್ಲಿ ದ್ರಾಕ್ಷಿ ಬೆಳೆ ಇಳುವರಿ ಹೆಚ್ಚಳಕ್ಕೆ ನೀರುಣಿಸುವುದು ರೈತರಿಗೆ ದೊಡ್ಡ ಸವಾಲಾಗಿದೆ.
ತಾಲೂಕಿನಲ್ಲಿ 1500 ಅಡಿಯಿಂದ 1900 ಅಡಿಯವರೆಗೆ ಅಂತರ್ಜಲ ಕುಸಿತ ಕಂಡಿದೆ. ತೆರೆದ ಬಾವಿ, ಕೊಳವೆ ಬಾವಿಗಳು ಬತ್ತುತ್ತಿದ್ದು, ತೋಟಗಾರಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮುಂಬರುವ ಮಳೆಗಾಲದವರೆಗೂ ಬೆಳೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ರೈತರಲ್ಲಿ ಕಾಡಲಾರಂಭಿಸಿದೆ. ಹೀಗಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ದ್ರಾಕ್ಷಿ ಬೆಳೆಗಾರರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ವರ್ಷಕ್ಕೆ ಒಂದೇ ಬೆಳೆ ಬರುವ ಸೊನೆಕಾ ದ್ರಾಕ್ಷಿಯನ್ನು ಎರಡು ಎಕರೆಯಲ್ಲಿ 1,500 ಗಿಡ ಬೆಳೆದಿದ್ದೇವೆ. ಈ ಬಾರಿ ನಾಲ್ಕು ಲಕ್ಷ ಬಂಡವಾಳ ಹಾಕಿದ್ದೇನೆ. ದ್ರಾಕ್ಷಿ ಬೆಳೆಗೆಂದು ಮೂರು ವರ್ಷದಿಂದ 13 ಬೋರ್ವೆಲ್ ಕೊರೆಸಿದ್ದೇವೆ. ಅದರಲ್ಲಿ 3 ಬೋರ್ವೆಲ್ಗಳಲ್ಲಿ ಕೊಂಚ ನೀರು ಸಿಗುತ್ತಿದೆ. ಸಾಲದ್ದಕ್ಕೆ ಟ್ಯಾಂಕರ್ ಮೂಲಕ ದ್ರಾಕ್ಷಿಗೆ ನೀರುಣಿಸುತ್ತಿದ್ದೇವೆ ಎಂದು ತಾಲೂಕಿನ ಮಂಡಿಕಲ್ ಹೋಬಳಿಯ ಆರೂರು ಗ್ರಾಮದ ಕಾರ್ತಿಕ್ ಹೇಳುತ್ತಾರೆ.
ಚಳಿಗಾಲದಲ್ಲಿ ದ್ರಾಕ್ಷಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು, ಮಳೆಗಾಲ ದ್ರಾಕ್ಷಿ ಬೆಳೆಗೆ ಯೋಗ್ಯವಿಲ್ಲ. ಇನ್ನು ಬೇಸಿಗೆ ಕಾಲದಲ್ಲಿ ದ್ರಾಕ್ಷಿ ಹೆಚ್ಚು ಇಳುವರಿ ತೆಗೆಯಬಹುದು. ಈ ಸಮಯದಲ್ಲಿ ನೀರಿಗಾಗಿ ಎಲ್ಲಿಲ್ಲದ ಕಷ್ಟ ಎನ್ನುತ್ತಾರೆ.
ತಾಲೂಕಿನ ಅರೂರಿನ ನಿತಿನ್ ಎಂಬುವರ ತೋಟದಲ್ಲಿರುವ ಎರಡು ಎಕರೆಯಲ್ಲಿರುವ ದಿಲ್ ಕುಶ್ ತಳಿ ದ್ರಾಕ್ಷಿ ಉಳಿಸಿಕೊಳ್ಳವ ಹೋರಾಟ ಇವರದ್ದು, ತೋಟದಲ್ಲಿ ಮೂರು ಬೋರ್ವೆಲ್ಗಳು ಬತ್ತಿವೆ. ಉಳಿದ ಒಂದರಲ್ಲೇ ಕೊಂಚವೇ ನೀರು ಬರುತ್ತಿದೆ. ಇದು ಬೆಳೆಗೆ ಸಾಕಾಗದೇ ದಿನಕ್ಕೆ ಒಂದು ಟ್ಯಾಂಕರ್ ನಿರಿಗೆ 600 ರಂತೆ ನಾಲ್ಕು ಟ್ಯಾಂಕರ್ ನೀರು ಖರೀದಿಸಿ ದ್ರಾಕ್ಷಿಗೆ ನೀರು ಹಾಯಿಸುತ್ತಿದ್ದಾರೆ.
ತಾಲೂಕಿನಲ್ಲಿ ಇದು ಒಬ್ಬಿಬ್ಬರ ಸ್ಥಿತಿಯಲ್ಲ, ಬಹುತೇಕ ದ್ರಾಕ್ಷಿ ಬೆಳೆಗಾರರು ನೀರಿನ ಅಭಾವದ ಭವಿಷ್ಯ ನೆನೆದು ದ್ರಾಕ್ಷಿಗೆ ಔಷಧೋಪಚಾರ ಮಾಡುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಕೆಲವರು ಈ ಬಾರಿಯ ಚಾಟ್ನಿಯ ಸಹವಾಸಕ್ಕೆ ಹೋಗಿಲ್ಲ. ಹಲವು ವರ್ಷಗಳಿಂದ ದ್ರಾಕ್ಷಿ ಬೆಳೆಯನ್ನೇ ಬೆಳೆಯುತ್ತಿರುವುದರಿಂದ ಅವುಗಳ ರಕ್ಷಣೆಗೆ ಟ್ಯಾಂಕರ್ ಮೊರೆ ಹೋಗಿದ್ದೇವೆ ಎಂದು ಕೆಲ ದ್ರಾಕ್ಷಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.
ವೈನ್ ತಯಾರಿಕಾ ಘಟಕ ಸ್ಥಾಪಿಸಿ
ಜಿಲ್ಲೆಯಲ್ಲಿ ದ್ರಾಕ್ಷಿಯೇ ರೈತರಿಗೆ ವಾಣಿಜ್ಯ ಬೆಳೆ. ಎಷ್ಟೇ ಕಷ್ಟಪಟ್ಟು ದುಡಿದರೂ ದ್ರಾಕ್ಷಿ ಬೆಳೆಯಲ್ಲಿ ಕಷ್ಟಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಹೋದವರು ಸಮಯಕ್ಕೆ ಸರಿಯಾಗಿ ಹಣ ಸಂದಾಯ ಮಾಡುವುದಿಲ್ಲ. ನಾವು ಜೋರಾಗಿ ಮಾತನಾಡಲಿಕ್ಕೆ ನಮ್ಮ ಬಳಿ ದ್ರಾಕ್ಷಿ ಕತ್ತರಿಸಿಕೊಂಡ ನಂತರ ಅವರು ಕೊಟ್ಟು ಹೋಗುವ ಒಂದು ಬಿಳಿ ಚೀಟಿ ಬಿಟ್ಟರೆ, ಬೇರೆ ದಾಖಲೆಗಳು ಇರುವುದಿಲ್ಲ. ಆದ್ದರಿಂದ ಸರಕಾರ ಜಿಲ್ಲೆಯಲ್ಲಿ ವೈನ್ ತಯಾರಿಕಾ ಘಟಕ ಸ್ಥಾಪಿಸಿ ರೈತರಿಂದ ನೇರ ಖರೀದಿ ಮಾಡಬೇಕು ಎಂದು ಆರೂರಿನ ಕಾರ್ತಿಕ್ ಆಗ್ರಹಿಸಿದರು.
ದ್ರಾಕ್ಷಿಗಾಗಿ ಹೊಸದಾಗಿ ಕೊಳವೆ ಬಾವಿ ಕೊರೆಸುವ ಧೈರ್ಯವಿಲ್ಲ, ಕೊರೆಸಿದರೂ ನೀರು ಸಿಗಲಿದೆ ಎಂಬ ಅತ್ಮ ವಿಶ್ವಾಸ ಇಲ್ಲ. ಆದ್ದರಿಂದ ಬೆಳೆ ರಕ್ಷಣೆಗಾಗಿ ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದೇವೆ.
-ಕಿರಣ್, ಚದಲಪುರ ನಿವಾಸಿ
ಕೆಂಪೇಗೌಡ ಎನ್. ವೆಂಕಟೇನಹಳ್ಳಿ ಚಿಕ್ಕಬಳ್ಳಾಪುರ
ಜಿಲ್ಲೆ ದ್ರಾಕ್ಷಿ ಬೆಳೆಗೆ ಹೆಸರುವಾಸಿ, ಈ ಭಾಗದಲ್ಲಿ ಸೀಡ್ಲೆಸ್, ಕೃಷ್ಣ ಶರತ್ತು, ಸೊನೆಕಾ, ರೆಡ್ಗ್ಲೋಬ್, ಸುಪರ್ ಸೊನೆಕಾ, ದಿಲ್ ಕುಷ್, ಅನಾಭಿಶ್, ಕಾಬೂಲ್, ಕಪ್ಪು ದ್ರಾಕ್ಷಿ ಸೇರಿದಂತೆ ಇನ್ನೂ ನಾನಾ ತಳಿಯ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ಈಗಾಗಲೇ ಶೇ. 60ರಷ್ಟು ಆಸುಪಾಸಿನ ಬೆಳೆ ಅರ್ಧ ಫಸಲಿಗೆ ಬಂದಿದ್ದು, ಈ ಬೇಸಿಗೆಯಲ್ಲಿ ದ್ರಾಕ್ಷಿ ಬೆಳೆ ಇಳುವರಿ ಹೆಚ್ಚಳಕ್ಕೆ ನೀರುಣಿಸುವುದು ರೈತರಿಗೆ ದೊಡ್ಡ ಸವಾಲಾಗಿದೆ.
ತಾಲೂಕಿನಲ್ಲಿ 1500 ಅಡಿಯಿಂದ 1900 ಅಡಿಯವರೆಗೆ ಅಂತರ್ಜಲ ಕುಸಿತ ಕಂಡಿದೆ. ತೆರೆದ ಬಾವಿ, ಕೊಳವೆ ಬಾವಿಗಳು ಬತ್ತುತ್ತಿದ್ದು, ತೋಟಗಾರಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮುಂಬರುವ ಮಳೆಗಾಲದವರೆಗೂ ಬೆಳೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ರೈತರಲ್ಲಿ ಕಾಡಲಾರಂಭಿಸಿದೆ. ಹೀಗಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ದ್ರಾಕ್ಷಿ ಬೆಳೆಗಾರರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ವರ್ಷಕ್ಕೆ ಒಂದೇ ಬೆಳೆ ಬರುವ ಸೊನೆಕಾ ದ್ರಾಕ್ಷಿಯನ್ನು ಎರಡು ಎಕರೆಯಲ್ಲಿ 1,500 ಗಿಡ ಬೆಳೆದಿದ್ದೇವೆ. ಈ ಬಾರಿ ನಾಲ್ಕು ಲಕ್ಷ ಬಂಡವಾಳ ಹಾಕಿದ್ದೇನೆ. ದ್ರಾಕ್ಷಿ ಬೆಳೆಗೆಂದು ಮೂರು ವರ್ಷದಿಂದ 13 ಬೋರ್ವೆಲ್ ಕೊರೆಸಿದ್ದೇವೆ. ಅದರಲ್ಲಿ 3 ಬೋರ್ವೆಲ್ಗಳಲ್ಲಿ ಕೊಂಚ ನೀರು ಸಿಗುತ್ತಿದೆ. ಸಾಲದ್ದಕ್ಕೆ ಟ್ಯಾಂಕರ್ ಮೂಲಕ ದ್ರಾಕ್ಷಿಗೆ ನೀರುಣಿಸುತ್ತಿದ್ದೇವೆ ಎಂದು ತಾಲೂಕಿನ ಮಂಡಿಕಲ್ ಹೋಬಳಿಯ ಆರೂರು ಗ್ರಾಮದ ಕಾರ್ತಿಕ್ ಹೇಳುತ್ತಾರೆ.
ಚಳಿಗಾಲದಲ್ಲಿ ದ್ರಾಕ್ಷಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು, ಮಳೆಗಾಲ ದ್ರಾಕ್ಷಿ ಬೆಳೆಗೆ ಯೋಗ್ಯವಿಲ್ಲ. ಇನ್ನು ಬೇಸಿಗೆ ಕಾಲದಲ್ಲಿ ದ್ರಾಕ್ಷಿ ಹೆಚ್ಚು ಇಳುವರಿ ತೆಗೆಯಬಹುದು. ಈ ಸಮಯದಲ್ಲಿ ನೀರಿಗಾಗಿ ಎಲ್ಲಿಲ್ಲದ ಕಷ್ಟ ಎನ್ನುತ್ತಾರೆ.
ತಾಲೂಕಿನ ಅರೂರಿನ ನಿತಿನ್ ಎಂಬುವರ ತೋಟದಲ್ಲಿರುವ ಎರಡು ಎಕರೆಯಲ್ಲಿರುವ ದಿಲ್ ಕುಶ್ ತಳಿ ದ್ರಾಕ್ಷಿ ಉಳಿಸಿಕೊಳ್ಳವ ಹೋರಾಟ ಇವರದ್ದು, ತೋಟದಲ್ಲಿ ಮೂರು ಬೋರ್ವೆಲ್ಗಳು ಬತ್ತಿವೆ. ಉಳಿದ ಒಂದರಲ್ಲೇ ಕೊಂಚವೇ ನೀರು ಬರುತ್ತಿದೆ. ಇದು ಬೆಳೆಗೆ ಸಾಕಾಗದೇ ದಿನಕ್ಕೆ ಒಂದು ಟ್ಯಾಂಕರ್ ನಿರಿಗೆ 600 ರಂತೆ ನಾಲ್ಕು ಟ್ಯಾಂಕರ್ ನೀರು ಖರೀದಿಸಿ ದ್ರಾಕ್ಷಿಗೆ ನೀರು ಹಾಯಿಸುತ್ತಿದ್ದಾರೆ.
ತಾಲೂಕಿನಲ್ಲಿ ಇದು ಒಬ್ಬಿಬ್ಬರ ಸ್ಥಿತಿಯಲ್ಲ, ಬಹುತೇಕ ದ್ರಾಕ್ಷಿ ಬೆಳೆಗಾರರು ನೀರಿನ ಅಭಾವದ ಭವಿಷ್ಯ ನೆನೆದು ದ್ರಾಕ್ಷಿಗೆ ಔಷಧೋಪಚಾರ ಮಾಡುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಕೆಲವರು ಈ ಬಾರಿಯ ಚಾಟ್ನಿಯ ಸಹವಾಸಕ್ಕೆ ಹೋಗಿಲ್ಲ. ಹಲವು ವರ್ಷಗಳಿಂದ ದ್ರಾಕ್ಷಿ ಬೆಳೆಯನ್ನೇ ಬೆಳೆಯುತ್ತಿರುವುದರಿಂದ ಅವುಗಳ ರಕ್ಷಣೆಗೆ ಟ್ಯಾಂಕರ್ ಮೊರೆ ಹೋಗಿದ್ದೇವೆ ಎಂದು ಕೆಲ ದ್ರಾಕ್ಷಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.
ವೈನ್ ತಯಾರಿಕಾ ಘಟಕ ಸ್ಥಾಪಿಸಿ
ಜಿಲ್ಲೆಯಲ್ಲಿ ದ್ರಾಕ್ಷಿಯೇ ರೈತರಿಗೆ ವಾಣಿಜ್ಯ ಬೆಳೆ. ಎಷ್ಟೇ ಕಷ್ಟಪಟ್ಟು ದುಡಿದರೂ ದ್ರಾಕ್ಷಿ ಬೆಳೆಯಲ್ಲಿ ಕಷ್ಟಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಹೋದವರು ಸಮಯಕ್ಕೆ ಸರಿಯಾಗಿ ಹಣ ಸಂದಾಯ ಮಾಡುವುದಿಲ್ಲ. ನಾವು ಜೋರಾಗಿ ಮಾತನಾಡಲಿಕ್ಕೆ ನಮ್ಮ ಬಳಿ ದ್ರಾಕ್ಷಿ ಕತ್ತರಿಸಿಕೊಂಡ ನಂತರ ಅವರು ಕೊಟ್ಟು ಹೋಗುವ ಒಂದು ಬಿಳಿ ಚೀಟಿ ಬಿಟ್ಟರೆ, ಬೇರೆ ದಾಖಲೆಗಳು ಇರುವುದಿಲ್ಲ. ಆದ್ದರಿಂದ ಸರಕಾರ ಜಿಲ್ಲೆಯಲ್ಲಿ ವೈನ್ ತಯಾರಿಕಾ ಘಟಕ ಸ್ಥಾಪಿಸಿ ರೈತರಿಂದ ನೇರ ಖರೀದಿ ಮಾಡಬೇಕು ಎಂದು ಆರೂರಿನ ಕಾರ್ತಿಕ್ ಆಗ್ರಹಿಸಿದರು.
ದ್ರಾಕ್ಷಿಗಾಗಿ ಹೊಸದಾಗಿ ಕೊಳವೆ ಬಾವಿ ಕೊರೆಸುವ ಧೈರ್ಯವಿಲ್ಲ, ಕೊರೆಸಿದರೂ ನೀರು ಸಿಗಲಿದೆ ಎಂಬ ಅತ್ಮ ವಿಶ್ವಾಸ ಇಲ್ಲ. ಆದ್ದರಿಂದ ಬೆಳೆ ರಕ್ಷಣೆಗಾಗಿ ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದೇವೆ.
-ಕಿರಣ್, ಚದಲಪುರ ನಿವಾಸಿ