ಗುಡಿಬಂಡೆ: ತಾಲೂಕಿನ ವಾಪಸಂದ್ರ ಅನುಪನಹಳ್ಳಿ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಸಾವಿರಾರು ಜಿಂಕೆ, ನವಿಲು ಹಾಗೂ ಇತರೆ ಕಾಡು ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗುಡಿಬಂಡೆಯ ಸಮಾನ ಮನಸ್ಕರು ವನ್ಯಪ್ರಾಣಿಗಳಿಗೆ ಮೇವು ಮತ್ತು ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ವನ್ಯಜೀವಿಗಳ ಸಂರಕ್ಷ ಣೆಯ ಮುಖ್ಯಸ್ಥ ಜಿ.ಎನ್. ದ್ವಾರಕನಾಥ ನಾಯ್ಡು ಮಾತನಾಡಿ, ಗುಡಿಬಂಡೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚಿನ ನವಿಲುಗಳು, 15 ಸಾವಿರಕ್ಕೂ ಹೆಚ್ಚು ಜಿಂಕೆಗಳು ತಲತಲಾಂತರದಿಂದ ಜೀವಿಸುತ್ತಾ ಬಂದಿವೆ. ಆದರೆ ದುರದೃಷ್ಟವಶಾತ್ ವನ್ಯ ಸಂರಕ್ಷ ಣಾಧಿಕಾರಿಗಳಾಗಲಿಜಿಲ್ಲಾಡಳಿತವಾಗಲಿ ಕಾಡು ಪ್ರಾಣಿ, ಪಕ್ಷಿಗಳ ಸಂರಕ್ಷ ಣೆಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿಲ್ಲ. ನರೇಗಾ ಯೋಜನೆಯ ಮೂಲಕ ಕಾಡಿನಲ್ಲಿ ನೀರು ಶೇಖರಿಸುವ ಕುಂಟೆಗಳನ್ನು ಮಾಡಿದರೇ ಕಾಡುಪ್ರಾಣಿಗಳಿಗೆ ಸಹಕಾರವಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣ ಬಳಕೆ: ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಗುಂಪುಮರದ ಆನಂದ್ ಮಾತನಾಡಿ, ಹಲವಾರು ವರ್ಷಗಳಿಂದ ಅದರಲ್ಲೂ ಬೇಸಿಗೆ ಬಂತೆಂದರೆ ಕುಡಿವ ನೀರಿಲ್ಲದೆ ಪರಿತಪಿಸುವ ರಾಷ್ಟ್ರ ಪಕ್ಷಿಯ ಉಳಿವಿಗಾಗಿ ವಾಟ್ಸ್ ಆ್ಯಪ್ ಗ್ರೂಪ್, ಫೇಸ್ಬುಕ್ ಮೂಲಕ ವನ್ಯಜೀವಿಗಳ ಸಂರಕ್ಷ ಣೆಗೆ ಸಹಾಯಮಾಡಿ ಎಂದು ಗುಡಿಬಂಡೆ ಯುವಕರ ತಂಡ ಪ್ರಚಾರ ಪಡಿಸಿದ್ದರು. ಅದನ್ನು ನೋಡಿದ ಸಾಕಷ್ಟು ಜನರು ಅಕ್ಕಿ, ರಾಗಿ, ಜೋಳ, ನೀರಿನ ಟ್ಯಾಂಕ್, ಹಣ್ಣು, ತರಕಾರಿ ಸೇರಿದಂತೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈ ಯೋಜನೆಯ ಮುಖಾಂತರ ಅರಣ್ಯ ಪ್ರದೇಶದಲ್ಲಿ ತಕ್ಷ ಣ ಹಳ್ಳ ಇರುವ ಜಾಗದಲ್ಲಿ ನೀರು ನಿಲುವಂತೆ ಮಾಡಿ, ನಂತರ ನವಿಲುಗಳು ಸಂಚರಿಸುವ ಹಾದಿಯಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟು ಅವುಗಳಿಗೆ ಪ್ರತಿದಿನ ಮಳೆ ಬರುವವರೆಗೆ ಬೆಳಗ್ಗೆ ಮತ್ತು ಸಂಜೆ ಮೇವು, ನೀರು ನೀಡಲಾಗುವುದು ಎಂದರು.
ಜನರ ಸಹಕಾರ: ಗುಡಿಬಂಡೆ ಸುರಸದ್ಮಗಿರಿ ವಿದ್ಯುತ್ ವೈರ್ಮೆನ್ ಕಾರ್ಮಿಕರ ಸಂಘದಿಂದ 1.5 ಕ್ಷಿಂಟಾಲ್ ಮುಸುಕಿನ ಜೋಳ, ಚಿಕ್ಕಬಳ್ಳಾಪುರದ ಸಾಫ್ಟವೇರ್ ಎಂಜನಿಯರ್ ಚಂದ್ರು 2,500 ರೂ., ತೊಟ್ಟಿ ನಿರ್ಮಾಣ ಮಾಡಲು ಹೋಟೆಲ್ ರಂಗಪ್ಪ, ನೀರು ಪೂರೈಕೆ ಹೀಗೆ ಅನೇಕ ದಾನಿಗಳು ಸಹಕಾರ ಮಾಡಿದ್ದಾರೆ ಎಂದು ಸ್ಮರಿಸಿದರು.
ಗ್ರೀನ್ ವಾರಿಯರ್ಸ್ ತಂಡದ ಎಂ.ಎನ್.ರಾಜಣ್ಣ, ರಾಮಾಂಜಿನೇಯ, ಬಾಲಾಜಿ, ಬಿ.ಮಂಜುನಾಥ, ನವೀನ್, ಅಫ್ರೀದ್, ಸ್ಥಳೀಯ ಮುಖಂಡರಾದ ರಾಜಗೋಪಾಲ, ಬಾಣಂ ಕೃಷ್ಣಪ್ಪ, ಜಗದೀಶ್, ಶಿಕ್ಷ ಕರಾದ ಎಂ.ಶಂಕರ್, ಸಂತೋಷ್ ಕುಮಾರ್, ಶ್ರೀರಾಮಪ್ಪ, ಯು.ರಾಮಾಂಜನೇಯ, ಗೋವಿಂದಪ್ಪ, ಪರಿಸರ ಪ್ರೇಮಿಗಳಾದ ಮಹಬೂಬ್ಪಾಷಾ, ಶ್ರೀನಾಥ್, ಯಶವಂತ್, ಗಣೇಶ್, ವಿದ್ಯುತ್ ವೈರ್ಮೆನ್ ಸಂಘದ ರಾಮಪ್ಪ, ಆದಿನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ವನ್ಯಜೀವಿಗಳ ಸಂರಕ್ಷ ಣೆಯ ಮುಖ್ಯಸ್ಥ ಜಿ.ಎನ್. ದ್ವಾರಕನಾಥ ನಾಯ್ಡು ಮಾತನಾಡಿ, ಗುಡಿಬಂಡೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚಿನ ನವಿಲುಗಳು, 15 ಸಾವಿರಕ್ಕೂ ಹೆಚ್ಚು ಜಿಂಕೆಗಳು ತಲತಲಾಂತರದಿಂದ ಜೀವಿಸುತ್ತಾ ಬಂದಿವೆ. ಆದರೆ ದುರದೃಷ್ಟವಶಾತ್ ವನ್ಯ ಸಂರಕ್ಷ ಣಾಧಿಕಾರಿಗಳಾಗಲಿಜಿಲ್ಲಾಡಳಿತವಾಗಲಿ ಕಾಡು ಪ್ರಾಣಿ, ಪಕ್ಷಿಗಳ ಸಂರಕ್ಷ ಣೆಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿಲ್ಲ. ನರೇಗಾ ಯೋಜನೆಯ ಮೂಲಕ ಕಾಡಿನಲ್ಲಿ ನೀರು ಶೇಖರಿಸುವ ಕುಂಟೆಗಳನ್ನು ಮಾಡಿದರೇ ಕಾಡುಪ್ರಾಣಿಗಳಿಗೆ ಸಹಕಾರವಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣ ಬಳಕೆ: ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಗುಂಪುಮರದ ಆನಂದ್ ಮಾತನಾಡಿ, ಹಲವಾರು ವರ್ಷಗಳಿಂದ ಅದರಲ್ಲೂ ಬೇಸಿಗೆ ಬಂತೆಂದರೆ ಕುಡಿವ ನೀರಿಲ್ಲದೆ ಪರಿತಪಿಸುವ ರಾಷ್ಟ್ರ ಪಕ್ಷಿಯ ಉಳಿವಿಗಾಗಿ ವಾಟ್ಸ್ ಆ್ಯಪ್ ಗ್ರೂಪ್, ಫೇಸ್ಬುಕ್ ಮೂಲಕ ವನ್ಯಜೀವಿಗಳ ಸಂರಕ್ಷ ಣೆಗೆ ಸಹಾಯಮಾಡಿ ಎಂದು ಗುಡಿಬಂಡೆ ಯುವಕರ ತಂಡ ಪ್ರಚಾರ ಪಡಿಸಿದ್ದರು. ಅದನ್ನು ನೋಡಿದ ಸಾಕಷ್ಟು ಜನರು ಅಕ್ಕಿ, ರಾಗಿ, ಜೋಳ, ನೀರಿನ ಟ್ಯಾಂಕ್, ಹಣ್ಣು, ತರಕಾರಿ ಸೇರಿದಂತೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈ ಯೋಜನೆಯ ಮುಖಾಂತರ ಅರಣ್ಯ ಪ್ರದೇಶದಲ್ಲಿ ತಕ್ಷ ಣ ಹಳ್ಳ ಇರುವ ಜಾಗದಲ್ಲಿ ನೀರು ನಿಲುವಂತೆ ಮಾಡಿ, ನಂತರ ನವಿಲುಗಳು ಸಂಚರಿಸುವ ಹಾದಿಯಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟು ಅವುಗಳಿಗೆ ಪ್ರತಿದಿನ ಮಳೆ ಬರುವವರೆಗೆ ಬೆಳಗ್ಗೆ ಮತ್ತು ಸಂಜೆ ಮೇವು, ನೀರು ನೀಡಲಾಗುವುದು ಎಂದರು.
ಜನರ ಸಹಕಾರ: ಗುಡಿಬಂಡೆ ಸುರಸದ್ಮಗಿರಿ ವಿದ್ಯುತ್ ವೈರ್ಮೆನ್ ಕಾರ್ಮಿಕರ ಸಂಘದಿಂದ 1.5 ಕ್ಷಿಂಟಾಲ್ ಮುಸುಕಿನ ಜೋಳ, ಚಿಕ್ಕಬಳ್ಳಾಪುರದ ಸಾಫ್ಟವೇರ್ ಎಂಜನಿಯರ್ ಚಂದ್ರು 2,500 ರೂ., ತೊಟ್ಟಿ ನಿರ್ಮಾಣ ಮಾಡಲು ಹೋಟೆಲ್ ರಂಗಪ್ಪ, ನೀರು ಪೂರೈಕೆ ಹೀಗೆ ಅನೇಕ ದಾನಿಗಳು ಸಹಕಾರ ಮಾಡಿದ್ದಾರೆ ಎಂದು ಸ್ಮರಿಸಿದರು.
ಗ್ರೀನ್ ವಾರಿಯರ್ಸ್ ತಂಡದ ಎಂ.ಎನ್.ರಾಜಣ್ಣ, ರಾಮಾಂಜಿನೇಯ, ಬಾಲಾಜಿ, ಬಿ.ಮಂಜುನಾಥ, ನವೀನ್, ಅಫ್ರೀದ್, ಸ್ಥಳೀಯ ಮುಖಂಡರಾದ ರಾಜಗೋಪಾಲ, ಬಾಣಂ ಕೃಷ್ಣಪ್ಪ, ಜಗದೀಶ್, ಶಿಕ್ಷ ಕರಾದ ಎಂ.ಶಂಕರ್, ಸಂತೋಷ್ ಕುಮಾರ್, ಶ್ರೀರಾಮಪ್ಪ, ಯು.ರಾಮಾಂಜನೇಯ, ಗೋವಿಂದಪ್ಪ, ಪರಿಸರ ಪ್ರೇಮಿಗಳಾದ ಮಹಬೂಬ್ಪಾಷಾ, ಶ್ರೀನಾಥ್, ಯಶವಂತ್, ಗಣೇಶ್, ವಿದ್ಯುತ್ ವೈರ್ಮೆನ್ ಸಂಘದ ರಾಮಪ್ಪ, ಆದಿನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.