ವಿಕ ಸುದ್ದಿಲೋಕ ಚಿಂತಾಮಣಿ ಗ್ರಾಮಾಂತರ
2ನೇ ತರಗತಿಯ ಪುಟ್ಟ ಬಾಲಕಿಗೆ ಶಿಕ್ಷ ಕನೊಬ್ಬ ಕೋಲಿನಿಂದ ಮೈತುಂಬಾ ಬಾಸುಂಡೆ ಬರುವ ಹಾಗೆ ಹೊಡೆದು ಗಾಯಗೊಳಿಸಿದ್ದಾನೆ. ಮಗು ಮಗ್ಗಿ ಹೇಳಲಿಲ್ಲ ಎಂಬುದೇ ಹೊಡೆಯಲು ಕಾರಣ. ಇಂಥ ಅಮಾನುಷ ಘಟನೆ ಯರ್ರಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ತಾಲೂಕಿನ ಮುರುಗಮಲ್ಲ ಹೊಬಳಿ ಯರ್ರಕೋಟೆ ಗ್ರಾಮದ ನಿವಾಸಿಯಾದ ಹರೀಶ್ ಅವರ ಮಗಳು ರಂಜಿನಿ (7) ಯರ್ರಕೋಟೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ.
ಮೃಗದಂತೆ ವರ್ತಿಸಿರುವ ಶಿಕ್ಷ ಕ: ಈ ಶಾಲೆಯ ಶಿಕ್ಷ ಕನಾಗಿರುವ ಶ್ರೀನಿವಾಸ್ ಮಂಗಳವಾರ ರಂಜನಿಗೆ ಮಗ್ಗಿ ಹೇಳುವಂತೆ ತಿಳಿಸಿದ್ದಾನೆ. ಬಾಲಕಿ ಸರಿಯಾಗಿ ಮಗ್ಗಿ ಹೇಳದ ಕಾರಣ, ಶಿಕ್ಷ ಕ ಮಾನವಿಯತೆ ಮರೆತು ಪುಟ್ಟ ಬಾಲಕಿ ಎಂದೂ ನೋಡದೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಬಾಲಕಿಗೆ ಹೊಡೆದು ಮೈಯೆಲ್ಲಾ ಬಾಸುಂಡೆ ಬರಿಸಿದ್ದಾನೆ. ಶಿಕ್ಷ ಕ ಮೃಗದಂತೆ ವರ್ತಿಸಿ ಬಾಲಕೀಯ ಬಲಗೈ, ಎಡಗೈ, ಬೆನ್ನಿನ ಮೇಲೆ, ಭುಜದ ಹಿಂಭಾಗ, ಬಲ ತೊಡೆಗೆ ಕೋಲಿನಿಂದ ಹೊಡೆದ ಪರಿಣಾಮ ಕೆಲವೆಡೆ ರಕ್ತ ಹೆಪ್ಪುಗಟ್ಟಿದೆ.
ಮನೆಯಲ್ಲಿ ಹೇಳಿದರೆ ಮತ್ತೆ ಹೊಡೆಯುವುದಾಗಿ ಶಿಕ್ಷ ಕನ ಬೇದರಿಕೆ: ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಮತ್ತೆ ಹೊಡೆಯುವುದಾಗಿ ಬಾಲಕಿಗೆ ಶಿಕ್ಷ ಕ ಬೇದರಿಕೆ ಹಾಕಿದ್ದಾನೆ. ಇದರಿಂದ ಮಗು ಅಪ್ಪ, ಅಮ್ಮನ ಬಳಿ ಹೇಳಿಲ್ಲ. ಆದರೆ, ಮಧ್ಯರಾತ್ರಿ ಮನೆಯಲ್ಲಿ ಬಾಲಕಿಗೆ ಜ್ವರಬಂದು ಹೊರಳಾಡುತ್ತಿರುವುದನ್ನು ಕಂಡ ಪೋಷಕರು ಮೈಮೇಲೆ ನೋಡಿದಾಗ ರಕ್ತ ಹೆಪ್ಪುಗಟ್ಟಿದ ಗಾಯಗಳನ್ನು ಕಂಡಿದ್ದಾರೆ. ಆಗ ಮಗಳನ್ನು ವಿಚಾರಿಸಿದಾಗ ಬಾಲಕಿ ತನ್ನ ಮೇಷ್ಟ್ರು ಹೋಡೆದ ವಿಷಯವನ್ನು ತಿಳಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಚಿಂತಾಮಣಿ ಸಾರ್ವಜನಿಕರ ಆಸ್ಪತ್ರೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮಗ್ಗಿ ಹೇಳದಿರುವುದಕ್ಕೆ ಪುಟ್ಟ ಬಾಲಕಿಯನ್ನು ಹೊಡೆದು ಗಂಬೀರವಾಗಿ ಗಾಯಗೊಳೀಸಿರುವ ಶಿಕ್ಷ ಕ ಶ್ರೀನಿವಾಸ್ ವಿರುದ್ಧ ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಗೆ ದೂರು ನೀಡಿರುವುದಲ್ಲದೇ, ಬಟ್ಟಹಳ್ಳಿ ಗ್ರಾಮಾಂತರ ಪೊಲೀಸರಿಗೂ ಶಿಕ್ಷ ಕನ ವಿರುದ್ಧ ಕ್ರಮ ಜರಿಗಿಸುವಂತೆ ಬಾಲಕಿಯ ಪೊಷಕರು ದೂರು ನೀಡಿದ್ದಾರೆ.
-------
ಎರಡನೇ ತರಗತಿಯ ಬಾಲಕಿಯನ್ನು ಯರ್ರಕೋಟೇ ಶಾಲೆಯ ಶಿಕ್ಷ ಕ ಶ್ರೀನಿವಾಸ್ ಬಾಸುಂಡೆ ಬರುವ ಹಾಗೆ ಹೊಡೆದಿರುವ ವಿಷಯ ನನ್ನ ಗಮನಕ್ಕೆ ಬಂದಿದ್ದು, ಪರಿಶಿಲನೇ ಮಾಡಿ ಘಟನೆಗೆ ಕಾರಣರಾಗಿರುವ ಶಿಕ್ಷ ಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.
-ನರೇಂದ್ರ ಕುಮಾರ್. ಕ್ಷೇತ್ರ ಶಿಕ್ಷ ಣಾಧಿಕಾರಿ ಚಿಂತಾಮಣಿ
ಪರೀಕ್ಷೆಗಳು ಹತ್ತಿರ ಬರುತ್ತಿರುವ ಕಾರಣ ಬಾಲಕಿಗೆ ಶಾಲೆಯಲ್ಲಿ ಮಗ್ಗಿ ಬರೆಯುವಂತೆ ತಿಳಿಸಿದ್ದೆ, ಆದರೆ ಮಗು ಮಗ್ಗಿ ಸರಿಯಾಗಿ ಬರೆಯುತ್ತಿರಲಿಲ್ಲ, ನಾನು ಯಾವತ್ತೂ ಯಾವುದೇ ಮಗುವನ್ನು ಶಾಲೆಯಲ್ಲಿ ಹೊಡೆಯುತ್ತಿರಲಿಲ್ಲ, ಮಂಗಳವಾರ ನನ್ನ ಗ್ರಹಚಾರ ಸರಿಯಿಲ್ಲದ ಕಾರಣ, ಈ ರೀತಿಯ ಘಟನೆ ನಡೆದಿದ್ದು, ನನಗೂ ನೋವಾಗಿದೆ.
-ಶ್ರೀನಿವಾಸ್, ಬಾಲಕಿಯನ್ನು ಹೊಡೆದ ಯರ್ರಕೊಟೆ ಶಾಲೆಯ ಶಿಕ್ಷಕ
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕಳುಹಿಸಲು ಹಿಂದೇಟು ಹಾಕುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮೂರು ಸರಕಾರಿ ಶಾಲೆಯನ್ನು ಮುಚ್ಚಬಾರದೆಂಬ ಉದ್ದೇಶದಿಂದ ನಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಿದ್ದೇವೆ. ಆದರೆ ಸರಕಾರಿ ಶಾಲೆಯಲ್ಲಿ ಶಿಕ್ಷ ಕ ಮೃಗಗಳಂತೆ ವರ್ತನೆ ಮಾಡಿ ನನ್ನ ಮಗಳಿಗೆ ಹೊಡೆದಿರುವುದು ಬಹಳ ನೋವು ತಂದಿದೆ.
-ಹರೀಶ್ ಬಾಲಕಿಯ ತಂದೆ ಯರ್ರಕೊಟೆ
2ನೇ ತರಗತಿಯ ಪುಟ್ಟ ಬಾಲಕಿಗೆ ಶಿಕ್ಷ ಕನೊಬ್ಬ ಕೋಲಿನಿಂದ ಮೈತುಂಬಾ ಬಾಸುಂಡೆ
ತಾಲೂಕಿನ ಮುರುಗಮಲ್ಲ ಹೊಬಳಿ ಯರ್ರಕೋಟೆ ಗ್ರಾಮದ ನಿವಾಸಿಯಾದ ಹರೀಶ್ ಅವರ ಮಗಳು ರಂಜಿನಿ (7) ಯರ್ರಕೋಟೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ.
ಮೃಗದಂತೆ ವರ್ತಿಸಿರುವ ಶಿಕ್ಷ ಕ: ಈ ಶಾಲೆಯ ಶಿಕ್ಷ ಕನಾಗಿರುವ ಶ್ರೀನಿವಾಸ್ ಮಂಗಳವಾರ ರಂಜನಿಗೆ ಮಗ್ಗಿ ಹೇಳುವಂತೆ ತಿಳಿಸಿದ್ದಾನೆ. ಬಾಲಕಿ ಸರಿಯಾಗಿ ಮಗ್ಗಿ ಹೇಳದ ಕಾರಣ, ಶಿಕ್ಷ ಕ ಮಾನವಿಯತೆ ಮರೆತು ಪುಟ್ಟ ಬಾಲಕಿ ಎಂದೂ ನೋಡದೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಬಾಲಕಿಗೆ ಹೊಡೆದು ಮೈಯೆಲ್ಲಾ ಬಾಸುಂಡೆ ಬರಿಸಿದ್ದಾನೆ. ಶಿಕ್ಷ ಕ ಮೃಗದಂತೆ ವರ್ತಿಸಿ ಬಾಲಕೀಯ ಬಲಗೈ, ಎಡಗೈ, ಬೆನ್ನಿನ ಮೇಲೆ, ಭುಜದ ಹಿಂಭಾಗ, ಬಲ ತೊಡೆಗೆ ಕೋಲಿನಿಂದ ಹೊಡೆದ ಪರಿಣಾಮ ಕೆಲವೆಡೆ ರಕ್ತ ಹೆಪ್ಪುಗಟ್ಟಿದೆ.
ಮನೆಯಲ್ಲಿ ಹೇಳಿದರೆ ಮತ್ತೆ ಹೊಡೆಯುವುದಾಗಿ ಶಿಕ್ಷ ಕನ ಬೇದರಿಕೆ: ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಮತ್ತೆ ಹೊಡೆಯುವುದಾಗಿ ಬಾಲಕಿಗೆ ಶಿಕ್ಷ ಕ ಬೇದರಿಕೆ ಹಾಕಿದ್ದಾನೆ. ಇದರಿಂದ ಮಗು ಅಪ್ಪ, ಅಮ್ಮನ ಬಳಿ ಹೇಳಿಲ್ಲ. ಆದರೆ, ಮಧ್ಯರಾತ್ರಿ ಮನೆಯಲ್ಲಿ ಬಾಲಕಿಗೆ ಜ್ವರಬಂದು ಹೊರಳಾಡುತ್ತಿರುವುದನ್ನು ಕಂಡ ಪೋಷಕರು ಮೈಮೇಲೆ ನೋಡಿದಾಗ ರಕ್ತ ಹೆಪ್ಪುಗಟ್ಟಿದ ಗಾಯಗಳನ್ನು ಕಂಡಿದ್ದಾರೆ. ಆಗ ಮಗಳನ್ನು ವಿಚಾರಿಸಿದಾಗ ಬಾಲಕಿ ತನ್ನ ಮೇಷ್ಟ್ರು ಹೋಡೆದ ವಿಷಯವನ್ನು ತಿಳಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಚಿಂತಾಮಣಿ ಸಾರ್ವಜನಿಕರ ಆಸ್ಪತ್ರೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮಗ್ಗಿ ಹೇಳದಿರುವುದಕ್ಕೆ ಪುಟ್ಟ ಬಾಲಕಿಯನ್ನು ಹೊಡೆದು ಗಂಬೀರವಾಗಿ ಗಾಯಗೊಳೀಸಿರುವ ಶಿಕ್ಷ ಕ ಶ್ರೀನಿವಾಸ್ ವಿರುದ್ಧ ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಗೆ ದೂರು ನೀಡಿರುವುದಲ್ಲದೇ, ಬಟ್ಟಹಳ್ಳಿ ಗ್ರಾಮಾಂತರ ಪೊಲೀಸರಿಗೂ ಶಿಕ್ಷ ಕನ ವಿರುದ್ಧ ಕ್ರಮ ಜರಿಗಿಸುವಂತೆ ಬಾಲಕಿಯ ಪೊಷಕರು ದೂರು ನೀಡಿದ್ದಾರೆ.
-------
ಎರಡನೇ ತರಗತಿಯ ಬಾಲಕಿಯನ್ನು ಯರ್ರಕೋಟೇ ಶಾಲೆಯ ಶಿಕ್ಷ ಕ ಶ್ರೀನಿವಾಸ್ ಬಾಸುಂಡೆ ಬರುವ ಹಾಗೆ ಹೊಡೆದಿರುವ ವಿಷಯ ನನ್ನ ಗಮನಕ್ಕೆ ಬಂದಿದ್ದು, ಪರಿಶಿಲನೇ ಮಾಡಿ ಘಟನೆಗೆ ಕಾರಣರಾಗಿರುವ ಶಿಕ್ಷ ಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.
-ನರೇಂದ್ರ ಕುಮಾರ್. ಕ್ಷೇತ್ರ ಶಿಕ್ಷ ಣಾಧಿಕಾರಿ ಚಿಂತಾಮಣಿ
ಪರೀಕ್ಷೆಗಳು ಹತ್ತಿರ ಬರುತ್ತಿರುವ ಕಾರಣ ಬಾಲಕಿಗೆ ಶಾಲೆಯಲ್ಲಿ ಮಗ್ಗಿ ಬರೆಯುವಂತೆ ತಿಳಿಸಿದ್ದೆ, ಆದರೆ ಮಗು ಮಗ್ಗಿ ಸರಿಯಾಗಿ ಬರೆಯುತ್ತಿರಲಿಲ್ಲ, ನಾನು ಯಾವತ್ತೂ ಯಾವುದೇ ಮಗುವನ್ನು ಶಾಲೆಯಲ್ಲಿ ಹೊಡೆಯುತ್ತಿರಲಿಲ್ಲ, ಮಂಗಳವಾರ ನನ್ನ ಗ್ರಹಚಾರ ಸರಿಯಿಲ್ಲದ ಕಾರಣ, ಈ ರೀತಿಯ ಘಟನೆ ನಡೆದಿದ್ದು, ನನಗೂ ನೋವಾಗಿದೆ.
-ಶ್ರೀನಿವಾಸ್, ಬಾಲಕಿಯನ್ನು ಹೊಡೆದ ಯರ್ರಕೊಟೆ ಶಾಲೆಯ ಶಿಕ್ಷಕ
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕಳುಹಿಸಲು ಹಿಂದೇಟು ಹಾಕುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮೂರು ಸರಕಾರಿ ಶಾಲೆಯನ್ನು ಮುಚ್ಚಬಾರದೆಂಬ ಉದ್ದೇಶದಿಂದ ನಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಿದ್ದೇವೆ. ಆದರೆ ಸರಕಾರಿ ಶಾಲೆಯಲ್ಲಿ ಶಿಕ್ಷ ಕ ಮೃಗಗಳಂತೆ ವರ್ತನೆ ಮಾಡಿ ನನ್ನ ಮಗಳಿಗೆ ಹೊಡೆದಿರುವುದು ಬಹಳ ನೋವು ತಂದಿದೆ.
-ಹರೀಶ್ ಬಾಲಕಿಯ ತಂದೆ ಯರ್ರಕೊಟೆ