ಆ್ಯಪ್ನಗರ

ಚಿಕ್ಕಬಳ್ಳಾಪುರದಲ್ಲಿ ಚಳಿ ಹಿನ್ನೆಲೆ ಹೊಗೆ ಹಾಕಿ ಮಲಗಿದ ಕುಟುಂಬ: ಉಸಿರುಗಟ್ಟಿ ಬಾಲಕಿ ಸಾವು, ಮೂವರ ಸ್ಥಿತಿ ಗಂಭೀರ!

ಚಳಿ ಹಿನ್ನೆಲೆ ರಾತ್ರಿ ಹೊತ್ತು ಹೊಗೆ ಹಾಕಿ ಮಲಗಿದ ಕುಟುಂಬ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ರಾತ್ರಿ ಜಾಸ್ತಿ ಹೊಗೆಯಾಡಿದ ಹಿನ್ನೆಲೆ ಬಾಲಕಿ ಸಾವನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಚಿಕ್ಕಬಳ್ಳಾಪುರವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Vijaya Karnataka Web 27 Nov 2020, 2:02 pm
ಚಿಕ್ಕಬಳ್ಳಾಪುರ: ಚಳಿ ಹಿನ್ನೆಲೆ ಮನೆಯಲ್ಲಿ ಹೊಗೆ ಹಾಕಿ ಮಲಗಿದ್ದ ಕುಟುಂಬವೊಂದು ಬೆಳಗಾಗುವಾಗ ಹೊತ್ತಿಗೆ ಉಸಿರಾಟ ತೊಂದರೆ ಅನುಭವಿಸಿದ ಘಟನೆ ಗೌರಿಬಿದನೂರು ತಾಲೂಕಿನ ಮರಾಠಿ ಪಾಳ್ಯದಲ್ಲಿ ನಡೆದಿದೆ. ಉಸಿರಾಟದ ತೊಂದರೆಯಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಉಳಿದ ಮೂವರ ಸ್ಥಿತಿ ಜಿಂತಾಜನಕವಾಗಿದೆ.
Vijaya Karnataka Web smoke


ಮರಾಠಿ ಪಾಳ್ಯದಲ್ಲಿ ವಾಸಿಸುತ್ತಿರುವ ರಾಮಾಂಜಿನೇಯಲು ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಈ ಏರಿಯಾದಲ್ಲಿ ಜೀವಿಸುತ್ತಿದ್ದರು. ಜಾಸ್ತಿ ಚಳಿ ಇರುವ ಹಿನ್ನೆಲೆ ನೆಯನ್ನು ಬೆಚ್ಚಗಿಡುವ ಉದ್ದೇಶದಿಂದ ರಾಮಾಂಜಿನೇಯಲು ಹೊಗೆ ಹಾಕಿ ಕುಟುಂಬಸ್ಥರೊಂದಿಗೆ ಮಲಗಿದ್ದಾರೆ. ಗಾಢ ನಿದ್ರೆಗೆ ಜಾರುತ್ತಿದ್ದಂತೆ ಮನೆ ತುಂಬ ಹೊಗೆ ಜಾಸ್ತಿಯಾಗಿ ಆವರಿಸಿದೆ.

ಹೀಗಾಗಿ ನಿದ್ರೆಯಲ್ಲೇ ಉಸಿರಾಟದ ತೊಂದೆರೆಯನ್ನು ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಅನುಭವಿಸಿದ್ದಾರೆ. ಇನ್ನು ಮಲಗಿದ್ದಲ್ಲೇ ಕುಟುಂಬದ ಹಿರಿಯ ಮಗಳು ಅರ್ಚನಾ(16)ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ರಾಮಾಂಜಿನೇಯಲು, ತಾಯಿ ಶಾಂತಮ್ಮ ಹಾಗೂ ಕಿರಿಯ ಮಗಳು ಅಂಕಿತಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆ.

ಈ ವರ್ಷ 15 ಸಾವಿರ ಕೋಟಿ ರೂ. ಕೃಷಿ ಸಾಲ ನೀಡುವ ಗುರಿ ಇದೆ: ಸಚಿವ ಸುಧಾಕರ್

ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕುಟುಂಬವಾಗಿದ್ದು ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ರವಿ ಹಾಗೂ ಪಿಎಸ್‌ಐ ಲಕ್ಷ್ಮೀನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ