ಆ್ಯಪ್ನಗರ

ಚಿಕ್ಕಬಳ್ಳಾಪುರ:ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶ, ಬೆಳೆ ದೃಢೀಕರಣವಿದ್ದರಷ್ಟೇ ರಾಗಿ ಖರೀದಿ

ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶಕ್ಕಾಗಿ ಕೃಷಿ ಇಲಾಖೆಯಲ್ಲಿ ಬೆಳೆ ದೃಧಿಢೀಕರಣ ಪತ್ರ ಹೊಂದಿರುವ ರೈತರಿಂದ ಮಾತ್ರ ರಾಗಿ ಖರೀದಿಸಲು ಚಿಕ್ಕಬಳ್ಳಾಪುರದಲ್ಲಿ ತೀರ್ಮಾನಿಸಲಾಗಿದೆ.

Vijaya Karnataka Web 17 Feb 2021, 10:43 pm
ಬಾಗೇಪಲ್ಲಿ: ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶಕ್ಕಾಗಿ ಕೃಷಿ ಇಲಾಖೆಯಲ್ಲಿ ಬೆಳೆ ದೃಧಿಢೀಕರಣ ಪತ್ರ ಹೊಂದಿರುವ ರೈತರಿಂದ ಮಾತ್ರ ರಾಗಿ ಖರೀದಿಸಲಾಗುತ್ತದೆ ಎಂದು ಆಹಾರ ಶಿರಸ್ತೆದಾರ್‌ ಆರ್‌.ರಾಜಣ್ಣ ತಿಳಿಸಿದರು.
Vijaya Karnataka Web finger millet


ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅವರಣದಲ್ಲಿಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಸ್ಥಾಪಿಸಿರುವ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅಧಿವಧಿರು, ರೈತರು ರಾಗಿ ನೀಡುವ ಮೊದಲು 2020-21ನೇ ಸಾಲಿನ ಮುಂಗಾರು ಋುತುವಿನಲ್ಲಿಕೃಷಿ ಇಲಾಖೆ ಜಾರಿ ಗೊಳಿಸಿರುವ ಪೋಧಿರ್ಟ್‌ ತಂತ್ರಾಂಶದಲ್ಲಿನೊಂದಾಯಿಸಿರುವ ರೈತರ ನೋಂದಣಿ ಸಂಖ್ಯೆ ಹಾಗೂ ಆಧಾರ್‌ ಕಾರ್ಡ್‌ ಸಂಖ್ಯೆ, ಹೆಸರನ್ನು ಕೇಂದ್ರದಲ್ಲಿನೋಂದಣಿ ಕಡ್ಡಾಯವಾಗಿರುತ್ತದೆ ಎಂದರು.

ಗುಣಮಟ್ಟದ ಪ್ರಮಾಣ ಪತ್ರ ಪಡೆಯಬೇಕು:
ರಾಗಿ ಮಾದರಿಯನ್ನು ಕೇಂದ್ರಕ್ಕೆ ನೀಡಿ, ದಾಸ್ತಾನು ಗುಣಮಟ್ಟದ ಪ್ರಮಾಣಪತ್ರ ಪಡೆದುಕೊಳ್ಳಬೇಕು. ದಾಸ್ತಾನು ಗುಣಮಟ್ಟ ಸರಿಇಲ್ಲದಿದ್ದರೆ ರೈತರು ತಮ್ಮ ಖರ್ಚಿನಿಂದಲೇ ರಾಗಿಯನ್ನು ವಾಪಸ್‌ ತೆಗೆದುಕೊಂಡ ಹೋಗಬೇಕು. ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ರೈತರಿಂದ ಪ್ರತಿ ಎಕರಗೆ 10 ಕ್ವಿಂಟಾಲ್‌ನಂತೆ 50 ಕ್ವಿಂಟಾಲ್‌ ರಾಗಿ ಮಾತ್ರ ಖರೀದಿಸಲಾಗುತ್ತದೆ.

ಹಿಪ್ಪುನೇರಳೆ ಸೊಪ್ಪಿಗೆ ಹೆಚ್ಚಿದ ಬೇಡಿಕೆ: ಒಂದು ಮೂಟೆಗೆ 500 ರೂ, ಸೊಪ್ಪಿಗಿಂತ ಗೂಡಿನ ದರ ಕಡಿಮೆ!

ಮಾರ್ಚ್ 15ರೊಳಗೆ ಖರೀದಿ: ನೋಂದಾಯಿತ ರೈತರಿಂದ ಮಾರ್ಚ್ 15ರೊಳಗೆ ರಾಗಿ ಖರೀದಿ ಮಾಡಲಾಗುತ್ತದೆ. ರೈತರಿಂದ ಮಾತ್ರ ನೇರವಾಗಿ ರಾಗಿ ಖರೀದಿಸಿ ಫೊ್ರೕಟ್ಸ್‌ ದತ್ತಾಂಶದಲ್ಲಿನೀಡಿರುವ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ ಎಂದರು.

ವ್ಯಾಲಂಟೈನ್ಸ್‌ ಡೇ: ನಂದಿ ಬೆಟ್ಟಕ್ಕೆ ಪ್ರೇಮಿಗಳ ದಾಂಗುಡಿ..! ಕಣ್ಣಾಯಿಸಿದ ಕಡೆಯಲ್ಲಾ ಲವ್‌ ಬರ್ಡ್ಸ್‌ ಕಲರವ

1328 ರೈತರಿಂದ ನೋಂದಣಿ: ಉಪ ತಹಶೀಲ್ದಾರ್‌ ಸಿ.ಸೂರ್ಯನಾರಾಯಣ ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್‌ಫೋರ್ಸ್‌ ಸಮಿತಿ ತೀರ್ಮಾನದಂತೆ ತಾಲೂಕಿನ ರೈತರಿಂದ ಗುಣಮಟ್ಟದ ರಾಗಿ ಖರೀದಿಸಲಾಗುತ್ತದೆ. ಒಂದು ಕ್ವಿಂಟಾಲ್‌ ರಾಗಿಗೆ 3295 ರೂ. ನೀಡಲಾಗುತ್ತದೆ.

ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ನಗರಗಳಿಗೆ ಬೇಸಿಗೆಯಲ್ಲಿ ಕಾಡಲಿದೆ ನೀರಿನ ಅಭಾವ..!

ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ ಕಸಬಾ, ಚೇಳೂರು, ಪಾತಪಾಳ್ಯ, ಮಿಟ್ಟೇಮರಿ, ಗೂಳೂರು ಸೇರಿದಂತೆ 5 ಹೋಬಳಿಗಳಿಂದ ಈಗಾಗಲೇ 1328 ಜನ ರೈತರು ರಾಗಿ ನೀಡಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿಹೆಸರು ನೊಂದಾಯಿಸಿಕೊಂಡಿದ್ದು, ಮಾಹಿತಿಗೆ 9945938296 ಸಂಪರ್ಕಿಸುವಂತೆ ತಿಳಿಸಿದರು. ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆ ವ್ಯವಸ್ಥಾಪಕ ನಂಜಪ್ಪ, ರಾಗಿ ಗುಣಮಟ್ಟ ಪರೀವೀಕ್ಷಕ ಮೋಹನ್‌ ಕುಮಾರ್‌, ಸಿಬ್ಬಂದಿ ಮಹಮ್ಮದ್‌ ಅಜುರುದ್ದೀನ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ