*ಬಿ. ಮಂಜುನಾಥ
ಗುಡಿಬಂಡೆ: ತಾಲೂಕಿನಲ್ಲಿ ಬಹುತೇಕ ಶೇ.60ರಿಂದ 70 ರಷ್ಟು ಜನರು ಸಣ್ಣ ರೈತರು, ಭೂರಹಿತ ಕೃಷಿ ಕೂಲಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳಿವೆ. ಸತತ ಬರಗಾಲದಿಂದ ಅವರೆಲ್ಲರೂ ಕಠಿಣವಾದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಖಾಸಗಿ ಸಾಲದ ಸುಳಿಯಿಂದ ಪಾರು ಮಾಡಲು ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಆದರೆ ತಾಲೂಕಿನ ಯಾವುದೇ ರೈತರು ಇದುವರಗೂ ಅರ್ಜಿಗಳನ್ನು ಸಲ್ಲಿಸಲು ಮುಂದಾಗಿಲ್ಲ. ಅರ್ಜಿಗಳನ್ನು ಹಾಕಿದರೆ ಮುಂದೆ ಯಾರಿಗೂ ಸಾಲ ಸಿಗುವುದಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ.
ಅರ್ಜಿ ಸಲ್ಲಿಕೆಯಾಗಿಲ್ಲ: ತಾಲೂಕಿನಲ್ಲಿ ಇದುವರಗೂ ಯಾವುದೇ ಅರ್ಜಿಗಳನ್ನು ಪಡೆದಿಲ್ಲ. ಯಾವುದೇ ರೈತರಿಗೆ ಋುಣಮುಕ್ತ ಪತ್ರಗಳನ್ನು ನೀಡಿಲ್ಲ. ಋುಣಮುಕ್ತ ನೋಟಿಸ್ ಸಹ ನೀಡಿಲ್ಲ. ಈ ಕಾಯಿದೆ ಬಗ್ಗೆ ಸಾರ್ವಜನಿಕರಲ್ಲಿ ಬಹಳಷ್ಟು ಗೊಂದಲಗಳಿದ್ದು, ಸರಕಾರ ಸ್ಪಷ್ಟ ಆದೇಶ ನೀಡಬೇಕಿದೆ.
ನೋಂದಣಿ ಇಲ್ಲ: ಗುಡಿಬಂಡೆ ತಾಲೂಕಿನಲ್ಲಿ ನೋಂದಣಿ ಪ್ರಕ್ರಿಯೆಗೆ ಸರಕಾರ ಸಿದ್ಧತೆ ಮಾಡಿಲ್ಲ. ಈ ಬಗ್ಗೆ ಸ್ಪಷ್ಟ ಸೂಚನೆ, ನಿಯಮಗಳ ವಿವರ ಬಾರದೆ ಇಲಾಖೆಗಳಲ್ಲೂ ಗೊಂದಲವಾಗಿದೆ. ಕೆಲವರು ಅರ್ಜಿ ನೀಡಲು ಹೋಗಿದ್ದರೂ ನೋಂದಣಿ ಸಾಧ್ಯವಾಗಿಲ್ಲ. ಯೋಜನೆ ವ್ಯಾಪ್ತಿಗೆ ಯಾರಾರಯರು ಸೇರಲಿದ್ದಾರೆ, ಯಾವ ತರಹದ ಸಾಲಗಳು ಎಂಬಿತ್ಯಾದಿ ಬಗ್ಗೆ ಸುತ್ತೋಲೆ ತಲುಪಿಲ್ಲ.
ಸಾಲ ಮರು ಪಾವತಿ ಮೇಲೆ ತೂಗು ಕತ್ತಿ: ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದ ಕಾರಣ ಸಾಲ ನೀಡಿದ ಇತರ ಹಣಕಾಸು ಸಂಸ್ಥೆಗಳಿಗೂ ತೊಂದರೆ ಆಗಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಫೈನಾನ್ಸ್ ಸಂಸ್ಥೆಗಳು ಮಹಿಳಾ ಗುಂಪು ರಚಿಸಿ ಸಾಲ ನೀಡುತ್ತವೆ. ಪ್ರತಿ ವಾರ ಹಾಗೂ ತಿಂಗಳು ಬಡ್ಡಿ ಸಹಿತ ಅಸಲು ಪಾವತಿಯ ಒಪ್ಪಂದದೊಂದಿಗೆ ಕೆಲವು ದಾಖಲೆ ಪಡೆದು ಈ ಸಾಲ ನೀಡಲಾಗುತ್ತದೆ. ಆದರೆ ಋುಣಮುಕ್ತ ಕಾಯಿದೆ ಈ ಸಾಲ ಮರುಪಾವತಿಯ ಮೇಲೂ ಪರಿಣಾಮ ಬೀರಿದೆ. ಸಾಲ ಪಡೆದ ಕೆಲವರು ಋುಣಮುಕ್ತ ಕಾಯಿದೆಯಡಿ ಸಾಲ ಮನ್ನಾ ಆಗಿದೆ ಎಂಬ ವಾದ ಮುಂದುರಿಸಿದ್ದಾರೆ. ಸ್ಪಷ್ಟನೆ ಕೊಡಲು ಸಿಬ್ಬಂದಿ ತಡಕಾಡುವ ಸ್ಥಿತಿ ಉಂಟಾಗಿದೆ.
ಋುಣಮುಕ್ತ ಕಾಯಿದೆ ಅನುಷ್ಠಾನಕ್ಕೆ ಉಪವಿಭಾಗಾಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಬೇಕು. 90 ದಿನದೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಋುಣಮುಕ್ತರಾಗಬಹುದು ಎಂದು ಹೇಳಿದ್ದಾರೆ. ಆದರೆ ಸ್ಪಷ್ಟ ಆದೇಶ ಹೊರಡಿಸಿ, ನಂತರ ಕಾಯಿ ಅನುಷ್ಠಾನದ ಬಗ್ಗೆ ಸ್ಪಷ್ಟ ಚಿತ್ರಣ ನೀಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲಗಳಿಗೂ ತೆರೆಬೀಳಬೇಕಿದೆ.
- ಎಚ್.ಪಿ. ಲಕ್ಷ್ಮಿನಾರಾಯಣ, ಕಾರ್ಯದರ್ಶಿ, ಕರ್ನಾಟಕ ಪ್ರಾಂತ್ಯರೈತ ಸಂಘ, ಗುಡಿಬಂಡೆ
ತಾಲೂಕಿನಲ್ಲಿ ಬಹಳಷ್ಟು ರೈತರು ಕೈ ಸಾಲ ಮಾಡಿ ಬಡ್ಡಿ ಕಟ್ಟುತ್ತಿದ್ದಾರೆ. ಈ ಕಾಯಿದಗೆ ಅರ್ಜಿಗಳನ್ನು ಹಾಕಿದರೆ ಮುಂದೆ ಯಾವುದೇ ರೈತರಿಗೆ ಖಾಸಗಿ ಸಾಲ ನೀಡುವುದಿಲ್ಲವೇನೋ ಎಂಬ ಆತಂಕದಲ್ಲಿ ಇದ್ದಾರೆ. ಈ ಕಡೆ ಸರಕಾರ ಸರಿಯಾದ ಸಮಯಕ್ಕೆ ಸಾಲ ನೀಡುವುದಿಲ್ಲ. ರೈತರಿಗೆ ಹಣ ಬೇಕಾದಾಗ ಸ್ಥಳೀಯ ಲೇವಾದೇವಿದಾರರಿಂದ ಹಣ ಪಡೆದುಕೊಳ್ಳುತ್ತಾರೆ.ಬೆಳೆಗೆ, ಬೋರ್ವೆಲ್ಗಳಿಗೆ ಹಣ ಬೇಕಾಗುತ್ತದೆ. ಈಗ ಅರ್ಜಿಗಳನ್ನು ಹಾಕಿದರೆ ಮನ್ನಾ ಆಗಬಹುದು, ಆದರೆ ಮುಂದೆ ರೈತರಿಗೆ ಬ್ಯಾಂಕ್ನವರಾಗಲಿ, ಬೇರೆಯವರಾಗಲಿ ಸಾಲ ಕೊಡುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.
-ವರದರಾಜು | ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ(ಪುಟ್ಟಣ್ಯ ಬಣ), ಗುಡಿಬಂಡೆ
ಋುಣಮುಕ್ತ ಕಾಯಿದೆ ಬಗ್ಗೆ ಜಿಲ್ಲಾಧಿಕಾರಿಗಳಿಂದಾಗಲೀ, ಉಪ ವಿಭಾಗಾಧಿಕಾರಿಗಳಿಂದಾಗಲೀ ಯಾವುದೇ ನಿರ್ದೇಶನಗಳು ಬಂದಿಲ್ಲ. ಅವರ ಸೂಚನೆ ನೀಡಿದರೆ ಹಾಗೂ ಸರಕಾರದ ಸ್ಪಷ್ಟ ಆದೇಶ ಬಂದರೆ ನಿಯಮಾನುಸಾರ ನೋಂದಣಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುತ್ತದೆ.
-ಡಿ. ಹನುಮಂತರಾಯಪ್ಪ | ತಹಸೀಲ್ದಾರ್, ಗುಡಿಬಂಡೆ
ಗುಡಿಬಂಡೆ: ತಾಲೂಕಿನಲ್ಲಿ ಬಹುತೇಕ ಶೇ.60ರಿಂದ 70 ರಷ್ಟು ಜನರು ಸಣ್ಣ ರೈತರು, ಭೂರಹಿತ ಕೃಷಿ ಕೂಲಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳಿವೆ. ಸತತ ಬರಗಾಲದಿಂದ ಅವರೆಲ್ಲರೂ ಕಠಿಣವಾದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಖಾಸಗಿ ಸಾಲದ ಸುಳಿಯಿಂದ ಪಾರು ಮಾಡಲು ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಆದರೆ ತಾಲೂಕಿನ ಯಾವುದೇ ರೈತರು ಇದುವರಗೂ ಅರ್ಜಿಗಳನ್ನು ಸಲ್ಲಿಸಲು ಮುಂದಾಗಿಲ್ಲ. ಅರ್ಜಿಗಳನ್ನು ಹಾಕಿದರೆ ಮುಂದೆ ಯಾರಿಗೂ ಸಾಲ ಸಿಗುವುದಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ.
ಅರ್ಜಿ ಸಲ್ಲಿಕೆಯಾಗಿಲ್ಲ: ತಾಲೂಕಿನಲ್ಲಿ ಇದುವರಗೂ ಯಾವುದೇ ಅರ್ಜಿಗಳನ್ನು ಪಡೆದಿಲ್ಲ. ಯಾವುದೇ ರೈತರಿಗೆ ಋುಣಮುಕ್ತ ಪತ್ರಗಳನ್ನು ನೀಡಿಲ್ಲ. ಋುಣಮುಕ್ತ ನೋಟಿಸ್ ಸಹ ನೀಡಿಲ್ಲ. ಈ ಕಾಯಿದೆ ಬಗ್ಗೆ ಸಾರ್ವಜನಿಕರಲ್ಲಿ ಬಹಳಷ್ಟು ಗೊಂದಲಗಳಿದ್ದು, ಸರಕಾರ ಸ್ಪಷ್ಟ ಆದೇಶ ನೀಡಬೇಕಿದೆ.
ನೋಂದಣಿ ಇಲ್ಲ: ಗುಡಿಬಂಡೆ ತಾಲೂಕಿನಲ್ಲಿ ನೋಂದಣಿ ಪ್ರಕ್ರಿಯೆಗೆ ಸರಕಾರ ಸಿದ್ಧತೆ ಮಾಡಿಲ್ಲ. ಈ ಬಗ್ಗೆ ಸ್ಪಷ್ಟ ಸೂಚನೆ, ನಿಯಮಗಳ ವಿವರ ಬಾರದೆ ಇಲಾಖೆಗಳಲ್ಲೂ ಗೊಂದಲವಾಗಿದೆ. ಕೆಲವರು ಅರ್ಜಿ ನೀಡಲು ಹೋಗಿದ್ದರೂ ನೋಂದಣಿ ಸಾಧ್ಯವಾಗಿಲ್ಲ. ಯೋಜನೆ ವ್ಯಾಪ್ತಿಗೆ ಯಾರಾರಯರು ಸೇರಲಿದ್ದಾರೆ, ಯಾವ ತರಹದ ಸಾಲಗಳು ಎಂಬಿತ್ಯಾದಿ ಬಗ್ಗೆ ಸುತ್ತೋಲೆ ತಲುಪಿಲ್ಲ.
ಸಾಲ ಮರು ಪಾವತಿ ಮೇಲೆ ತೂಗು ಕತ್ತಿ: ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದ ಕಾರಣ ಸಾಲ ನೀಡಿದ ಇತರ ಹಣಕಾಸು ಸಂಸ್ಥೆಗಳಿಗೂ ತೊಂದರೆ ಆಗಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಫೈನಾನ್ಸ್ ಸಂಸ್ಥೆಗಳು ಮಹಿಳಾ ಗುಂಪು ರಚಿಸಿ ಸಾಲ ನೀಡುತ್ತವೆ. ಪ್ರತಿ ವಾರ ಹಾಗೂ ತಿಂಗಳು ಬಡ್ಡಿ ಸಹಿತ ಅಸಲು ಪಾವತಿಯ ಒಪ್ಪಂದದೊಂದಿಗೆ ಕೆಲವು ದಾಖಲೆ ಪಡೆದು ಈ ಸಾಲ ನೀಡಲಾಗುತ್ತದೆ. ಆದರೆ ಋುಣಮುಕ್ತ ಕಾಯಿದೆ ಈ ಸಾಲ ಮರುಪಾವತಿಯ ಮೇಲೂ ಪರಿಣಾಮ ಬೀರಿದೆ. ಸಾಲ ಪಡೆದ ಕೆಲವರು ಋುಣಮುಕ್ತ ಕಾಯಿದೆಯಡಿ ಸಾಲ ಮನ್ನಾ ಆಗಿದೆ ಎಂಬ ವಾದ ಮುಂದುರಿಸಿದ್ದಾರೆ. ಸ್ಪಷ್ಟನೆ ಕೊಡಲು ಸಿಬ್ಬಂದಿ ತಡಕಾಡುವ ಸ್ಥಿತಿ ಉಂಟಾಗಿದೆ.
ಋುಣಮುಕ್ತ ಕಾಯಿದೆ ಅನುಷ್ಠಾನಕ್ಕೆ ಉಪವಿಭಾಗಾಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಬೇಕು. 90 ದಿನದೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಋುಣಮುಕ್ತರಾಗಬಹುದು ಎಂದು ಹೇಳಿದ್ದಾರೆ. ಆದರೆ ಸ್ಪಷ್ಟ ಆದೇಶ ಹೊರಡಿಸಿ, ನಂತರ ಕಾಯಿ ಅನುಷ್ಠಾನದ ಬಗ್ಗೆ ಸ್ಪಷ್ಟ ಚಿತ್ರಣ ನೀಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲಗಳಿಗೂ ತೆರೆಬೀಳಬೇಕಿದೆ.
- ಎಚ್.ಪಿ. ಲಕ್ಷ್ಮಿನಾರಾಯಣ, ಕಾರ್ಯದರ್ಶಿ, ಕರ್ನಾಟಕ ಪ್ರಾಂತ್ಯರೈತ ಸಂಘ, ಗುಡಿಬಂಡೆ
ತಾಲೂಕಿನಲ್ಲಿ ಬಹಳಷ್ಟು ರೈತರು ಕೈ ಸಾಲ ಮಾಡಿ ಬಡ್ಡಿ ಕಟ್ಟುತ್ತಿದ್ದಾರೆ. ಈ ಕಾಯಿದಗೆ ಅರ್ಜಿಗಳನ್ನು ಹಾಕಿದರೆ ಮುಂದೆ ಯಾವುದೇ ರೈತರಿಗೆ ಖಾಸಗಿ ಸಾಲ ನೀಡುವುದಿಲ್ಲವೇನೋ ಎಂಬ ಆತಂಕದಲ್ಲಿ ಇದ್ದಾರೆ. ಈ ಕಡೆ ಸರಕಾರ ಸರಿಯಾದ ಸಮಯಕ್ಕೆ ಸಾಲ ನೀಡುವುದಿಲ್ಲ. ರೈತರಿಗೆ ಹಣ ಬೇಕಾದಾಗ ಸ್ಥಳೀಯ ಲೇವಾದೇವಿದಾರರಿಂದ ಹಣ ಪಡೆದುಕೊಳ್ಳುತ್ತಾರೆ.ಬೆಳೆಗೆ, ಬೋರ್ವೆಲ್ಗಳಿಗೆ ಹಣ ಬೇಕಾಗುತ್ತದೆ. ಈಗ ಅರ್ಜಿಗಳನ್ನು ಹಾಕಿದರೆ ಮನ್ನಾ ಆಗಬಹುದು, ಆದರೆ ಮುಂದೆ ರೈತರಿಗೆ ಬ್ಯಾಂಕ್ನವರಾಗಲಿ, ಬೇರೆಯವರಾಗಲಿ ಸಾಲ ಕೊಡುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.
-ವರದರಾಜು | ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ(ಪುಟ್ಟಣ್ಯ ಬಣ), ಗುಡಿಬಂಡೆ
ಋುಣಮುಕ್ತ ಕಾಯಿದೆ ಬಗ್ಗೆ ಜಿಲ್ಲಾಧಿಕಾರಿಗಳಿಂದಾಗಲೀ, ಉಪ ವಿಭಾಗಾಧಿಕಾರಿಗಳಿಂದಾಗಲೀ ಯಾವುದೇ ನಿರ್ದೇಶನಗಳು ಬಂದಿಲ್ಲ. ಅವರ ಸೂಚನೆ ನೀಡಿದರೆ ಹಾಗೂ ಸರಕಾರದ ಸ್ಪಷ್ಟ ಆದೇಶ ಬಂದರೆ ನಿಯಮಾನುಸಾರ ನೋಂದಣಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುತ್ತದೆ.
-ಡಿ. ಹನುಮಂತರಾಯಪ್ಪ | ತಹಸೀಲ್ದಾರ್, ಗುಡಿಬಂಡೆ