ಆ್ಯಪ್ನಗರ

ಗುಟ್ಕಾ ದರೋಡೆಗೆ ಲಾರಿ ಚಾಲಕನ ಬರ್ಬರ ಹತ್ಯೆ

ತಾಲೂಕು ಮೂಲದ ಲಾರಿ ಚಾಲಕನನ್ನು ದರೋಡೆಕೋರರು ಹತ್ಯೆಗೈದು ಆತ ಸಾಗಿಸುತ್ತಿದ್ದ ಕೋಟ್ಯಾಂತರ ಮೌಲ್ಯದ ಗುಟ್ಕಾ ಮಾಲನ್ನು ದೋಚಿ ಪರಾರಿಯಾಗಿರುವ ಘಟನೆ ಆಂಧ್ರದ ಅನಂತಪುರ ಜಿಲ್ಲೆ ಮಾಮಿಲಪಲ್ಲಿ ಗ್ರಾಮದ ಬಳಿ ರಾಷ್ಟ್ರಿಯ ಹೆದ್ದಾರಿ 7ರಲ್ಲಿ ನಡೆದಿದ್ದು, ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

Vijaya Karnataka 18 Dec 2018, 5:00 am
ಗುಟ್ಕಾ ಮಾಲಿನ ದರೋಡೆಗೆ ಲಾರಿ ಚಾಲಕನ ಬರ್ಬರ ಹತ್ಯೆ
Vijaya Karnataka Web lorry drivers assassination for gutka robbery
ಗುಟ್ಕಾ ದರೋಡೆಗೆ ಲಾರಿ ಚಾಲಕನ ಬರ್ಬರ ಹತ್ಯೆ

ಗುಡಿಬಂಡೆ:
ತಾಲೂಕು ಮೂಲದ ಲಾರಿ ಚಾಲಕನನ್ನು ದರೋಡೆಕೋರರು ಹತ್ಯೆಗೈದು ಆತ ಸಾಗಿಸುತ್ತಿದ್ದ ಕೋಟ್ಯಾಂತರ ಮೌಲ್ಯದ ಗುಟ್ಕಾ ಮಾಲನ್ನು ದೋಚಿ ಪರಾರಿಯಾಗಿರುವ ಘಟನೆ ಆಂಧ್ರದ ಅನಂತಪುರ ಜಿಲ್ಲೆ ಮಾಮಿಲಪಲ್ಲಿ ಗ್ರಾಮದ ಬಳಿ ರಾಷ್ಟ್ರಿಯ ಹೆದ್ದಾರಿ 7ರಲ್ಲಿ ನಡೆದಿದ್ದು, ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

ಕೊಲೆಯಾದ ಮೃತ ಚಾಲಕನನ್ನು ತಾಲೂಕಿನ ರಸೂಲ್‌(35) ಎಂದು ತಿಳಿದುಬಂದಿದೆ. ಬೆಂಗಳೂರಿನ ಯಶವಂತಪುರದಿಂದ ಹೈದ್ರಾಬಾದ್‌ಗೆ ಗುಟ್ಕಾ ತುಂಬಿಕೊಂಡು ಹೊರಟಿದ್ದ ಲಾರಿಯನ್ನ ಹಿಂಬಾಲಿಸಿದ ದರೋಡೆಕೋರರು ಮಾಮಿಲಪಲ್ಲಿ ಬಳಿ ಲಾರಿಯನ್ನು ಅಡ್ಡಗಟ್ಟಿ , ಲಾರಿಯಲ್ಲಿದ್ದ ಲಾರಿ ಚಾಲಕನನ್ನು ಕೈಕಾಲು ಕಟ್ಟಿ ಬರ್ಭರವಾಗಿ ಕೊಲೆ ಮಾಡಿ ಚಾಲಕನ ಶವವನ್ನು ರಸ್ತೆ ಪಕ್ಕದ ಮುಳ್ಳಿನ ಪೊದೆಗಳ ಮಧ್ಯೆ ಬಿಸಾಡಿಸದ್ದಾರೆ. ಬಳಿಕ 3 ಕೋಟಿ ಮೌಲ್ಯದ ಆರ್‌.ಎಂ.ಡಿ ಪಾನ್‌ ಮಸಾಲ ಗುಟ್ಕಾ ಮಾಲನ್ನು ದೋÜಚಿ ಪರಾರಿಯಾಗಿದ್ದಾರೆ.ಘಟನೆ ಸಂಬಂಧ ಆಂಧ್ರದ ಕನಗಾನಪಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ರಸೂಲ್‌ ಶವವನ್ನು ಧರ್ಮಾವರಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಆತನ ಸ್ವ ಗ್ರಾಮ ಬೀಚಗಾನಹಳ್ಳಿಗೆ ರವಾನಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆತನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಕೊಲೆಗಾರರನ್ನು ಕೂಡಲೇ ಬಂಧಿಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಲಾರಿ ಮಾಲಿಕರ ಸಂಘ ಅಧ್ಯಕ್ಷ ಮೇಹಬೂಬ್‌ ಬಾಷ, ಉಪಾಧ್ಯಕ್ಷ ಜಿ.ವಿ. ವೆಂಕಟೇಶ್‌, ಉಪಾಧ್ಯಕ್ಷ ಹಾಗೂ ಲಾರಿ ಮಾಲಿಕರ ಸಂಘದವರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ