ವಿ. ಸೋಮಣ್ಣ ಜನತಾ ಬಜಾರ್ ಬಟ್ಟೆ ಕಳ್ಳ ಎಂದ ಎಚ್ಡಿಕೆಗೆ ವಸತಿ ಸಚಿವರ ಸವಾಲ್!
ಸಚಿವ ಸೋಮಣ್ಣ ಜನತಾ ಬಜಾರ್ ಬಟ್ಟೆ ಕಳ್ಳ ಎಂದ ಕುಮಾರಸ್ವಾಮಿಗೆ ಸೋಮಣ್ಣ ಸವಾಲು ಹಾಕಿದ್ದಾರೆ. ಅಲ್ಲದೆ, ದೇವೇಗೌಡ ಅವರು ಹಿರಿಯರಾಗಿದ್ದಾರೆ. ರಾಜ್ಯಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿ ಎಂದಷ್ಟೇ ಹೇಳಿದ್ದೇನೆ ಎಂದೂ ಹೇಳಿದ್ದಾರೆ.
Vijaya Karnataka Web 29 Nov 2019, 5:38 pm
ಚಿಕ್ಕಬಳ್ಳಾಪುರ: ಉಪ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ರಾಜಕೀಯ ನಾಯಕರ ನಡುವೆ ಟಾಕ್ವಾರ್ ಶುರುವಾಗಿದೆ. ಸಚಿವ ಸೋಮಣ್ಣ ಜನತಾ ಬಜಾರ್ ಬಟ್ಟೆ ಕಳ್ಳ ಎಂದು ಎಚ್ಡಿಕೆ ಆರೋಪ ಮಾಡಿದ ಬೆನ್ನಲ್ಲೇ ಮಾಜಿ ಸಿಎಂ ವಿರುದ್ಧ ಸೋಮಣ್ಣ ಸವಾಲು ಹಾಕಿದ್ದಾರೆ.
ಸಚಿವ ಸೋಮಣ್ಣ ಜನತಾ ಬಜಾರ್ ಬಟ್ಟೆ ಕಳ್ಳ ಎಂದ ಮಾಜಿ ಸಿಎಂ ಕುಮಾರಸ್ವಾಮಿಗೆ ಸೋಮಣ್ಣ ಸವಾಲ್ ಹಾಕಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪವನ್ನು ಎಚ್ಡಿಕೆ ಪ್ರೂವ್ ಮಾಡಿದರೆ ದೇಹ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೆ, ದೇವೇಗೌಡ ಬಗ್ಗೆ ಕೀಳು ಮಟ್ಟದ ಹೇಳಿಕೆ ಪದಗಳನ್ನು ನಾನು ಬಳಸಿಲ್ಲ. ನನಗೆ ಯಾವ ಬಟ್ಟೆ ಅಂಗಡಿಯೂ ಗೊತ್ತಿಲ್ಲ. ಅದನ್ನು ಅವರು ಸಾಬೀತುಪಡಿಸಿದರೆ ರಾಜಕೀಯನೇ ಅಲ್ಲ. ನನ್ನ ಇಡೀ ಜೀವನವನ್ನೇ ತ್ಯಾಗ ಮಾಡುವೆ ಎಂದು ಚಿಕ್ಕಬಳ್ಳಾಪುರದಲ್ಲಿ ವಸತಿ ಸಚಿವ ಸೋಮಣ್ಣ ಮಾಜಿ ಸಿಎಂ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಗೌರವದಿಂದ ಮಾತನಾಡಿದರೆ ಒಳ್ಳೆಯದು. ನಾಲಿಗೆಯನ್ನು ಹೊಲಸು ಮಾಡಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡುವುದು ಸರಿಯಲ್ಲ. ದೇವೇಗೌಡ ಅವರು ಹಿರಿಯರಾಗಿದ್ದಾರೆ. ರಾಜ್ಯಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿ ಎಂದಷ್ಟೇ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಪ್ರಚಾರ ಮಾಡುತ್ತಿರುವ ವೇಳೆ ಸೋಮಣ್ಣ ಹೇಳಿಕೊಂಡಿದ್ದಾರೆ.
ರಂಗೇರಿದ ಉಪಚುನಾವಣಾ ಅಖಾಡ; ಕಣ್ಣೀರು, ನಗು, ಕಾಮ, ಕಳ್ಳತನದ್ದೇ ಸದ್ದು !
ಸೋಮಣ್ಣ ರಾಜಕಾರಣಕ್ಕೆ ಬರುವ ಮೊದಲು ಜನತಾ ಬಜಾರ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಅವರು ದೇವೇಗೌಡರ ಎದುರು ಬಚ್ಚಾ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದರು.
15 ಕ್ಷೇತ್ರಗಳಲ್ಲೂ ಗೆದ್ದಾಗಿದೆ: ಗೆಲುವಿನ ಅಂತರಕ್ಕಾಗಿ ಕಾಯುತ್ತಿದ್ದೇವೆ ಎಂದ ಸಿಎಂ ಯಡಿಯೂರಪ್ಪ
ಇನ್ನೊಂದೆಡೆ, ಸಚಿವ ವಿ.ಸೋಮಣ್ಣ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಚುನಾವಣೆಯಾಗಲೀ ರಾಜಕಾರಣ ಆಗಲೀ ನಮ್ಮ ಟೀಕೆ, ನಿಂದನೆಗಳಿಗೆ ಮಿತಿ ಹಾಕಿಕೊಳ್ಳಬೇಕು. ಗಾಜಿನ ಮನೆಯಲ್ಲಿ ಕೂತ್ಕೊಂಡು ಕಲ್ಲೆಸೆಯಬಾರದು.
ಮಹಾಲಕ್ಷ್ಮಿ ಲೇಔಟ್ ಉಪ ಚುನಾವಣೆ: ಮಹಾಲಕ್ಷ್ಮಿ ವರಕ್ಕಾಗಿ ನಡೀತಿದೆ ತ್ರಿಕೋನ ಸಮರ!
ಇಂಥ ಹೊಲಸು ರಾಜಕಾರಣದಿಂದಾಗಿಯೇ ಯುವಕರು, ಒಳ್ಳೆಯವರು ರಾಜಕೀಯದಿಂದ ವಿಮುಖರಾಗ್ತಿದ್ದಾರೆ. ವಿದ್ಯಾವಂತರು ರಾಜಕೀಯಕ್ಕೆ ಬರದಂತಹ ವ್ಯವಸ್ಥೆ ಸೃಷ್ಟಿಯಾಗ್ತಿದೆ. ವಿಷಯಗಳ ಆಧಾರಿತವಾಗಿ ಚರ್ಚೆ ಮಾಡಬೇಕು. ಚರ್ಚೆಗಳು ಜನಪರ ಆಗಿರಬೇಕು. ಇಂತಹ ಚರ್ಚೆ ಬದಲು ವೈಯಕ್ತಿಕ ಟೀಕೆ ಸರಿಯಲ್ಲ. ವೈಯಕ್ತಿಕ ಟೀಕೆಗಳಿಗೆ ಕಡಿವಾಣ ಹಾಕ್ಕೋಬೇಕಾಗುತ್ತೆ ಎಂದು ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಹೇಳಿದ್ದಾರೆ.
ಸಚಿವ ಸೋಮಣ್ಣ ಜನತಾ ಬಜಾರ್ ಬಟ್ಟೆ ಕಳ್ಳ ಎಂದ ಮಾಜಿ ಸಿಎಂ ಕುಮಾರಸ್ವಾಮಿಗೆ ಸೋಮಣ್ಣ ಸವಾಲ್ ಹಾಕಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪವನ್ನು ಎಚ್ಡಿಕೆ ಪ್ರೂವ್ ಮಾಡಿದರೆ ದೇಹ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೆ, ದೇವೇಗೌಡ ಬಗ್ಗೆ ಕೀಳು ಮಟ್ಟದ ಹೇಳಿಕೆ ಪದಗಳನ್ನು ನಾನು ಬಳಸಿಲ್ಲ. ನನಗೆ ಯಾವ ಬಟ್ಟೆ ಅಂಗಡಿಯೂ ಗೊತ್ತಿಲ್ಲ. ಅದನ್ನು ಅವರು ಸಾಬೀತುಪಡಿಸಿದರೆ ರಾಜಕೀಯನೇ ಅಲ್ಲ. ನನ್ನ ಇಡೀ ಜೀವನವನ್ನೇ ತ್ಯಾಗ ಮಾಡುವೆ ಎಂದು ಚಿಕ್ಕಬಳ್ಳಾಪುರದಲ್ಲಿ ವಸತಿ ಸಚಿವ ಸೋಮಣ್ಣ ಮಾಜಿ ಸಿಎಂ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಗೌರವದಿಂದ ಮಾತನಾಡಿದರೆ ಒಳ್ಳೆಯದು. ನಾಲಿಗೆಯನ್ನು ಹೊಲಸು ಮಾಡಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡುವುದು ಸರಿಯಲ್ಲ. ದೇವೇಗೌಡ ಅವರು ಹಿರಿಯರಾಗಿದ್ದಾರೆ. ರಾಜ್ಯಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿ ಎಂದಷ್ಟೇ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಪ್ರಚಾರ ಮಾಡುತ್ತಿರುವ ವೇಳೆ ಸೋಮಣ್ಣ ಹೇಳಿಕೊಂಡಿದ್ದಾರೆ.
ರಂಗೇರಿದ ಉಪಚುನಾವಣಾ ಅಖಾಡ; ಕಣ್ಣೀರು, ನಗು, ಕಾಮ, ಕಳ್ಳತನದ್ದೇ ಸದ್ದು !
ಸೋಮಣ್ಣ ರಾಜಕಾರಣಕ್ಕೆ ಬರುವ ಮೊದಲು ಜನತಾ ಬಜಾರ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಅವರು ದೇವೇಗೌಡರ ಎದುರು ಬಚ್ಚಾ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದರು.
15 ಕ್ಷೇತ್ರಗಳಲ್ಲೂ ಗೆದ್ದಾಗಿದೆ: ಗೆಲುವಿನ ಅಂತರಕ್ಕಾಗಿ ಕಾಯುತ್ತಿದ್ದೇವೆ ಎಂದ ಸಿಎಂ ಯಡಿಯೂರಪ್ಪ
ಇನ್ನೊಂದೆಡೆ, ಸಚಿವ ವಿ.ಸೋಮಣ್ಣ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಚುನಾವಣೆಯಾಗಲೀ ರಾಜಕಾರಣ ಆಗಲೀ ನಮ್ಮ ಟೀಕೆ, ನಿಂದನೆಗಳಿಗೆ ಮಿತಿ ಹಾಕಿಕೊಳ್ಳಬೇಕು. ಗಾಜಿನ ಮನೆಯಲ್ಲಿ ಕೂತ್ಕೊಂಡು ಕಲ್ಲೆಸೆಯಬಾರದು.
ಮಹಾಲಕ್ಷ್ಮಿ ಲೇಔಟ್ ಉಪ ಚುನಾವಣೆ: ಮಹಾಲಕ್ಷ್ಮಿ ವರಕ್ಕಾಗಿ ನಡೀತಿದೆ ತ್ರಿಕೋನ ಸಮರ!
ಇಂಥ ಹೊಲಸು ರಾಜಕಾರಣದಿಂದಾಗಿಯೇ ಯುವಕರು, ಒಳ್ಳೆಯವರು ರಾಜಕೀಯದಿಂದ ವಿಮುಖರಾಗ್ತಿದ್ದಾರೆ. ವಿದ್ಯಾವಂತರು ರಾಜಕೀಯಕ್ಕೆ ಬರದಂತಹ ವ್ಯವಸ್ಥೆ ಸೃಷ್ಟಿಯಾಗ್ತಿದೆ. ವಿಷಯಗಳ ಆಧಾರಿತವಾಗಿ ಚರ್ಚೆ ಮಾಡಬೇಕು. ಚರ್ಚೆಗಳು ಜನಪರ ಆಗಿರಬೇಕು. ಇಂತಹ ಚರ್ಚೆ ಬದಲು ವೈಯಕ್ತಿಕ ಟೀಕೆ ಸರಿಯಲ್ಲ. ವೈಯಕ್ತಿಕ ಟೀಕೆಗಳಿಗೆ ಕಡಿವಾಣ ಹಾಕ್ಕೋಬೇಕಾಗುತ್ತೆ ಎಂದು ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಹೇಳಿದ್ದಾರೆ.