ಆ್ಯಪ್ನಗರ

ಪಂಚಾಯಿತಿ ಕಟ್ಟಡದಲ್ಲೇ ಮಳೆ ಕೊಯ್ಲುಇಲ್ಲ!

ಸಾರ್ವಜನಿಕರ ಮನೆಗಳಲ್ಲಿಕಡ್ಡಾಯವಾಗಿ ಮಳೆ ನೀರು ಕೊಯ್ಲುಪದ್ಧತಿ ಆಳವಡಿಸುವಂತೆ ಸೂಚನೆ ನೀಡಿರುವ ಪಟ್ಟಣ ಪಂಚಾಯಿತಿ ತನ್ನ ಕಚೇರಿ ಕಟ್ಟಡ ಹಾಗೂ ಇತರೆ ಸರಕಾರಿ ಕಚೇರಿಗಳಲ್ಲಿ ಮಳೆ ನೀರುಕೊಯ್ಲುಆಳವಡಿಸಿಕೊಂಡಿಲ್ಲ.

Vijaya Karnataka 10 Oct 2019, 4:51 pm
ಮಳೆ ನೀರಿನ ಬಗ್ಗೆ ಉಪದೇಶ ಮಾಡುವ ಇಲಾಖೆ ನಿರ್ಲಕ್ಷ್ಯ
Vijaya Karnataka Web 06 GUDI 2_10

ಗುಡಿಬಂಡೆ: ಸಾರ್ವಜನಿಕರ ಮನೆಗಳಲ್ಲಿಕಡ್ಡಾಯವಾಗಿ ಮಳೆ ನೀರು ಕೊಯ್ಲುಪದ್ಧತಿ ಆಳವಡಿಸುವಂತೆ ಸೂಚನೆ ನೀಡಿರುವ ಪಟ್ಟಣ ಪಂಚಾಯಿತಿ ತನ್ನ ಕಚೇರಿ ಕಟ್ಟಡ ಹಾಗೂ ಇತರೆ ಸರಕಾರಿ ಕಚೇರಿಗಳಲ್ಲಿ ಮಳೆ ನೀರುಕೊಯ್ಲುಆಳವಡಿಸಿಕೊಂಡಿಲ್ಲ.

ಆಗಸ್ಟ್‌ ತಿಂಗಳಲ್ಲಿಪಟ್ಟಣ ಪಂಚಾಯಿತಿಯಿಂದ ಚಿಲುಮೆ ನೀರಿಗಾಗಿ ಒಂದಾಗಿ ಎಂದು ಸಾರ್ವಜನಿಕ ಪ್ರಕಟಣೆ ನೀಡಿ ಮನೆ ಮನೆಗೆ ಪ್ರಚಾರ ಮಾಡಿದ್ದರು. ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿಬರುವ ಪ್ರತಿ ಮನೆಗೆ ಮಳೆ ನೀರು ಕೊಯ್ಲುಅಳವಡಿಸುವ ಚಿಲುಮೆ ಯೋಜನೆಯನ್ನು ಮರು ನಾಮಕರಣ ಮಾಡಿ ನೀರಿಗಾಗಿ ಒಂದಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಜಾರಿಗೊಳಿಸಿದರು. ಆದರೆ ಸಾರ್ವಜನಿಕರಿಗೆ ಉಪದೇಶ ಮಾಡುವ ಮೊದಲು, ನಮ್ಮ ಸರಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲುಅಳವಡಿಸಿಕೊಳ್ಳಬೇಕು ನಂತರ ಪ್ರಚಾರ ಮಾಡಿದರೆ ಒಳ್ಳೆಯದು.

ಸಮಾಜಕ್ಕೆ ಮಾದರಿಯಾಗಲಿ:
ಪಟ್ಟಣ ಪಂಚಾಯಿತಿ ಕಚೇರಿಗೆ ಪ್ರತಿನಿತ್ಯ ಒಂದಲ್ಲಒಂದು ಕೆಲಸಕ್ಕೆ ಪಟ್ಟಣದ ಸಾರ್ವಜನಿಕರು ಬರುತ್ತಾರೆ. ಇಲ್ಲಿರುವ ಕಟ್ಟಡಗಳಿಗೆ ಮಳೆನೀರು ಕೊಯ್ಲನ್ನು ಅಳವಡಿಸಿಕೊಂಡರೆ ಬಹುತೇಕ ಜನರಿಗೆ ಅದೊಂದು ಪ್ರಾತ್ಯಕ್ಷಿಕೆಯೋಪಾದಿ ಕೆಲಸ ಮಾಡುತ್ತದೆ. ಅದನ್ನು ಮಾದರಿಯಾಗಿ ಸ್ವೀಕರಿಸಿ ಜನತೆ ತಮ್ಮ ಮನೆಗಳಲ್ಲಿಯೂ ಮಳೆನೀರು ಕೊಯ್ಲುಅಳವಡಿಸುತ್ತಾರೆ.

ಮಳೆ ನೀರು ಕೊಯ್ಲುಕಡ್ಡಾಯವಾಗಿ ಅಳವಡಿಸಬೇಕೆಂದು ಸರಕಾರಿ ನಿಯಮವಿದ್ದರೂ ಯಾವುದೇ ಸರಕಾರಿ ಕಚೇರಿಗಳಾಗಲಿ, ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಕಟ್ಟಡ ಗಳಲ್ಲಾಗಲಿ ಮಳೆನೀರು ಕೊಯ್ಲುಕಡ್ಡಾಯದ ಬಗ್ಗೆ ಗಮಹರಿಸುತ್ತಿಲ್ಲ. ನೀರಿನ ಕೊರತೆಯ ಕುರಿತು ಬೊಬ್ಬೆ ಹಾಕಿದರೆ ಸಾಲದು, ನಮಗೆ ಲಭ್ಯವಾಗುವ ನೀರನ್ನು ವ್ಯರ್ಥವಾಗದಂತೆ ಬಳಕೆ ಮಾಡಿಕೊಳ್ಳಬೇಕು ಎಂಬ ಅರಿವು ಜನರಲ್ಲಿಮೂಡಬೇಕಾದ ಅವಶ್ಯಕತೆಯಿದೆ. ಇನ್ನಾದರು ಪ.ಪಂ ಮಳೆ ನೀರು ಕೊಯ್ಲುಅಳವಡಿಸುತ್ತಾರೆಯೋ ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ