ಆ್ಯಪ್ನಗರ

45 ಸಾವಿರ ಕೋಟಿ ಸಾಲಮನ್ನಾ ಗ್ಯಾರಂಟಿ: ಶಿವಶಂಕರ ರೆಡ್ಡಿ

ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ. ಮುಂದಿನ ನಾಲ್ಕು ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ಸಾಲ ಗ್ಯಾರಂಟಿಯಾಗಿ ಮನ್ನಾ ಆಗಲಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಭರವಸೆ ನೀಡಿದರು.

Vijaya Karnataka Web 9 Aug 2018, 7:47 pm
ಚಿಕ್ಕಬಳ್ಳಾಪುರ: ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ. ಮುಂದಿನ ನಾಲ್ಕು ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ಸಾಲ ಗ್ಯಾರಂಟಿಯಾಗಿ ಮನ್ನಾ ಆಗಲಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಭರವಸೆ ನೀಡಿದರು.
Vijaya Karnataka Web N H Shivashanakara Reddy


ಜಿಲ್ಲಾ ಪಂಚಾಯತಿಯ ಸರ್ ಎಂ.ವಿ. ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿ.ಪಂ. ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ರಾಜ್ಯ ಮಾಡದಿರುವಂತಹ 45 ಸಾವಿರ ಕೋಟಿ ರೂ., ರೈತರ ಸಾಲ ಮನ್ನಾವನ್ನು ಕರ್ನಾಟಕ ಮಾಡಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಯಾವುದೆ ಗೊಂದಲ ಬೇಡ. ಮುಂದಿನ ನಾಲ್ಕು ವರ್ಷಗಳಲ್ಲಿ 45 ಸಾವಿರ ಕೋಟಿ ರೂ., ಸಾಲ ಮನ್ನಾ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿವರ್ಷ ಹತ್ತೂವರೆ ಸಾವಿರ ಕೋಟಿ ರೂ., ಸಾಲ ಮನ್ನಾ ಆಗಲಿದೆ. ಬಜೆಟ್ ಸಂಚಿತ ನಿಧಿಯಿಂದ ಬ್ಯಾಂಕ್‌ಗಳಿಗೆ ಹಣ ಜಮೆ ಆಗಲಿದೆ. ಇನ್ನೂ ಈ ಬಾರಿಯೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರದ ಛಾಯೆಇದೆ. ನಿರೀಕ್ಷೆಯಷ್ಟು ಮಳೆ-ಬೆಳೆ ಆಗಿಲ್ಲ. ಅಧಿಕಾರಿಗಳು ಕೃಷಿ ಅಧ್ಯಯನ ನಡೆಯುತ್ತಿದ್ದು, 15 ದಿನಗಳಲ್ಲಿ ಬೆಳೆನಷ್ಟ ವರದಿ ಬರಲಿದೆ. ನಂತರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರೈತರಿಗೆ ಅಭಯ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ