ಆ್ಯಪ್ನಗರ

ಸಿರಿಧಾನ್ಯಗಳ ಬೆಳೆಗೆ ಹೆಚ್ಚು ಒತ್ತು ನೀಡಿ

ಆರ್ಥಿಕವಾಗಿ ರೈತರು ಅಭಿವೃದ್ಧಿಯಾಗಲು ಸಿರಿಧಾನ್ಯ ಬೆಳೆಯಲು ಹೆಚ್ಚು ಒತ್ತು ನೀಡಬೇಕು. ಅದಕ್ಕೆ ಕೃಷಿ ಇಲಾಖೆ ಬೇಕಾಗುವ ಸಹಕಾರ ನೀಡಲು ಸದಾ ಸಿದ್ಧ ಎಂದು ಮಾಜಿ ಕೃಷಿ ಸಚಿವ ಹಾಗೂ ಶಾಸಕ ಎನ್‌.ಎಚ್‌.ಶಿವಶಂಕರ ರೆಡ್ಡಿ ತಿಳಿಸಿದರು.

Vijaya Karnataka 20 Aug 2019, 5:00 am
ಗೌರಿಬಿದನೂರು: ಆರ್ಥಿಕವಾಗಿ ರೈತರು ಅಭಿವೃದ್ಧಿಯಾಗಲು ಸಿರಿಧಾನ್ಯ ಬೆಳೆಯಲು ಹೆಚ್ಚು ಒತ್ತು ನೀಡಬೇಕು. ಅದಕ್ಕೆ ಕೃಷಿ ಇಲಾಖೆ ಬೇಕಾಗುವ ಸಹಕಾರ ನೀಡಲು ಸದಾ ಸಿದ್ಧ ಎಂದು ಮಾಜಿ ಕೃಷಿ ಸಚಿವ ಹಾಗೂ ಶಾಸಕ ಎನ್‌.ಎಚ್‌.ಶಿವಶಂಕರ ರೆಡ್ಡಿ ತಿಳಿಸಿದರು.
Vijaya Karnataka Web put more emphasis on the crop of cereals
ಸಿರಿಧಾನ್ಯಗಳ ಬೆಳೆಗೆ ಹೆಚ್ಚು ಒತ್ತು ನೀಡಿ


ತಾಲೂಕಿನ ತೊಂಡೇಬಾವಿ ಹೋಬಳಿಯಲ್ಲಿ 2019ರ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಹಾಗೂ ರೈತ ಸಂಪರ್ಕ ಕೇಂದ್ರ ಮತ್ತು ಗೋದಾಮು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರಿಗೆ ವಿಮೆ ಹಣ ಕಳೆದ ಸಾಲಿನ 12 ಕೋಟಿ ರೂ. ಬಿಡುಗಡೆಯಾಗಿದ್ದು, ಅದು ರೈತರ ಖಾತೆ ನೇರವಾಗಿ ವರ್ಗ ಆಗಲಿದ್ದು, ಶೇ.70 ರಷ್ಟು ರೈತರಿಗೆ ಹಣ ಬಂದಿದೆ. ಕಡ್ಡಾಯವಾಗಿ ರೈತರು ಬೆಳೆ ವಿಮೆ ಮಾಡಬೇಕು. ಜತೆಗೆ ಕೃಷಿ ಸಮ್ಮಾನ್‌ ಯೋಜನೆ ಹಣ ಸಹ ಹಲವಾರಿಗೆ ಬಂದಿದೆ ಎಂದು ತಿಳಿಸಿದರು.

ಜಲಾಮೃತ ಯೋಜನೆ ಜಾರಿ:
ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೆ ರೈತರಿಗೆ ಸಂಕಷ್ಟವಾಗಿದೆ. ಇನ್ನಾದರೂ ಮಳೆ ಬಂದಾಗ ಆ ನೀರನ್ನು ಇಂಗಿಸುವ ಕಾರ್ಯಕ್ಕೆ ರೈತರು ಮುಂದಾಗಬೇಕು. ಜತೆಗೆ ಜಮೀನಿನಲ್ಲಿ ಬದುಗಳನ್ನು ತೆಗೆಯಬೇಕು ಹಾಗೂ ಪೋಷಕ ಕಾಲುವೆಗಳ ನಿರ್ಮಾಣ ಮಾಡಬೇಕು. ಆಗ ಬಿದ್ದ ಮಳೆ ಒಂದೆಡೆ ಇಂಗಿ ಬೆಳೆಗೆ ಸಹಾಯ ಆಗುತ್ತದೆ. ಇದಕ್ಕೆ ಸರಕಾರ ಜಲಾಮೃತ ಯೋಜನೆಯಲ್ಲಿ ರೈತರಿಗೆ 10 ಸಾವಿರ ಸಹಾಯ ಧನವನ್ನು ನರೇಗಾ ಯೋಜನೆಯಡಿ ನೀಡಲಿದೆ ಎಂದರು.

ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ಮಾತನಾಡಿ, ರಾಜ್ಯದಲ್ಲಿ ಪ್ರಕೃತಿ ಮುನಿಸಿಕೊಂಡು ಒಂದೆಡೆ ಅತಿವೃಷ್ಟಿಯಾದರೆ, ಇನ್ನೊಂದೆಡೆ ಅನಾವೃಷ್ಟಿಯಾಗಿ ರೈತರ ಬದುಕು ದುಸ್ತರವಾಗಿದೆ ಎಂದು ವಿಷಾದಿಸಿದರು.

ಜಿಪಂ ಸದಸ್ಯರಾದ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ತಾಪಂ ಸದಸ್ಯರಾದ ಶ್ರೀನಿವಾಸ್‌ ಗೌಡ, ಎಂ.ಸಿ. ಗಂಗಪ್ಪ, ಗ್ರಾಪಂ ಅಧ್ಯಕ್ಷ ನಾಗರತ್ನಮ್ಮ, ಮುಖಂಡರಾದ ಮರಳೂರು ಹನುಮಂತ ರೆಡ್ಡಿ, ಬೊಮ್ಮಣ್ಣ, ಅಶ್ವತ್ಥನಾರಾಯಣಗೌಡ, ಕೃಷಿ ಅಧಿಕಾರಿ ಮಂಜುನಾಥ್‌, ತೋಟಗಾರಿಕೆ ಅಧಿಕಾರಿ ರವಿಕುಮಾರ್‌, ರೇಷ್ಮೆ ಇಲಾಖೆಯ ಮುರಳೀಧರ್‌, ಪಶುಸಂಗೋಪ ಇಲಾಖೆಯ ಮಾರುತಿ ರೆಡ್ಡಿ, ಇಒ ಮುನಿರಾಜು, ರೈತ ಸಂಘದ ಎಂ.ಆರ್‌. ಲಕ್ಷ್ಮಿನಾರಾಯಣ್‌, ವಿಜ್ಞಾನಿ ಗಾಯತ್ರಿ, ಪಿಡಿಒ ಶ್ರೀನಿವಾಸ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ