ಆ್ಯಪ್ನಗರ

ವಿದ್ಯುತ್‌ ಕಂಬಕ್ಕೆ ಶಾಲಾ ಬಸ್‌ ಡಿಕ್ಕಿ: ತಪ್ಪಿದ ಅನಾಹುತ

11 ಕೆವಿ ಸಾಮರ್ಥ್ಯ‌ದ ವಿದ್ಯುತ್‌ ಕಂಬಕ್ಕೆ ಶಾಲಾ ವಾಹನೊಂದು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್‌ ವಾಹನದಲ್ಲಿದ್ದ ಶಾಲಾ ಮಕ್ಕಳು ಯಾವುದೇ ತೊಂದರೆಯಾಗದೇ ಪಾರಾಗಿರುವ ಘಟನೆ ತಾಲೂಕಿನ ಮುದ್ದೇನಹಳ್ಳಿ ಬಳಿಯಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.

Vijaya Karnataka 3 Mar 2019, 5:00 am
ಚಿಕ್ಕಬಳ್ಳಾಪುರ : 11 ಕೆವಿ ಸಾಮರ್ಥ್ಯ‌ದ ವಿದ್ಯುತ್‌ ಕಂಬಕ್ಕೆ ಶಾಲಾ ವಾಹನೊಂದು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್‌ ವಾಹನದಲ್ಲಿದ್ದ ಶಾಲಾ ಮಕ್ಕಳು ಯಾವುದೇ ತೊಂದರೆಯಾಗದೇ ಪಾರಾಗಿರುವ ಘಟನೆ ತಾಲೂಕಿನ ಮುದ್ದೇನಹಳ್ಳಿ ಬಳಿಯಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.
Vijaya Karnataka Web school bus collision for electric pole missed by accident
ವಿದ್ಯುತ್‌ ಕಂಬಕ್ಕೆ ಶಾಲಾ ಬಸ್‌ ಡಿಕ್ಕಿ: ತಪ್ಪಿದ ಅನಾಹುತ


ನಗರದ ನ್ಯೂಟನ್‌ ಗ್ರಾಮರ್‌ ಶಾಲೆಯ ಖಾಸಗಿ ಶಾಲಾ ವಾಹನವು ಮಧ್ಯಾಹ್ನ ಮಕ್ಕಳನ್ನು ಬಿಡಲು ಹೊರಟಿದ್ದಾಗ ಈ ಘಟನೆ ನಡೆದಿದೆ. ವಾಹನದ ರಭಸಕ್ಕೆ ಕಂಬ ಅರ್ಧಕ್ಕೆ ಮುರಿದು ವಾಹನದ ಮೇಲೆಯೇ ಉರುಳಿದ್ದು, ತಂತಿಗಳು ಬಸ್‌ನ ಮೇಲೆ ತೇಲಾಡುತ್ತಿದ್ದವು.

ಇನ್ನು ಘಟನೆಯಲ್ಲಿ ವಾಹನದ ಮುಂಬಾಗ ಭಾಗಶಃ ಜಖಂಗೊಂಡಿದ್ದು, ಬಸ್‌ನಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೇರಿದಂತೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ನಂದಿಗಿರಿಧಾಮ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ