ಆ್ಯಪ್ನಗರ

ಆಧಾರ್‌ ನೋಂದಣಿ ಕೇಂದ್ರ ತೆರೆಯಲು ಪ್ರತಿಭಟನೆ

ಆಧಾರ್‌ ಕಾರ್ಡ್‌ ಕೇಂದ್ರ ಇಲ್ಲದೆ ಜನಸಾಮಾನ್ಯರು ಪರಿತಪಿಸುವಂತಾಗಿದೆ. ಹಾಗಾಗಿ ಕೂಡಲೇ ಆಧಾರ್‌ ಕೇಂದ್ರವನ್ನು ತೆರೆಯಬೇಕೆಂದು ಆಗ್ರಹಿಸಿ ನಾನಾ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 13 Jun 2019, 5:00 am
ಶಿಡ್ಲಘಟ್ಟ: ಆಧಾರ್‌ ಕಾರ್ಡ್‌ ಕೇಂದ್ರ ಇಲ್ಲದೆ ಜನಸಾಮಾನ್ಯರು ಪರಿತಪಿಸುವಂತಾಗಿದೆ. ಹಾಗಾಗಿ ಕೂಡಲೇ ಆಧಾರ್‌ ಕೇಂದ್ರವನ್ನು ತೆರೆಯಬೇಕೆಂದು ಆಗ್ರಹಿಸಿ ನಾನಾ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web protest to open aadhaar registration center
ಆಧಾರ್‌ ನೋಂದಣಿ ಕೇಂದ್ರ ತೆರೆಯಲು ಪ್ರತಿಭಟನೆ


ಕನ್ನಡ ರಕ್ಷ ಣಾ ವೇದಿಕೆ ಸ್ವಾಭಿಮಾನಿ ಬಣ, ಕರವೇ ಶಿವರಾಮೇಗೌಡ ಬಣ ಹಾಗೂ ಕರ್ನಾಟಕ ಜನಸೈನ್ಯದ ಕಾರ್ಯಕರ್ತರು ನಗರದ ಸಾರಿಗೆ ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ಶ್ರೀಧರ್‌ ಮಾತನಾಡಿ, ಇದೀಗ ಯಾವುದೇ ಇಲಾಖೆಯ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್‌ ಕಾರ್ಡ್‌ ಅಗತ್ಯವಾಗಿದೆ. ಅದರಲ್ಲೂ ಬ್ಯಾಂಕ್‌ಗಳಲ್ಲಿ ಆಧಾರ್‌ ಕಾರ್ಡ್‌ ಇಲ್ಲದೆ ಯಾವುದೇ ವಹಿವಾಟು ನಡೆಯೊಲ್ಲ ಎನ್ನುವಷ್ಟರ ಮಟ್ಟಿಗೆ ಆಧಾರ್‌ ಕಾರ್ಡ್‌ ಅಗತ್ಯವಾಗಿದೆ ಎಂದರು.

ಆದ್ದರಿಂದ ಆಧಾರ್‌ ಕಾರ್ಡ್‌ ಎಲ್ಲರಿಗೂ ಅಗತ್ಯವಾಗಿದ್ದು, ಅದನ್ನು ಒದಗಿಸುವುದು ಸರಕಾರದ ಆದ್ಯ ಕರ್ತವ್ಯ ಕೂಡ ಹೌದು. ಆದರೆ ನಗರದಲ್ಲಿ ಪ್ರಗತಿ ಗ್ರಾಮೀಣ ಕೃಷ್ಣ ಬ್ಯಾಂಕ್‌ನಲ್ಲಿ ಮಾತ್ರ ಒಂದು ಕೇಂದ್ರ ಇದೆ. ಅಲ್ಲಿ ಆಧಾರ್‌ ಕಾರ್ಡ್‌ ತೆಗೆಯುವುದು, ತಿದ್ದುಪಡಿ ಮಾಡಿಕೊಡುವುದು ಸೇರಿ ಯಾವುದಕ್ಕೂ ಮೂರು ತಿಂಗಳು ಬಿಟ್ಟು ಟೋಕನ್‌ ಕೊಡಲಾಗುತ್ತದೆ. ಹೊಸ ಕಾರ್ಡ್‌ ಪಡೆಯಲು, ತಿದ್ದುಪಡಿ ಮಾಡಲು ಮೂರು ತಿಂಗಳು ಕಾಯಲೇಬೇಕು. ಅಷ್ಟು ದಿನದವರೆಗೂ ಬ್ಯಾಂಕು ವ್ಯವಹಾರ, ಆಸ್ಪತ್ರೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ತೊಂದರೆ ಎದುರಾಗುತ್ತಿವೆ. ಹಾಗಾಗಿ ಮತ್ತೊಂದು ಆಧಾರ್‌ ಕಾರ್ಡ್‌ನ ಕೇಂದ್ರವನ್ನು ತೆಗೆದು ಎಲ್ಲರಿಗೂ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಇದೀಗ ಸಾಕಷ್ಟು ಮಂದಿ ತುರ್ತಾಗಿ ಕಾರ್ಡ್‌ ಬೇಕಾದವರು, ತಿದ್ದುಪಡಿ ಮಾಡಿಸಿಕೊಳ್ಳಬೇಕಾದವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರಕ್ಕೆ ಹೋಗಿ, ಅಲ್ಲಿ ಐನೂರು 600 ರೂ. ಕೊಟ್ಟು ದಿನಪೂರ್ತಿ ಕಾದು ಕಾಡ್‌ ಪಡೆಯಬೇಕು. ಕೂಲಿ ನಾಲಿ ಮಾಡಿ ಬದುಕುವ ಜನರು ದಿನಗಟ್ಟಲೆ ಕಾದು, ಹಣ ಕೊಟ್ಟು ಕಾರ್ಡ್‌ ಪಡೆಯಲು ತೊಂದರೆಯಾಗುತ್ತಿದೆ. ಆದ್ದರಿಂದ ತಾಲೂಕು ಆಡಳಿತದಿಂದ ಇಲ್ಲಿ ಒಂದೆರಡು ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ತೆರೆದು ಅನುಕೂಲ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.

ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಕಂದಾಯ ನಿರೀಕ್ಷ ಕ ವಿಶ್ವನಾಥ್‌ ಮನವಿ ಸ್ವೀಕರಿಸಿದರು. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಮಂಜುನಾಥ್‌, ಕನ್ನಡ ರಕ್ಷ ಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಕೆ.ಎ.ಮಂಜುನಾಥ್‌, ರವಿ, ಗಂಗಾಧರ್‌, ಡ್ಯಾನ್ಸರ್‌ ಮುನಿರಾಜು, ಅಪ್ಪು, ಗ್ಯಾರೇಜ್‌ ಮಣಿ ಇನ್ನಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ