ಆ್ಯಪ್ನಗರ

ಸಮರ್ಪಕ ಗ್ಯಾಸ್‌ ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ

ಗ್ರಾಮದ ಗ್ಯಾಸ್‌ ಏಜೆನ್ಸಿಯಲ್ಲಿಅನಿಲ ವಿತರಣೆಯಲ್ಲಿವಿಳಂಬವಾಗುತ್ತಿದ್ದು, ಸಮಯ್ಕೆ ಸರಿಯಾಗಿ ವಿತರಿಸುವಂತೆ ಒತ್ತಾಯಿಸಿ ಗ್ರಾಮದ ಸುತ್ತ ಮುತ್ತಲ ಗ್ರಾಹಕರು ಪ್ರತಿಭಟನೆ ನಡೆಸಿದರು

Vijaya Karnataka 19 Sep 2019, 4:01 pm
ಚೇಳೂರು: ಗ್ರಾಮದ ಗ್ಯಾಸ್‌ ಏಜೆನ್ಸಿಯಲ್ಲಿಅನಿಲ ವಿತರಣೆಯಲ್ಲಿವಿಳಂಬವಾಗುತ್ತಿದ್ದು, ಸಮಯ್ಕೆ ಸರಿಯಾಗಿ ವಿತರಿಸುವಂತೆ ಒತ್ತಾಯಿಸಿ ಗ್ರಾಮದ ಸುತ್ತ ಮುತ್ತಲ ಗ್ರಾಹಕರು ಪ್ರತಿಭಟನೆ ನಡೆಸಿದರು
Vijaya Karnataka Web 18CLR2_10


ಚೇಳೂರು ಸುತ್ತಮುತ್ತಲಿನ ಗ್ರಾಹಕರು ಬೆಳಗ್ಗೆ 7 ಗಂಟೆಗೆ ಸ್ಟಾಕ್‌ ಬಂದ ಕಾರಣ ಗ್ರಾಮಸ್ಥರು ಸಿಲೆಂಡರ್‌ಗಾಗಿ ಬಂದು ಕಾದು ಕುಳಿತರೂ 11 ಗಂಟೆಯ ವೇಳೆಗೆ ಅಂಗಡಿ ಮಾಲೀಕ ಸಿಲೆಂಡರ್‌ ಸ್ಟಾಕ್‌ ಖಾಲಿಯಾಗಿದೆ ಎಂದು ಬೇಜವಬ್ದಾರಿ ಉತ್ತರ ನೀಡಿದ್ದಾರೆ. ನಾವು ಸಿಲೆಂಡರ್‌ಗಳನೇ ಅಲವಂಭಿಸಿರುವವರು ಸಿಲೆಂಡರ್‌ಗಳಿಲ್ಲದೆ ಅಡುಗೆ ಮಾಡಲು ಆಗುವುದಿಲ್ಲ. ಹೆಂಡತಿ ಮಕ್ಕಳ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಉಪವಾಸ ಇರಬೇಕಾದ ಪರಿಸ್ಥಿತಿ ಇದೆ. ಮಕ್ಕಳನ್ನು ಬೆಳಗ್ಗೆ ಶಾಲೆಗೆ ಕಳುಹಿಸಲು ಸಮಯಕ್ಕೆ ತಿಂಡಿ ಮಾಡಲಾಗದೆ ಅವರಿಗೂ ತೊಂದರೆಯಾಗುತ್ತಿದ್ದು, ಸುಮಾರು 15 ದಿನಗಳ ಹಿಂದೆ ಗ್ಯಾಸ್‌ನ್ನು ಆನ್‌ಲೈನ್‌ನಲ್ಲಿಬುಕ್‌ ಮಾಡಿದ್ದೇವೆ, ಒಂದು ವಾರದಿಂದ ಅಂಗಡಿಗೆ ಬಂದು ಹೋಗುತ್ತಿರುವುದು, ಅಂಗಡಿ ಮಾಲೀಕರನ್ನು ಕೇಳಿದರೆ ಇವತ್ತು ಸ್ಟಾಕ್‌ ಖಾಲಿಯಾಗಿದೆ ನಾಳೆ ಬನ್ನಿ ನೋಡೋಣ ಎಂದು ಹೇಳುತ್ತಾರೆಂದು ತಮ್ಮ ಅಳಲು ತೊಡಿಕೊಂಡರು.

ಹೇಳಿಕೆಯಲ್ಲೇ ಗೊಂದಲ: ಬೆಳಗ್ಗೆ 5.30ಗೆ ಲೋಡ್‌ ಬಂದಿದ್ದು, 6 ಗಂಟೆಗೆ ಕೊಡಲು ಸ್ಟಾರ್ಟ್‌ ಮಾಡಿದ್ದೀವೆಂದು ಮ್ಯಾನೇಜರ್‌ ಹೇಳುತ್ತಾರೆ. ಆದರೆ 10 ಗಂಟೆಯಿಂದ ಸಿಲೆಂಡರ್‌ ವಿತರಿಲು ಪ್ರಾರಂಭ ಮಾಡಿದ್ದೇವೆಂದು ಮಾಲೀಕರು ಹೇಳುತ್ತಾರೆ. ಆದರೆ ಬೆಳಗ್ಗೆ 7 ಗಂಟೆಗೆ ಬಂದು ನಾವು ಕ್ಯೂನಲ್ಲಿನಿಂತಿದ್ದು, 10 ಗಂಟೆಗೆ ಸ್ಟಾಕ್‌ ಇಲ್ಲಎಂದು ಹೇಳುತ್ತಾರೆ. ಯಾರ ಮಾತು ನಂಬುವುದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿ.ವಿ.ಅಶ್ವಥನಾರಾಯಣಶೆಟ್ಟಿ .ಸೋಮಶೇಖರ್‌, ಮಂಜುನಾಥ್‌, ಸುಧಾಕರ್‌, ಅಶೋಕ್‌. ಎಸ್‌.ಕೆ.ನರಸಿಂಹಪ್ಪ, ಬ್ರಹ್ಮಚಾರಿ, ಶಾಮೀಲ್‌ ಉಪಸ್ಥಿತರಿದ್ದರು.

ಮ್ಯಾನೇಜ್‌ಮೆಂಟ್‌ ಬೇರೆಯವರು ನೊಡಿಕೊಳ್ಳುತ್ತಾರೆ. ನಾನು ಎರಡು-ಮೂರು ದಿನಕ್ಕೆ ಒಮ್ಮೆ ಹೋಗಿ ಸಹಿ ಹಾಕುತ್ತೇನೆ. ಲೋಪದೋಷ ಇದ್ದಲ್ಲಿಸರಿಪಡಿಸುತ್ತೇನೆ, ದಯವಿಟ್ಟು ಸಹಕರಿಸಿ.
-ಮದ್ದಿರೆಡ್ಡಿ ಮಾಲೀಕರು, ಭಾರತ್‌ ಗ್ಯಾಸ್‌ ಏಜೆನ್ಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ