ಆ್ಯಪ್ನಗರ

ನೇಣಿಗೆ ತಾಯಿ ಬಲಿ, ನೊಂದ ಮಗನೂ ಆತ್ಮಹತ್ಯೆ ಯತ್ನ

ತಾಯಿಯ ಸಾವಿಂದ ನೊಂದ ಮಗನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Vijaya Karnataka 10 Sep 2019, 7:32 am
ಶಿಡ್ಲಘಟ್ಟ: ಮಹಿಳೆಯೊಬ್ಬರು ಮನೆಯಲ್ಲಿನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಂಬದಹಳ್ಳಿಯಲ್ಲಿಸೋಮವಾರ ನಡೆದಿದೆ. ಪ್ರಮೀಳ (33) ಮೃತರು.
Vijaya Karnataka Web Suicide Hang


ಚಿಕ್ಕಜಾಲ ಹೋಬಳಿ ಗಡೇನಹಳ್ಳಿಯ ಪ್ರಮೀಳ ಅವರನ್ನು 15 ವರ್ಷಗಳ ಹಿಂದೆ ತಾಲೂಕಿನ ಕಂಬದಹಳ್ಳಿಯ ಮಹೇಶ್‌ ಕುಮಾರ್‌(38) ಮದುವೆಯಾಗಿದ್ದರು. ದಂಪತಿಗೆ 14 ವರ್ಷದ ಪುತ್ರ ಶಶಾಂಕ್‌ ಇದ್ದಾನೆ. ತಾಯಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಕ್ಕೆ ನೊಂದ ಪುತ್ರ ಶಶಾಂಕ್‌ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ.

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ನಂತರ ಮೃತಳ ಗಂಡ ಮಹೇಶ್‌ ಕುಮಾರ್‌, ಅತ್ತೆ ಮುನಿತಾಯಮ್ಮ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಸಿಪಿಐ ಜೆ.ಎನ್‌.ಆನಂದ್‌ ಕುಮಾರ್‌, ಗ್ರಾಮಾಂತರ ಠಾಣೆಯ ಎಸ್‌ಐ ಹರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಳ ಶವ ಪರೀಕ್ಷೆಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ