ಆ್ಯಪ್ನಗರ

ರೇಷ್ಮೆ ಇಲಾಖೆ ಆಯುಕ್ತರಿಗೆ ಮನವಿ

ಮುಂದಿನ ದಿನಗಳಲ್ಲಿರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆನೂಲು ಬಿಚ್ಚಾಣಿಕೆದಾರರ ಪ್ರತ್ಯೇಕ ಸಭೆ ಕರೆದು ಮಾರುಕಟ್ಟೆ ಹಾಗೂ ರೇಷ್ಮೆ ಕೃಷಿ ರೇಷ್ಮೆ ಉದ್ದಿಮೆಯಲ್ಲಿನ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ರೇಷ್ಮೆ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದರು.

Vijaya Karnataka 16 Oct 2019, 3:25 pm
ಶಿಡ್ಲಘಟ್ಟ: ಮುಂದಿನ ದಿನಗಳಲ್ಲಿರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆನೂಲು ಬಿಚ್ಚಾಣಿಕೆದಾರರ ಪ್ರತ್ಯೇಕ ಸಭೆ ಕರೆದು ಮಾರುಕಟ್ಟೆ ಹಾಗೂ ರೇಷ್ಮೆ ಕೃಷಿ ರೇಷ್ಮೆ ಉದ್ದಿಮೆಯಲ್ಲಿನ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ರೇಷ್ಮೆ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದರು.
Vijaya Karnataka Web requests to the silk department commissioner
ರೇಷ್ಮೆ ಇಲಾಖೆ ಆಯುಕ್ತರಿಗೆ ಮನವಿ


ನಗರದಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರು, ಮಾರುಕಟ್ಟೆಯಲ್ಲಿನ ಇ-ಹರಾಜು ವ್ಯವಸ್ಥೆಯ ನಿರ್ವಹಣೆ ಸೇರಿದಂತೆ ಮಾರುಕಟ್ಟೆಯ ಆಡಳಿತಾತ್ಮಕ ವ್ಯವಸ್ಥೆಗಳನ್ನು ವೀಕ್ಷಿಸಿದ ನಂತರ ರೈತರು ಹಾಗೂ ರೇಷ್ಮೆ ರೀಲರ್‌ಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರು.

ಈ ವೇಳೆ ಆಯುಕ್ತರನ್ನು ಭೇಟಿ ಮಾಡಿದ ಹಸಿರು ಸೇನೆ ರೈತ ಸಂಘದ ಮುಖಂಡ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿನ ರೂತರು, ರೇಷ್ಮೆ ಗೂಡಿನ ಬೆಲೆ ಕುಸಿದಾಗ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರಿಗೆ ಸ್ಪಂದಿಸಬೇಕು, ರೇಷ್ಮೆಗೂಡು ಮಾರುಕಟ್ಟೆಯಲ್ಲಿಕುಡಿವ ನೀರು ಸ್ವಚ್ಛತೆ ಇನ್ನಿತರೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿ32ಕ್ಕೂ ಹೆಚ್ಚು ಮಂದಿ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಪ್ರತಿ ತಿಂಗಳೂ ಸರಿಯಾಗಿ ವೇತನ ನೀಡುತ್ತಿಲ್ಲ. ಪ್ರತಿ ತಿಂಗಳು ಸಂಬಳ ಬರದೇ ಇದ್ದಾಗ ಅವರು ಬೇರೆ ಬೇರೆ ಮಾರ್ಗಗಳನ್ನು ಹಿಡಯುವಂತಾಗುತ್ತದೆ. ಹಾಗಾಗಿ ಪ್ರತಿ ತಿಂಗಳು ಸಂಬಳ ಬಿಡುಗಡೆ ಮಾಡಿ. ರೇಷ್ಮೆ ಬೆಳೆಗಾರರ ಹಿತಕ್ಕಾಗಿ ಬಸವರಾಜು ಸಮಿತಿಯು ಶಿಫಾರಸ್ಸು ಮಾಡಿರುವ ವರದಿಗಳನ್ನು ಯಥಾವತ್ತಾಗಿ ಜಾರಿ ಮಾಡಿ ರೈತರನ್ನು ಉಳಿಸಬೇಕೆಂದು ಮನವಿ ಮಾಡಿದರು.

ಪುಟ್ಟಣ್ಣಯ್ಯ ಬಣದ ರೈತ ಸಂಘದ ಮುಖಂಡ ವೆಂಕಟಸ್ವಾಮಿ ನೇತೃತ್ವದ ರೈತರು ಮನವಿ ಸಲ್ಲಿಸಿ, ಪೀಪಾ ತಯಾರಿಕೆ ಘಟಕಗಳು ನಗರದಲ್ಲೆಇದ್ದು ಅದರಿಂದ ಹೊರಸೂಸುವ ದುರ್ನಾತವು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಬೀರುತ್ತಿವೆ. ಪೀಪಾ ತೆಗೆಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲಿಗೆ ಈ ಹಿಂದಿನ ಡಿಸಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿ ನಗರದಿಂದ ಹೊರಗೆ ಈ ಘಟಕಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದ್ದರೂ ಪಾಲನೆ ಆಗಿಲ್ಲಎಂದು ದೂರಿದರು.

ಕೆಎಸ್‌ಎಂಬಿಯನ್ನು ಮತ್ತೆ ಪುನರಾರಂಭಿಸಬೇಕು, ಸರಕಾರಿ ರೇಷ್ಮೆಗೂಡು ತೆಗೆಯುವ ಕಾರ್ಖಾನೆಗಳನ್ನು ಆರಂಭಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟರು.

ರೀಲರ್ಸ್ ಸಂಘದ ಅಧ್ಯಕ್ಷ ಅನ್ಸರ್‌ ಖಾನ್‌ ಮತ್ತು ಇತರೆ ರೀಲರುಗಳು ಭೇಟಿ ಮಾಡಿ, ಇ-ಹರಾಜು ನಿರ್ವಹಣೆಗೆ ಇಲ್ಲಿತಂತ್ರಜ್ಞರಿಲ್ಲ. ರೀಲರುಗಳಲ್ಲದ ಅನಧಿಕೃತ ವ್ಯಕ್ತಿಗಳು ಸಹ ಹರಾಜಿನಲ್ಲಿಭಾಗವಹಿಸುತ್ತಾರೆ. ರೀಲರುಗಳು ಮಾರುಕಟ್ಟೆಗೆ ಪ್ರವೇಶಿಸಲು ಬಯೋ ಮೆಟ್ರಿಕ್‌ ಪದ್ಧತಿಯನ್ನು ಅಳವಡಿಸಬೇಕು. ಸ್ಥಗಿತಗೊಂಡ ರೀಲರ್ಸ್ ಸಹಕಾರ ಸಂಘವನ್ನ ಮತ್ತೆ ಆರಂಭಿಸಬೇಕು ಎಂಬ ಬೇಡಿಕೆಗಳ ಮನವಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ