ಆ್ಯಪ್ನಗರ

ಚಿಕ್ಕಬಳ್ಳಾಪುರ: ಲಘು ಭೂಕಂಪನ ಕೇವಲ ವದಂತಿ

ಬೆಂಗಳೂರಿನ ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಸ್ಥೆ ಈಗಾಗಲೇ ಮಾಹಿತಿ ಕಲೆ ಹಾಕಿದ್ದು, ಮಂಗಳವಾರ ರಾತ್ರಿ 9 ಗಂಟೆ ಸುಮಾರಿನ ಅವಧಿಯಲ್ಲಿ ಭೂಕಂಪನ ಸಂಭವಿಸಿರುವ ಬಗ್ಗೆ ಯಾವುದೇ ಸಂಕೇತಗಳು ವರದಿಯಾಗಿರುವುದಿಲ್ಲ.

Vijaya Karnataka 10 Nov 2021, 11:40 pm
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಕೇಳಿಸಿದೆ ಎನ್ನಲಾದ ಜೋರಾದ ಶಬ್ದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿಗಳು ಬಂದಿದ್ದು, ಜಿಲ್ಲೆಯ ಜನತೆ ಆತಂಕ ಪಡಬೇಕಾದ ಯಾವುದೇ ಅಂಶ ವರದಿಯಲ್ಲಿ ಇಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌. ಲತಾ ಸ್ಪಷ್ಟಪಡಿಸಿದ್ದಾರೆ.
Vijaya Karnataka Web ಜಿಲ್ಲಾಧಿಕಾರಿ ಪರಿಶೀಲನೆ
ಜಿಲ್ಲಾಧಿಕಾರಿ ಪರಿಶೀಲನೆ


ಭೂಕಂಪನ ಮಾಪನ ಕೇಂದ್ರಗಳಿಂದ ಅಂಕಿ ಅಂಶಗಳನ್ನು ಸಮಗ್ರವಾಗಿ ಪಡೆದು ತಜ್ಞರಿಂದ ವಿಶ್ಲೇಷಣೆಗೆ ಒಳಪಡಿಸಿ ವರದಿ ಪಡೆಯಲಾಗಿದ್ದು, ಈ ಭಾಗದಲ್ಲಿಯಾವುದೇ ಲಘು ಭೂಕಂಪನ ಸಂಭವಿಸಿರುವ ಕುರಿತು ಯಾವುದೇ ಸಂಕೇತಗಳು ದಾಖಲಾಗಿರುವುದಿಲ್ಲಎಂದು ಹೇಳಿದ್ದಾರೆ.

ಭೂಮಿ ಕಂಪಿಸಿದ ಮಿಟ್ಟಹಳ್ಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬೆಂಗಳೂರಿನ ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಸ್ಥೆ ಈಗಾಗಲೇ ಮಾಹಿತಿ ಕಲೆ ಹಾಕಿದ್ದು, ಮಂಗಳವಾರ ರಾತ್ರಿ 9 ಗಂಟೆ ಸುಮಾರಿನ ಅವಧಿಯಲ್ಲಿ ಭೂಕಂಪನ ಸಂಭವಿಸಿರುವ ಬಗ್ಗೆ ಯಾವುದೇ ಸಂಕೇತಗಳು ವರದಿಯಾಗಿರುವುದಿಲ್ಲ. ಜಿಲ್ಲೆಯ ಯಾವುದೇ ಭಾಗದಲ್ಲಿ ಜೋರಾದ ಶಬ್ದ ಕೇಳಿಸಿದೆ ಎನ್ನುವ ಬಗ್ಗೆ ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ ಹಾಗೂ ಲಘು ಭೂಕಂಪನದ ಕುರಿತು ಹರಿದಾಡುತ್ತಿರುವುದು ಕೇವಲ ವದಂತಿ ಅಷ್ಟೇ ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ಮಿಟ್ಟಹಳ್ಳಿ ಸುತ್ತಮುತ್ತ ಲಘು ಭೂಕಂಪನ; ಆತಂಕದಲ್ಲೇ ರಾತ್ರಿಯಿಡಿ ಗ್ರಾಮಸ್ಥರ ಜಾಗರಣೆ

ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಪ್ರದೇಶದ ಚಟುವಟಿಕೆಗಳ ಮೇಲೆ ನಿರಂತರವಾಗಿ ವಿಶೇಷ ನಿಗಾವಹಿಸಿರುತ್ತಾರೆ. ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಕಂಪನ ಸಂಭವಿಸಿದ ಕೂಡಲೇ ಸಂಬಂಧ ಪಟ್ಟ ಸಕ್ಷಮ ಕೇಂದ್ರಗಳಿಂದ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಆ ಶಬ್ದ ಯಾವುದು?

ಭೂಕಂಪನ ಅಲ್ಲ ಎಂದಾದರೆ ಹಲವು ಬಾರಿ ಬಂದ ಶಬ್ದ ಯಾವುದು ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಕಲ್ಲು ಗಣಿಗಾರಿಕೆಗಳಿಂದ ಏನಾದರೂ ಶಬ್ದ ಬಂದಿದೆಯಾ ಎಂಬ ಪ್ರಶ್ನೆ ಉದ್ಬವಿಸುತ್ತೆ. ಆದರೆ ಇದು ಏರ್‌ ಬ್ಲಾಸ್ಟ್‌ ಎಂದು ಕೆಲವು ಭೂ ವಿಜ್ಞಾನಿಗಳು ಹೇಳುತ್ತಾರೆ.

ಭೂಮಿ ಕೆಳ ಪದರಗಳಲ್ಲಿ ಭಾರೀ ಪ್ರಮಾಣದ ನೀರು ಹರಿವಿನ ಹಿನ್ನೆಲೆ ಈ ರೀತಿ ಏರ್‌ ಬ್ಲಾಸ್ಟ್‌ ಆಗುವುದು ಸಾಮಾನ್ಯ. ಏರ್‌ ಬ್ಲಾಸ್ಟ್‌ ಸಂದರ್ಭದಲ್ಲಿಇಂತಹ ಜೋರು ಶಬ್ದ ಕೇಳುವುದು ಸಾಮಾನ್ಯ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ