ಬಾಗೇಪಲ್ಲಿ: ಅವೈಜ್ಞಾನಿಕ ಮೋಟಾರ್ ಕಾಯಿದೆ ವಿರೋಧಿಧಿಸಿ ತಾಲೂಕು ಫೆಡರೇಷನ್ ಆಫ್ ಆಟೋರಿಕ್ಷಾ ಡ್ರೈವರ್ಸ್ ಸಂಘ, ತಾಲೂಕು ಸಿಐಟಿಯು ಆಶ್ರಯದಲ್ಲಿಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿಮಾತನಾಡಿದ ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯ ರೆಡ್ಡಿ, ಕೇಂದ್ರ ಸರಕಾರ ಆಟೋಮೊಬೈಲ್ಸ್ ಇಂಡಸ್ಟ್ರೀಸ್ನ ಮಾಲೀಕರ ಲಾಬಿಗೆ ಮಣಿದು ಮೋಟಾರ್ ಕಾಯಿದೆ 2019ನ್ನು ಜಾರಿಗೆ ತಂದಿದೆ. ಆಟೋ ಚಾಲಕರು 69 ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿಎರಡನೇ ಸ್ಥಾನದಲ್ಲಿಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರಕಾರಗಳು ಯಾವುದೇ ರೀತಿಯಾದ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಾ ಬಂದಿದೆ. ಆಟೋ ಚಾಲಕರಿಂದ ಸರಕಾರ ಕೋಟ್ಯಂತರ ರೂ. ಗಳ ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಆಟೋ ಚಾಲಕರಿಗೆ ವಾಸಿಸಲು ಮನೆ, ಉತ್ತಮ ವೈದ್ಯಕೀಯ ಸೇವೆ, ಪಿಂಚಣಿ, ಮಕ್ಕಳಿಗೆ ವಿದ್ಯಾರ್ಥಿ ವೇತನಗಳು ನೀಡದೆ ಸರಕಾರಗಳು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.
ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಹೆಸರಿನಲ್ಲಿಕಾಯಿದೆಯನ್ನು ಮೂರು ಬಾರಿ ಬದಲಾವಣೆ ಮಾಡಿ ಈಗ 2019ರ ಮಸೂದೆ ಜಾರಿಗೆ ತಂದಿದ್ದಾರೆ. ಈಗಾಗಲೇ ಸರಕಾರವು 15 ವರ್ಷಗಳ ವಾಹನಗಳಿಗೆ ಯೋಗ್ಯತಾ ಪ್ರಮಾಣ ಪತ್ರವನ್ನು ನೀಡುವುದನ್ನು ನಿಲ್ಲಿಸಿದೆ. ಅದನ್ನೇ ನಂಬಿಕೊಂಡಿರುವ ಆಟೋ ಚಾಲಕರ ಜೀವನವನ್ನು ಬೀದಿಪಾಲು ಮಾಡಲು ಹೊರಟಿದೆ. 15 ವರ್ಷಗಳ ಆಟೋಗಳನ್ನು ನಿಷೇಧಿಧಿಸಲು ಹೊರಟಿರುವ ಸರಕಾರ ಪ್ರತಿ ವರ್ಷ ಏಕೆ ಯೋಗ್ಯತಾ ಪ್ರಮಾಣ ಪತ್ರವನ್ನು ನವೀಕರಿಸಲು ಆದೇಶಿಸಿದೆ. 15 ವರ್ಷಗಳ ಆಟೋಗಳನ್ನು ನಿಷೇಧಿಧಿಸುವುದಾದರೆ ಹಳೆಯ ಆಟೋಗಳಿಗೆ ನಿಗದಿತ ಬೆಲೆಯನ್ನು ನೀಡಬೇಕು ಹಾಗೂ ಸರಕಾರ ಪ್ರೋತ್ಸಾಹ ಧನವಾಗಿ 50 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.
ಉಪ ತಹಸೀಲ್ದಾರ್ ನಾಗರಾಜ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ತಾಲೂಕು ಆಟೋ ಯೂನಿಯನ್ ಅಧ್ಯಕ್ಷ ಭಾಸ್ಕರ್ರೆಡ್ಡಿ, ಕಾರ್ಯದರ್ಶಿ ನಂಜುಂಡ, ಖಜಾಂಚಿ ರವೀಂದ್ರ, ಸದಸ್ಯರಾದ ನಾರಾಯಣಸ್ವಾಮಿ, ವೆಂಕಟಾದ್ರಿ, ವೆಂಕಟೇಶ್, ಮಂಜುನಾಥ್, ಮುದ್ದಪ್ಪ, ಮೂರ್ತಿ ಸನಾವುಲ್ಲಾ, ಬಾಷಾ, ಮಂಜುನಾಥ್, ಈಶ್ವರಪ್ಪ, ಗಂಗುಲಪ್ಪ ರಾಜಪ್ಪ, ಹಬೀದುಲ್ಲಾಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿಮಾತನಾಡಿದ ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯ ರೆಡ್ಡಿ, ಕೇಂದ್ರ ಸರಕಾರ ಆಟೋಮೊಬೈಲ್ಸ್ ಇಂಡಸ್ಟ್ರೀಸ್ನ ಮಾಲೀಕರ ಲಾಬಿಗೆ ಮಣಿದು ಮೋಟಾರ್ ಕಾಯಿದೆ 2019ನ್ನು ಜಾರಿಗೆ ತಂದಿದೆ. ಆಟೋ ಚಾಲಕರು 69 ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿಎರಡನೇ ಸ್ಥಾನದಲ್ಲಿಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರಕಾರಗಳು ಯಾವುದೇ ರೀತಿಯಾದ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಾ ಬಂದಿದೆ. ಆಟೋ ಚಾಲಕರಿಂದ ಸರಕಾರ ಕೋಟ್ಯಂತರ ರೂ. ಗಳ ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಆಟೋ ಚಾಲಕರಿಗೆ ವಾಸಿಸಲು ಮನೆ, ಉತ್ತಮ ವೈದ್ಯಕೀಯ ಸೇವೆ, ಪಿಂಚಣಿ, ಮಕ್ಕಳಿಗೆ ವಿದ್ಯಾರ್ಥಿ ವೇತನಗಳು ನೀಡದೆ ಸರಕಾರಗಳು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.
ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಹೆಸರಿನಲ್ಲಿಕಾಯಿದೆಯನ್ನು ಮೂರು ಬಾರಿ ಬದಲಾವಣೆ ಮಾಡಿ ಈಗ 2019ರ ಮಸೂದೆ ಜಾರಿಗೆ ತಂದಿದ್ದಾರೆ. ಈಗಾಗಲೇ ಸರಕಾರವು 15 ವರ್ಷಗಳ ವಾಹನಗಳಿಗೆ ಯೋಗ್ಯತಾ ಪ್ರಮಾಣ ಪತ್ರವನ್ನು ನೀಡುವುದನ್ನು ನಿಲ್ಲಿಸಿದೆ. ಅದನ್ನೇ ನಂಬಿಕೊಂಡಿರುವ ಆಟೋ ಚಾಲಕರ ಜೀವನವನ್ನು ಬೀದಿಪಾಲು ಮಾಡಲು ಹೊರಟಿದೆ. 15 ವರ್ಷಗಳ ಆಟೋಗಳನ್ನು ನಿಷೇಧಿಧಿಸಲು ಹೊರಟಿರುವ ಸರಕಾರ ಪ್ರತಿ ವರ್ಷ ಏಕೆ ಯೋಗ್ಯತಾ ಪ್ರಮಾಣ ಪತ್ರವನ್ನು ನವೀಕರಿಸಲು ಆದೇಶಿಸಿದೆ. 15 ವರ್ಷಗಳ ಆಟೋಗಳನ್ನು ನಿಷೇಧಿಧಿಸುವುದಾದರೆ ಹಳೆಯ ಆಟೋಗಳಿಗೆ ನಿಗದಿತ ಬೆಲೆಯನ್ನು ನೀಡಬೇಕು ಹಾಗೂ ಸರಕಾರ ಪ್ರೋತ್ಸಾಹ ಧನವಾಗಿ 50 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.
ಉಪ ತಹಸೀಲ್ದಾರ್ ನಾಗರಾಜ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ತಾಲೂಕು ಆಟೋ ಯೂನಿಯನ್ ಅಧ್ಯಕ್ಷ ಭಾಸ್ಕರ್ರೆಡ್ಡಿ, ಕಾರ್ಯದರ್ಶಿ ನಂಜುಂಡ, ಖಜಾಂಚಿ ರವೀಂದ್ರ, ಸದಸ್ಯರಾದ ನಾರಾಯಣಸ್ವಾಮಿ, ವೆಂಕಟಾದ್ರಿ, ವೆಂಕಟೇಶ್, ಮಂಜುನಾಥ್, ಮುದ್ದಪ್ಪ, ಮೂರ್ತಿ ಸನಾವುಲ್ಲಾ, ಬಾಷಾ, ಮಂಜುನಾಥ್, ಈಶ್ವರಪ್ಪ, ಗಂಗುಲಪ್ಪ ರಾಜಪ್ಪ, ಹಬೀದುಲ್ಲಾಮತ್ತಿತರರು ಹಾಜರಿದ್ದರು.