ಆ್ಯಪ್ನಗರ

ದಾಳಿಯ ಸಂಪೂರ್ಣ ಪ್ರತಿಫಲ ಸೇನೆಗೆ ಸಿಗಬೇಕು, ಯಾವುದೇ ರಾಜಕೀಯ ಪಕ್ಷಕ್ಕೆ ಅಲ್ಲ: ವೀರಪ್ಪ ಮೊಯ್ಲಿ

ಸೇನೆ ಕಾರ್ಯ ಈಗ ದೇಶ ಸೇವೆಯಲ್ಲಿ ತೊಡಗಿದೆ. ನಮ್ಮ ಭದ್ರತೆಗೆ ಒತ್ತು ನೀಡುತ್ತಿದೆ. ಮತ್ತು ಉಗ್ರ ನಿಗ್ರಹ ಕಾರ್ಯದಲ್ಲಿ ತೊಡಗಿದೆ. ಅವರ ಕೆಲಸವನ್ನು ಅವರು ಮಾಡಲು ಸುಮ್ಮನೆ ಬಿಟ್ಟುಬೇಡಬೇಕು. ಇದರಲ್ಲಿ ಯಾರೂ ಮೂಗು ತೂರಿಸಬಾರದು.

Vijaya Karnataka Web 27 Feb 2019, 4:11 pm
ಚಿಕ್ಕಬಳ್ಳಾಪುರ: ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿರುವುದರ ಬಗ್ಗೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
Vijaya Karnataka Web ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ


ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ಸೇನೆ ದಾಳಿ ಕುರಿತು ಯಾರೂ ರಾಜಕೀಯ ಮಾಡಬಾರದು ಎಂದರು.

ಸೇನೆ ಕಾರ್ಯ ಈಗ ದೇಶ ಸೇವೆಯಲ್ಲಿ ತೊಡಗಿದೆ. ನಮ್ಮ ಭದ್ರತೆಗೆ ಒತ್ತು ನೀಡುತ್ತಿದೆ. ಮತ್ತು ಉಗ್ರ ನಿಗ್ರಹ ಕಾರ್ಯದಲ್ಲಿ ತೊಡಗಿದೆ. ಅವರ ಕೆಲಸವನ್ನು ಅವರು ಮಾಡಲು ಸುಮ್ಮನೆ ಬಿಟ್ಟುಬೇಡಬೇಕು. ಇದರಲ್ಲಿ ಯಾರೂ ಮೂಗು ತೂರಿಸಬಾರದು ಎಂದು ಸಲಹೆ ನೀಡಿದರು.

ಸೇನೆ ಕಾರ್ಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಯಾವ ಪಕ್ಷವೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಇದರ ಸಂಪೂರ್ಣ ಪ್ರತಿಫಲ ಸೇನಾಪಡೆಗಳಿಗೆ ಸಿಗಬೇಕು ಎಂದು ಮೊಯ್ಲಿ ಹೇಳಿದರು.

ದಾಳಿ ವಿಷಯದಲ್ಲಿ ಕಾಂಗ್ರೆಸ್ ಯಾವತ್ತೂ ವಿಜಯೋತ್ಸವ ಆಚರಿಸಿಲ್ಲ. ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ಆಗ್ರಹ ಇನ್ನಷ್ಟು ಹೆಚ್ಚಾಗಬೇಕು. ಯುದ್ಧ ಸಾರುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ ಎಂದರು.

ಯುದ್ದಕ್ಕೆ ಬದಲು ಪಾಕಿಸ್ತಾನವೇ ಉಗ್ರಗಾಮಿಗಳನ್ನು ಮಟ್ಟ ಹಾಕಲಿ. ಯುದ್ಧ ಸಂದರ್ಭ ಬಂದರೆ ಪಾಕಿಸ್ತಾನಕ್ಕಿಂತ ಮುಂಚೆಯೇ ನಾವು ರೆಡ್ಡಿಯಾಗಿದ್ದೇವೆ. ಇದರಲ್ಲಿ ನಮ್ಮ ಸೇನಾ ಪಡೆಗಳ ಸಾಮರ್ಥ್ಯ ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮ ಪಡೆಗಳು ಯಾವುದೇ ಸನ್ನಿವೇಶ ಎದುರಿಸಲು ಸಜ್ಜಾಗಿವೆ ಎಂದು ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ