ಆ್ಯಪ್ನಗರ

ಗರ್ಭಿಣಿ ಆತ್ಮಹತ್ಯೆ ಯತ್ನ: ಇಬ್ಬರು ಮಕ್ಕಳ ಸಾವು

ಗರ್ಭಿಣಿಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೃಷಿ ಹೊಂಡಕ್ಕೆ ಎಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

Vijaya Karnataka 6 May 2018, 4:56 pm
ಗುಡಿಬಂಡೆ: ಗರ್ಭಿಣಿಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೃಷಿ ಹೊಂಡಕ್ಕೆ ಎಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web pregnant suicide attempt two children dead
ಗರ್ಭಿಣಿ ಆತ್ಮಹತ್ಯೆ ಯತ್ನ: ಇಬ್ಬರು ಮಕ್ಕಳ ಸಾವು


ಘಟನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸುಮಿತ್ರಾ ಅವರ ಮಕ್ಕಳಾದ ದಿವ್ಯಾ (4) ಮತ್ತು ದೀಕ್ಷಾ (2) ಮೃತಪಟ್ಟಿದ್ದು, ತಾಯಿಯನ್ನು ಕುಟುಂಬದವರು ರಕ್ಷಿಸಿದ್ದಾರೆ. ಶುಕ್ರವಾರ ರಾತ್ರಿ ಮನೆಯಿಂದ ಮಕ್ಕಳೊಂದಿಗೆ ಹೊರಬಂದ ಸುಮಿತ್ರಾ ಗ್ರಾಮದ ಬೆಂಗಳೂರು ಮೂಲದವರಿಗೆ ಸೇರಿದ ಜಮೀನಿನ ಕೃಷಿ ಹೊಂಡಕ್ಕೆ ಮಕ್ಕಳ ಸಮೇತ ಹಾರಿದ್ದಾಳೆ. ಸುಮಿತ್ರಾ ಹಾಗೂ ಮಕ್ಕಳನ್ನು ಹುಡುಕುತ್ತಾ ಬಂದ ಕುಟುಂಬದವರಿಗೆ ಜಮೀನೊಂದರ ಕೃಷಿಹೊಂಡದಲ್ಲಿ ಆಕೆ ಬಿದ್ದು ಒದ್ದಾಡುತ್ತಿರುವ ಶಬ್ದ ಕೇಳಿಸಿತು. ತಕ್ಷಣ ಆಕೆಯನ್ನು ರಕ್ಷಿಸಿದ್ದು, ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ. ಈಕೆಯ ಪತಿ ವೆಂಕಟಶಿವರೆಡ್ಡಿಯಾಗಿದ್ದು, ಹುಟ್ಟಿದ ಮಕ್ಕಳೆಲ್ಲ ಹೆಣ್ಣೆಂಬ ಕಾರಣ, ಕೌಟಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಯತ್ನ ನಡೆಸಿದ್ದಾರೆನ್ನಲಾಗಿದೆ. ಗುಡಿಬಂಡೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ