ಶಿಡ್ಲಘಟ್ಟ: ಸ್ಪರ್ಧಾ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಾಗಲಿ ಸುಲಭವಾಗಿ ಯಶಸ್ಸು ಸಿಗದು. ಎಲ್ಲವನ್ನೂ ಎದುರಿಸಿಯೇ ಪಡೆಯುವ ವಾತಾವರಣ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಹಂಡಿಗನಾಳದ ಕೆಂಪಣ್ಣ ವೀರಣ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ದೇವಾಲಯ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲೂ ತೀವ್ರವಾದ ಸ್ಪರ್ಧೆ ಎದುರಾಗಿದೆ, ಅದು ಶಿಕ್ಷ ಣ, ಉದ್ಯೋಗ ಕ್ಷೇತ್ರವನ್ನೂ ಬಿಟ್ಟಿಲ್ಲ. ಹಾಗಾಗಿ ಕಾಲೇಜು ಶಿಕ್ಷ ಣಕ್ಕೆ ಪ್ರವೇಶ ಪಡೆಯಲು, ಉದ್ಯೋಗ ಪಡೆಯಲು ಕೂಡ ತೀವ್ರವಾದ ಸ್ಪರ್ಧೆಯನ್ನು ಎದುರಿಸಬೇಕಿದೆ. ಅದಕ್ಕಾಗಿ ನಾವು ಸಹ ನಮ್ಮ ಮಕ್ಕಳನ್ನು ಆ ಎಲ್ಲ ಸ್ಪರ್ಧೆಗಳನ್ನು ಆರೋಗ್ಯಕರವಾಗಿ ಎದುರಿಸಲು ಸನ್ನದ್ದಪಡಿಸಬೇಕು. ಅದಕ್ಕೆ ಸಾಕಷ್ಟು ಶ್ರಮ, ಕಾಳಜಿ ಅನಿವಾರ್ಯ ಎಂದರು.
ಕನ್ನಡ ಭಾಷೆಯು ನಮ್ಮಲ್ಲಿ ಅಂತಃಶಕ್ತಿಯನ್ನು ಹೆಚ್ಚಿಸುತ್ತದೆ, ಆದರೆ ಇಂಗ್ಲಿಷ್ ಭಾಷೆಯು ಜಾಗತಿಕವಾಗಿ ಹಬ್ಬಿದ್ದು ಇಂಗ್ಲಿಷ್ ಕಲಿಕೆ ಅನಿವಾರ್ಯ ಎಂಬಂತಾಗಿದೆ. ಪೋಷಕರು ಸಹ ಆಂಗ್ಲ ಮಾಧ್ಯಮ ಶಾಲೆಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರವು ರಾಜ್ಯದ ಹಲವೆಡೆ ಪ್ರಾಯೋಗಿಕವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆದಿದ್ದು, ಅದರ ಸಫಲತೆ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು ಎಂದರು.
ಬೆಂಗಳೂರಿನ ಐಎಸ್ಆರ್ಒ ಅಧಿಕಾರಿ ವಿಜಯಲಕ್ಷ್ಮಿ ಬಿದರಿ ಮಾತನಾಡಿ, ಎಲ್ಲರೂ ತಮ್ಮದೇ ಆದ ಗುರಿ ಇಟ್ಟುಕೊಳ್ಳಬೇಕು. ಸತತ ಪ್ರಯತ್ನದಿಂದ ಗುರಿ ಮುಟ್ಟಬೇಕು ಎಂದರು.
ವಿಶ್ವನಾಥ ಗುರೂಜಿ ಮಾತನಾಡಿ, ನಿಮ್ಮ ಬದುಕಿನ ಗುರಿಯನ್ನು ನಿಗದಿಪಡಿಸುವುದಕ್ಕೂ ಮುನ್ನ ನಿಮ್ಮಲ್ಲಿನ ಶಕ್ತಿಯನ್ನು ನೀವು ಗುರುತಿಸಿಕೊಳ್ಳಿ ಎಂದು ಹೇಳಿದರು.
ಕೆಂಪಣ್ಣ ಈರಣ್ಣ ದೇವರ ಕುಟುಂಬಕ್ಕೆ ಸೇರಿದ ಒಕ್ಕಲಿಗ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಎನ್.ಪ್ರಿಯಾಂಕ, ಎಸ್ಐ ಕೆ.ಸಿ.ಸಾವಿತ್ರಿ, ಗುತ್ತಿಗೆದಾರ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷ ನಿವೃತ್ತ ಐಪಿಎಸ್ ಅಧಿಕಾರಿ ಎನ್.ನಾಗರಾಜ್, ಗೌರವಾಧ್ಯಕ್ಷ ಪಿ.ವಿ.ನಾಗರಾಜ್, ಕಾರ್ಯದರ್ಶಿ ಆಶ್ವತ್ಥಯ್ಯ, ಕೆ.ವಿ.ಭವನದ ಅಧ್ಯಕ್ಷ ಆರ್.ರವಿ, ದೇವರಾಜ್, ಲಕ್ಷ ್ಮಣ್, ಗೋವಿಂದರಾಜು, ರವಿಕುಮಾರ್, ಮಧುಸೂದನ್ ಇನ್ನಿತರರು ಹಾಜರಿದ್ದರು.
ತಾಲೂಕಿನ ಹಂಡಿಗನಾಳದ ಕೆಂಪಣ್ಣ ವೀರಣ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ದೇವಾಲಯ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲೂ ತೀವ್ರವಾದ ಸ್ಪರ್ಧೆ ಎದುರಾಗಿದೆ, ಅದು ಶಿಕ್ಷ ಣ, ಉದ್ಯೋಗ ಕ್ಷೇತ್ರವನ್ನೂ ಬಿಟ್ಟಿಲ್ಲ. ಹಾಗಾಗಿ ಕಾಲೇಜು ಶಿಕ್ಷ ಣಕ್ಕೆ ಪ್ರವೇಶ ಪಡೆಯಲು, ಉದ್ಯೋಗ ಪಡೆಯಲು ಕೂಡ ತೀವ್ರವಾದ ಸ್ಪರ್ಧೆಯನ್ನು ಎದುರಿಸಬೇಕಿದೆ. ಅದಕ್ಕಾಗಿ ನಾವು ಸಹ ನಮ್ಮ ಮಕ್ಕಳನ್ನು ಆ ಎಲ್ಲ ಸ್ಪರ್ಧೆಗಳನ್ನು ಆರೋಗ್ಯಕರವಾಗಿ ಎದುರಿಸಲು ಸನ್ನದ್ದಪಡಿಸಬೇಕು. ಅದಕ್ಕೆ ಸಾಕಷ್ಟು ಶ್ರಮ, ಕಾಳಜಿ ಅನಿವಾರ್ಯ ಎಂದರು.
ಕನ್ನಡ ಭಾಷೆಯು ನಮ್ಮಲ್ಲಿ ಅಂತಃಶಕ್ತಿಯನ್ನು ಹೆಚ್ಚಿಸುತ್ತದೆ, ಆದರೆ ಇಂಗ್ಲಿಷ್ ಭಾಷೆಯು ಜಾಗತಿಕವಾಗಿ ಹಬ್ಬಿದ್ದು ಇಂಗ್ಲಿಷ್ ಕಲಿಕೆ ಅನಿವಾರ್ಯ ಎಂಬಂತಾಗಿದೆ. ಪೋಷಕರು ಸಹ ಆಂಗ್ಲ ಮಾಧ್ಯಮ ಶಾಲೆಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರವು ರಾಜ್ಯದ ಹಲವೆಡೆ ಪ್ರಾಯೋಗಿಕವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆದಿದ್ದು, ಅದರ ಸಫಲತೆ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು ಎಂದರು.
ಬೆಂಗಳೂರಿನ ಐಎಸ್ಆರ್ಒ ಅಧಿಕಾರಿ ವಿಜಯಲಕ್ಷ್ಮಿ ಬಿದರಿ ಮಾತನಾಡಿ, ಎಲ್ಲರೂ ತಮ್ಮದೇ ಆದ ಗುರಿ ಇಟ್ಟುಕೊಳ್ಳಬೇಕು. ಸತತ ಪ್ರಯತ್ನದಿಂದ ಗುರಿ ಮುಟ್ಟಬೇಕು ಎಂದರು.
ವಿಶ್ವನಾಥ ಗುರೂಜಿ ಮಾತನಾಡಿ, ನಿಮ್ಮ ಬದುಕಿನ ಗುರಿಯನ್ನು ನಿಗದಿಪಡಿಸುವುದಕ್ಕೂ ಮುನ್ನ ನಿಮ್ಮಲ್ಲಿನ ಶಕ್ತಿಯನ್ನು ನೀವು ಗುರುತಿಸಿಕೊಳ್ಳಿ ಎಂದು ಹೇಳಿದರು.
ಕೆಂಪಣ್ಣ ಈರಣ್ಣ ದೇವರ ಕುಟುಂಬಕ್ಕೆ ಸೇರಿದ ಒಕ್ಕಲಿಗ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಎನ್.ಪ್ರಿಯಾಂಕ, ಎಸ್ಐ ಕೆ.ಸಿ.ಸಾವಿತ್ರಿ, ಗುತ್ತಿಗೆದಾರ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷ ನಿವೃತ್ತ ಐಪಿಎಸ್ ಅಧಿಕಾರಿ ಎನ್.ನಾಗರಾಜ್, ಗೌರವಾಧ್ಯಕ್ಷ ಪಿ.ವಿ.ನಾಗರಾಜ್, ಕಾರ್ಯದರ್ಶಿ ಆಶ್ವತ್ಥಯ್ಯ, ಕೆ.ವಿ.ಭವನದ ಅಧ್ಯಕ್ಷ ಆರ್.ರವಿ, ದೇವರಾಜ್, ಲಕ್ಷ ್ಮಣ್, ಗೋವಿಂದರಾಜು, ರವಿಕುಮಾರ್, ಮಧುಸೂದನ್ ಇನ್ನಿತರರು ಹಾಜರಿದ್ದರು.