ಆ್ಯಪ್ನಗರ

ಬಾಲಕಿ ಮದುವೆ ತಡೆದ ಸಿಡಿಪಿಒ ಅಧಿಕಾರಿಗಳು

ತಾಲೂಕಿನ ಮಿಟ್ಟೇಮರಿ ಹೋಬಳಿ ಜೂಲಪಾಳ್ಯ ಗ್ರಾಮದಲ್ಲಿ ಮೇ 9ರಂದು ನಡೆಯಬೇಕಿದ್ದ ಬಾಲಕಿಯೊಬ್ಬಳ ಮದುವೆಯನ್ನು ಸಿಡಿಪಿಒ ಅಧಿಕಾರಿಗಳು ತಡೆದಿದ್ದಾರೆ.

Vijaya Karnataka 9 May 2019, 5:00 am
ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮರಿ ಹೋಬಳಿ ಜೂಲಪಾಳ್ಯ ಗ್ರಾಮದಲ್ಲಿ ಮೇ 9ರಂದು ನಡೆಯಬೇಕಿದ್ದ ಬಾಲಕಿಯೊಬ್ಬಳ ಮದುವೆಯನ್ನು ಸಿಡಿಪಿಒ ಅಧಿಕಾರಿಗಳು ತಡೆದಿದ್ದಾರೆ.
Vijaya Karnataka Web officers stoped child marriage
ಬಾಲಕಿ ಮದುವೆ ತಡೆದ ಸಿಡಿಪಿಒ ಅಧಿಕಾರಿಗಳು


ದೇವನಹಳ್ಳಿ ತಾಲೂಕಿನ ಮಾಳಿಗೇನಹಳ್ಳಿಯ 16 ವರ್ಷದ ಬಾಲಕಿಯು ದೇವನಹಳ್ಳಿ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದಳು. ತಂದೆ ತಾಯಿಗಳು ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯ ಗ್ರಾಮದ ವರನ ಸ್ವಗೃಹದಲ್ಲಿ 30 ವರ್ಷ ವಯಸ್ಸಿನ ಯುವಕನೊಂದಿಗೆ ಮದುವೆ ನಿಶ್ಚಯಸಿದ್ದರು. ಈ ಹಿನ್ನೆಲೆಯಲ್ಲಿ ವರನ ಮನೆಯ ಮುಂದೆ ಚಪ್ಪರ ಹಾಕಿ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ವಿಷಯ ತಿಳಿದ ಸಿಡಿಪಿಒ ಕಚೇರಿಯ ವ್ಯವಸ್ಥಾಪಕ ರಫೀಕ್‌, ಮೇಲ್ವಿಚಾರಕಿಯರಾದ ಬಸಮ್ಮ, ಅನಸೂಯಿಬಾಯಿ ಗ್ರಾಮದ ವರನ ಸ್ವಗೃಹಕ್ಕೆ ಭೇಟಿ ನೀಡಿ, ಪರಿಶೀಲಿಸಿದಾಗ ವರ ನಾಪತ್ತೆಯಾಗಿದ್ದ. ವರನ ತಂದೆ ತಾಯಿಗಳಿಂದ ಮುಚ್ಚಳಿಕೆ ಬರೆಸಿಕೊಂಡು, ಮದುವೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಬಾಲಕಿಯನ್ನು ದೇವನಹಳ್ಳಿ ಮಕ್ಕಳ ರಕ್ಷ ಣಾ ಘಟಕದವರು ರಕ್ಷಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ