ಆ್ಯಪ್ನಗರ

ಹೊಟ್ಟೆಯಲ್ಲಿ ಏನೋ ಸೇರಿಕೊಂಡಿದೆ ಎಂಬ ಸಂಶಯ..! ಸೀಮೆಎಣ್ಣೆ ಸುರಿದುಕೊಂಡು ಗರ್ಭಿಣಿ ಆತ್ಮಹತ್ಯೆ

ತನ್ನ ಹೊಟ್ಟೆಯಲ್ಲಿ ಇರೋದು ಮಗುವಲ್ಲ, ಬೇರೆ ಏನೋ ಸೇರಿಕೊಂಡಿದೆ ಎಂದು ಶ್ಯಾಮಲಾ ಭಾವಿಸಿದ್ದರು. ತುಂಬಾನೇ ಹೆದರಿದ್ದರು. ಹೀಗಾಗಿ, ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Vijaya Karnataka 23 Jan 2020, 5:38 pm
ಚಿಂತಾಮಣಿ (ಚಿಕ್ಕಬಳ್ಳಾಪುರ): ಜೀವನದಲ್ಲಿ ಜಿಗುಪ್ಸೆಗೊಂಡು ಗರ್ಭೀಣಿ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾವುಕರೆ ಗ್ರಾಮದಲ್ಲಿ ನಡೆದಿದೆ.
Vijaya Karnataka Web pregnent women suicide
ಹೊಟ್ಟೆಯಲ್ಲಿ ಏನೋ ಸೇರಿಕೊಂಡಿದೆ ಎಂಬ ಸಂಶಯ..! ಸೀಮೆಎಣ್ಣೆ ಸುರಿದುಕೊಂಡು ಗರ್ಭಿಣಿ ಆತ್ಮಹತ್ಯೆ


ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಗರ್ಭಿಣಿ ಮಹಿಳೆಯನ್ನು, ಚಿಂತಾಮಣಿ ತಾಲ್ಲೂಕು ಮುಂಗಾನಹಳ್ಳಿ ಹೋಬಳಿ ಮಾವುಕರೆ ಗ್ರಾಮದ 28 ವರ್ಷದ ಶ್ಯಾಮಲ ಎಂದು ಗುರ್ತಿಸಲಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಕೊತ್ತಕೋಟದ ವೆಂಕಟೇಶ್‌ ಎಂಬುವವರ ಜೊತೆ ಶ್ಯಾಮಲಾ ಅವರ ವಿವಾಹವಾಗಿತ್ತು. ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಶ್ಯಾಮಲರವರಿಗೆ ಮಕ್ಕಳಾಗಿರಲಿಲ್ಲ. ಇತ್ತೀಚೆಗೆ ಗರ್ಭಿಣಿಯಾಗಿದ್ದ ಶ್ಯಾಮಲಾ, ಆರು ತಿಂಗಳಾಗಿದ್ದಾಗ ಆಗಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಈ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಹಣ, ಒಡವೆ ಕಿತ್ಕೊಂಡು ಬೆತ್ತಲೆ ಮಾಡಿ ಕಾರ್‌ನಿಂದ ಹೊರತಳ್ಳಿದರು: ಅಪ್ರಾಪ್ತರ ಕೃತ್ಯಕ್ಕೆ ವಿದೇಶಿ ಮಹಿಳೆ ಶಾಕ್..!

ಗರ್ಭದಲ್ಲಿರುವ ಮಗುವಿನ ಬಗ್ಗೆಯೇ ಸಂಶಯ..!

ತನ್ನ ಹೊಟ್ಟೆಯಲ್ಲಿ ಇರೋದು ಮಗುವಲ್ಲ, ಬೇರೆ ಏನೋ ಸೇರಿಕೊಂಡಿದೆ ಎಂದು ಶ್ಯಾಮಲಾ ಭಾವಿಸಿದ್ದರು. ತುಂಬಾನೇ ಹೆದರಿದ್ದರು. ಹೀಗಾಗಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಶೌಚಾಲಯದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಖತರ್ನಾಕ್ ಅಜ್ಜಿಯ ಬೆಣ್ಣೆ ಮಾತಿಗೆ ಮರುಳಾಗಿ ಲಕ್ಷಾಂತರ ರೂ. ಚಿನ್ನ ಕಳೆದುಕೊಂಡ ಮಹಿಳೆ..!

ವಿಷಯ ತಿಳಿದ ಕೂಡಲೇ ಮಾವುಕರೆ ಗ್ರಾಮಕ್ಕೆ ಬಟ್ಲಹಳ್ಳಿ ಪೊಲಿಸ್‌ ಠಾಣೆಯ ಪಿಎಸೈ ಪಾಪಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿದರು. ಮೃತಳ ಸಂಬಂಧಿಕರು ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೆಂಡ್ತಿ, ಮಗನ ಎದುರಲ್ಲೇ ಕುಡುಕರಿಂದ ಏಟು ತಿಂದ ಟೆಕ್ಕಿ: ಕಿರಿಕ್ ತೆಗೆದು ಹಲ್ಲೆ ಮಾಡಿ ಪರಾರಿಯಾದ ಪುಂಡರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ