ಆ್ಯಪ್ನಗರ

ಲಾಠಿ ಚಾರ್ಜ್‌ಗೆ ಯುವಕ ಸಾವು: ದೂರು ದಾಖಲಿಸಲು ಹಿಂದೇಟು

ಪೊಲೀಸರ ಲಾಠಿ ಚಾರ್ಜ್ ವೇಳೆ ಯುವಕ ಮೃತಪಟ್ಟಿರುವ ಪ್ರಕರಣ ದಾಖಲಿಸಲು ಚಿಕ್ಕಬಳ್ಳಾಪುರ ಪೊಲೀಸರು ಹಿಂದೇಟು ಹಾಕಿದ್ದಾರೆ.

Vijaya Karnataka Web 19 Feb 2018, 12:51 pm
ಚಿಕ್ಕಬಳ್ಳಾಪುರ: ಪೊಲೀಸರ ಲಾಠಿ ಚಾರ್ಜ್ ವೇಳೆ ಯುವಕ ಮೃತಪಟ್ಟಿರುವ ಪ್ರಕರಣ ದಾಖಲಿಸಲು ಚಿಕ್ಕಬಳ್ಳಾಪುರ ಪೊಲೀಸರು ಹಿಂದೇಟು ಹಾಕಿದ್ದಾರೆ.
Vijaya Karnataka Web police reject complaint
ಲಾಠಿ ಚಾರ್ಜ್‌ಗೆ ಯುವಕ ಸಾವು: ದೂರು ದಾಖಲಿಸಲು ಹಿಂದೇಟು


ದೂರು ಪಡೆಯಲು ಚಿಕ್ಕಬಳ್ಳಾಪುರ ಪೊಲೀಸರು ನಿರಾಕರಿಸಿದ ಪೊಲೀಸರು, ಅವರು ಹೇಳಿದಂತೆ ದೂರು ನೀಡಲು ಸೂಚಿಸಿರುವುದಾಗಿ ಮೃತ ವಿನಯ್ ಸಂಬಂಧಿಕರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪೊಲೀಸರ ವರ್ತನೆಗೆ ಮೃತ ವಿನಯ್ ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಪಕ್ಷ ದ ಚುನಾವಣಾ ವೀಕ್ಷಕರಾಗಿ ಭಾನುವಾರ ಸಂಜೆ ಕ್ಷೇತ್ರಕ್ಕೆ ಆಗಮಿಸಿದ್ದ ತಂಡಕ್ಕೆ 3 ಕಾಂಗ್ರೆಸ್‌ ಬಣಗಳು ಆಕ್ರೋಶದ ಸ್ವಾಗತ ಕೋರಿದವು. ಮೂರು ಬಣಗಳ ಮೇಲಾಟ ಗಲಾಟೆಗೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಮನಬಂದತೆ ಲಾಠಿ ಚಾರ್ಚ್‌ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ