ಆ್ಯಪ್ನಗರ

ಬಾಲಮಂದಿರದ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಕಾವಲುಗಾರರು

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗಾಗಿ ಇರುವ ಪುನರ್ವಸತಿ ಕೇಂದ್ರವಾದ ಬಾಲಮಂದಿರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಬಾಲಕಿಯರನ್ನು ಕಾವಲುಗಾರರೇ ಪುಸಲಾಯಿಸಿ ಲೈಂಗಿಕ ಚಟವಟಿಕೆಗಳಿಗೆ ಬಳಕೆ ಮಾಡುತಿದ್ದ ಭಯಾನಕ ಪ್ರಕರಣ ನಗರದ ಬಾಲಂದಿರದಲ್ಲಿ ಬೆಳಕಿಗೆ ಬಂದಿದೆ.

Vijaya Karnataka 30 Mar 2019, 4:25 pm
ಚಿಕ್ಕಬಳಾಪುರ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗಾಗಿ ಇರುವ ಪುನರ್ವಸತಿ ಕೇಂದ್ರವಾದ ಬಾಲಮಂದಿರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಬಾಲಕಿಯರನ್ನು ಕಾವಲುಗಾರರೇ ಪುಸಲಾಯಿಸಿ ಲೈಂಗಿಕ ಚಟವಟಿಕೆಗಳಿಗೆ ಬಳಕೆ ಮಾಡುತಿದ್ದ ಭಯಾನಕ ಪ್ರಕರಣ ನಗರದ ಬಾಲಂದಿರದಲ್ಲಿ ಬೆಳಕಿಗೆ ಬಂದಿದೆ.
Vijaya Karnataka Web sexual use guards for childbirth girls
ಬಾಲಮಂದಿರದ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಕಾವಲುಗಾರರು


ನಗರದ ನಗರ್ತಪೇಟೆಯ ಮುಖ್ಯ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿರುವ ಸರಕಾರಿ ಬಾಲ ಮಂದಿರದಲ್ಲಿ ಈ ಘಟನೆ ನಡೆದಿದೆ. ಕಾಪಾಡುವ ಹೊಣೆ ಹೊತ್ತ ಕಾವಲುಗಾರರೇ ಬಾಲಕಿಯರನ್ನು ಹಣದಾಸೆಗೆ ರಾತ್ರಿ ವೇಳೆ ಕದ್ದು ಮುಚ್ಚಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಾಲಕಿಯರಿಂದಲೇ ಬಹಿರಂಗಗೊಂಡಿದೆ. ಇದು ಸಾರ್ವಜನಿಕರಲ್ಲಿ ತೀರ್ವ ಚರ್ಚೆಗೆ ಕಾರಣವಾಗಿದ್ದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

ಏನಿದು ಪ್ರಕರಣ?:
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ (ಫೊಕ್ಸೋ ) ಪ್ರಕರಣಗಳಲ್ಲಿ ಸಂತ್ರಸ್ತರಾದ ಮಕ್ಕಳನ್ನು ಬಾಲಮಂದಿರಕ್ಕೆ ದಾಖಲಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳಲ್ಲಿ ನಾಲ್ಕು ಮಂದಿ ಸಂತ್ರಸ್ತ ಬಾಲಕಿಯರನ್ನು ದಾಖಲು ಮಾಡಲಾಗಿದೆ. ಇವರಲ್ಲಿ ಇತ್ತೀಚೆಗೆ ಇಬ್ಬರು ಬಾಲಕಿಯರು ಕಾಣೆಯಾಗಿದ್ದು, ಉಳಿದ ಇಬ್ಬರು ಬಾಲಕಿಯರನ್ನು ಭದ್ರತೆಗಾಗಿ ನಿಯೋಜನೆಗೊಂಡಿದ್ದ ಗುತ್ತಿಗೆ ನೌಕರರೇ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಸಂಗತಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡ್ಲ್ಯೂಸಿ) ಸದಸ್ಯರ ಎದುರೇ ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ.

ಇಷ್ಟದ ಆಹಾರ ನೀಡಿ ಕಾರ್ಯಸಾಧನೆ: ಬಾಲಮಂದಿರದ ರಕ್ಷಣೆಗೆ ರಾತ್ರಿ ಕಾವಲುಗಾರಳಾಗಿ ನಿಯೋಜನೆಗೊಂಡಿದ್ದ ಭಾಗ್ಯಮ್ಮ ಸಂತ್ರಸ್ತರನ್ನು ಬಳಸಿಕೊಂಡು ಅನ್ಯ ಮಾರ್ಗಗಳ ಮೂಲಕ ಹಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದಳು. ರಾತ್ರಿ ಕಾವಲಿಗೆ ಬರುವಾಗ ಸಂತ್ರಸ್ತೆಯರಿಗೆ ಇಷ್ಟವಾದ ಆಹಾರವನ್ನು ತಂದು ಮಂದಿರದ ಮೇಲ್ಮಹಡಿಗೆ ಕರೆದುಕೊಂಡು ಹೋಗಿ ಉಣಬಡಿಸುವ ಸಂದರ್ಭದಲ್ಲಿ ಈ ರೀತಿಯ ಅಕ್ರಮ ಚಟವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಳು ಎನ್ನುವುದು ಅಧಿಕಾರಿಗಳು ಹೇಳುವ ಮಾತು.

ಅಲ್ಲದೆ ಪೋಕ್ಸೋ ಕಾಯ್ದೆಯಲ್ಲಿ ಬಂಧಿತರಾದವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಬಂದ ನಂತರ ತಾವು ಪ್ರೀತಿಸುತ್ತಿದ್ದ ಹುಡುಗಿಯರನ್ನು ಕಾಣಲು ತವಕಿಸುವುದು ಸಾಮಾನ್ಯ. ಇಂತಹವರ ಸ್ನೇಹವನ್ನು ಸಂಪಾದಿಸಿದ್ದ ಭದ್ರತಾ ಸಿಬ್ಬಂದಿ ಭಾಗ್ಯಮ್ಮ ಕಾನೂನುಬಾಹಿರವಾಗಿ ಅವರಿಗಾಗಿ ಕದ್ದು ಮುಚ್ಚಿ ಸಂತ್ರಸ್ತೆಯರನ್ನು ಹೊರಗಡೆ ಕಳುಹಿಸುತ್ತಿದ್ದಳು. ಇದೇ ಅಕ್ರಮ ಚಟವಟಿಕೆಗಳಿಗೆ ಅನುಕೂಲವಾಗಲೆಂದು ಬಾಲಮಂದಿರದ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ರೂಮೊಂದನ್ನು ಬಾಡಿಗೆಗೆ ಪಡೆದಿದ್ದ ಸರೋಜಮ್ಮ ಅವರ ನೆರವನ್ನು ಪಡೆದಿದ್ದಳು ಎನ್ನುವುದು ಅಧಿಕಾರಿಗಳ ಮಾಹಿತಿಯಾಗಿದೆ.

ದೂರು ದಾಖಲು:
ಪ್ರಕರಣ ಬಯಲಿಗೆ ಬಂದ ತಕ್ಷಣವೇ ಬಾಲ ಮಂದಿರದ ಸೂಪರಿಂಟೆಂಡೆಂಟ್‌ ನಾಗಭೂಷಣಾಚಾರಿ ಬುಧವಾರ ರಾತ್ರಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಅದರನ್ವಯ ಪೊಲೀಸರು ಭದ್ರತಾ ಸಿಬ್ಬಂದಿ ಭಾಗ್ಯಮ್ಮ ಹಾಗೂ ಸರೋಜಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ನಿಷ್ಪಕ್ಷಪಾತ ತನಿಖೆಯಾಗಲಿ: ನಗರದ ಹೃದಯ ಭಾಗದಲ್ಲಿಯೇ ಇಂತಹ ಹೇಯ ಕೃತ್ಯ ನಡೆದಿರುವುದು ನಾಗರಿಕರು ಬೆಚ್ಚಿಬೀಳುವಂತೆ ಮಾಡಿದ್ದು, ಗುರುವಾರ, ಜಿಲ್ಲಾ ನ್ಯಾಯಾಧೀಶ ಎಸ್‌.ಎಚ್‌ ಕೊರಡ್ಡಿ, ಮಕ್ಕಳ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಆಂಟೋನಿ ಸೆಬಾಸ್ಟಿಯನ್‌ ಅಧಿಕಾರಿಗಳ ತಂಡ ನಗರದ ಬಾಲಮಂದಿರಕ್ಕೆ ಬಂದು ಘಟನೆಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸೆಬಾಸ್ಟಿಯನ್‌ ಈನ ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ನಾನು ಏನೂ ಹೇಳಲಾರೆ. ನಾವು ಸಂಗ್ರಹಿಸಿದ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ