ಚಿಂತಾಮಣಿ: ಜನಸಾಮಾನ್ಯರಿಗೆ ಆರ್ಥಿಕ ಚಟುವಟಿಕೆಗಳಿಗೆ ಅತಿ ಮುಖ್ಯವಾಗಿ ಅವಲಂಭಿಸಿರುವ ಬ್ಯಾಂಕುಗಳಲ್ಲಿ ಅದರಲ್ಲೂ ಎಸ್ಬಿಐ ಬ್ಯಾಂಕ್ನಲ್ಲಿ ತ್ರಿಭಾಷಾ ಸೂತ್ರವನ್ನು ಅನುಸರಿಸದೆ ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ಕಸಾಪ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಡಾ ಕೈವಾರ ಶ್ರೀನಿವಾಸ್ ತಿಳಿಸಿದರು.
ಕಸಾಪ ಪದಾಧಿಕಾರಿಗಳೊಂದಿಗೆ ಚಿಂತಾಮಣಿ ಶಾಖೆಯ ಪ್ರಬಂಧಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕ್ ಅಪ್ ಮೈಸೂರು ಸಹ ಕನ್ನಡಿಗರ ಅಚ್ಚು ಮೆಚ್ಚಾದ ಬ್ಯಾಂಕ್ ಆಗಿತ್ತು. ಇದೀಗ ಎಸ್ಬಿಐ ಜತೆ ವಿಲೀನವಾಗಿ ದೇಶದಲ್ಲಿ ದೊಡ್ಡ ಬ್ಯಾಂಕ್ಆಗಿ ರೂಪುಗೊಂಡಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಹಳೆಯ ಪಾಸ್ ಪುಸ್ತಕಗಳ ವಿವರಗಳನ್ನು ಭಾರತೀಯ ತ್ರಿಭಾಷಾ ಸೂತ್ರದಡಿಯಲ್ಲಿ ಆಂಗ್ಲ, ಹಿಂದಿ ಹಾಗೂ ಕನ್ನಡ ಭಾಷೆ ಬಳಸಿ ಮುದ್ರಿಸಲಾಗಿತ್ತು, ಆದರೆ ಇತ್ತೀಚೆಗೆ ನೂತನವಾಗಿ ಮುದ್ರಣಗೊಂಡಿರುವ ಪಾಸ್ ಪುಸ್ತಕಗಳಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಮುದ್ರಿಸಿ ಕನ್ನಡ ಭಾಷೆಯನ್ನು ಕೈಬಿಟ್ಟಿರುವುದು ಕನ್ನಡ ಮತ್ತು ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದೆ. ಕೂಡಲೆ ಬ್ಯಾಂಕ್ ವಹಿವಾಟು ಪುಸ್ತಕದಲ್ಲಿ ಕನ್ನಡವನ್ನು ಬಳಸಿ ಮುದ್ರಿಸಿ ಕನ್ನಡ ಕೈಬಿಟ್ಟವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಉಪೇಕ್ಷಿಸಿದಲ್ಲಿ ರಾಜ್ಯಾದ್ಯಂತ ಎಲ್ಲಾ ಕನ್ನಡಪರ ಸಂಘಟನೆಗಳೊಂದಿಗೆ ಕನ್ನಡ ಉಳಿವಿಗಾಗಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಮು.ಪಾಪಣ್ಣ ಕೊರೊನಾ ಮಾಹಾ ಮಾರಿಯಿಂದ ಸಂಕಷ್ಟದಲ್ಲಿರುವ ಕನ್ನಡಿದರು ಬ್ಯಾಂಕ್ಗೆ ಬಂದಾಗ ಅವರಿಗೆ ಅರ್ಥವಾಗದ ಅನ್ಯ ಭಾಷೆ ಬದಲಿಗೆ ಕನ್ನಡದಲ್ಲಿ ವ್ಯವಹರಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಕಾಗತಿ ವೆಂಕಟರತ್ನಂ, ಕರವೇ ಜಿಲ್ಲಾಧ್ಯಕ್ಷ ಅಂಬರೀಶ್, ಕಸಾಪ ಜಿಲ್ಲಾಕೋಶಾಧ್ಯಕ್ಷ ಎಂ.ನಂಜುಂಡಪ್ಪ, ಕರವೇ ತಾಲೂಕು ಅಧ್ಯಕ್ಷ ನಾರೇಯಣರೆಡ್ಡಿ, ಕವಿ ವೆಂಕಟರಾಜು, ಸಾಹಿತಿ ಬಾಲಾಜಿ, ಪತ್ರಿಕಾ ಸಂಗ್ರಹಕ ಕೆ.ಎನ್.ಕಲ್ಯಾಣ್ ಕುಮಾರ್, ಕನ್ನಡಪರ ಹೋರಾಟಗಾರ ಬಿ.ಸಿ.ಜನಾರ್ಧನ್, ಅಂಜನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಕಸಾಪ ಪದಾಧಿಕಾರಿಗಳೊಂದಿಗೆ ಚಿಂತಾಮಣಿ ಶಾಖೆಯ ಪ್ರಬಂಧಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕ್ ಅಪ್ ಮೈಸೂರು ಸಹ ಕನ್ನಡಿಗರ ಅಚ್ಚು ಮೆಚ್ಚಾದ ಬ್ಯಾಂಕ್ ಆಗಿತ್ತು. ಇದೀಗ ಎಸ್ಬಿಐ ಜತೆ ವಿಲೀನವಾಗಿ ದೇಶದಲ್ಲಿ ದೊಡ್ಡ ಬ್ಯಾಂಕ್ಆಗಿ ರೂಪುಗೊಂಡಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಹಳೆಯ ಪಾಸ್ ಪುಸ್ತಕಗಳ ವಿವರಗಳನ್ನು ಭಾರತೀಯ ತ್ರಿಭಾಷಾ ಸೂತ್ರದಡಿಯಲ್ಲಿ ಆಂಗ್ಲ, ಹಿಂದಿ ಹಾಗೂ ಕನ್ನಡ ಭಾಷೆ ಬಳಸಿ ಮುದ್ರಿಸಲಾಗಿತ್ತು, ಆದರೆ ಇತ್ತೀಚೆಗೆ ನೂತನವಾಗಿ ಮುದ್ರಣಗೊಂಡಿರುವ ಪಾಸ್ ಪುಸ್ತಕಗಳಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಮುದ್ರಿಸಿ ಕನ್ನಡ ಭಾಷೆಯನ್ನು ಕೈಬಿಟ್ಟಿರುವುದು ಕನ್ನಡ ಮತ್ತು ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದೆ. ಕೂಡಲೆ ಬ್ಯಾಂಕ್ ವಹಿವಾಟು ಪುಸ್ತಕದಲ್ಲಿ ಕನ್ನಡವನ್ನು ಬಳಸಿ ಮುದ್ರಿಸಿ ಕನ್ನಡ ಕೈಬಿಟ್ಟವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಉಪೇಕ್ಷಿಸಿದಲ್ಲಿ ರಾಜ್ಯಾದ್ಯಂತ ಎಲ್ಲಾ ಕನ್ನಡಪರ ಸಂಘಟನೆಗಳೊಂದಿಗೆ ಕನ್ನಡ ಉಳಿವಿಗಾಗಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಮು.ಪಾಪಣ್ಣ ಕೊರೊನಾ ಮಾಹಾ ಮಾರಿಯಿಂದ ಸಂಕಷ್ಟದಲ್ಲಿರುವ ಕನ್ನಡಿದರು ಬ್ಯಾಂಕ್ಗೆ ಬಂದಾಗ ಅವರಿಗೆ ಅರ್ಥವಾಗದ ಅನ್ಯ ಭಾಷೆ ಬದಲಿಗೆ ಕನ್ನಡದಲ್ಲಿ ವ್ಯವಹರಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಕಾಗತಿ ವೆಂಕಟರತ್ನಂ, ಕರವೇ ಜಿಲ್ಲಾಧ್ಯಕ್ಷ ಅಂಬರೀಶ್, ಕಸಾಪ ಜಿಲ್ಲಾಕೋಶಾಧ್ಯಕ್ಷ ಎಂ.ನಂಜುಂಡಪ್ಪ, ಕರವೇ ತಾಲೂಕು ಅಧ್ಯಕ್ಷ ನಾರೇಯಣರೆಡ್ಡಿ, ಕವಿ ವೆಂಕಟರಾಜು, ಸಾಹಿತಿ ಬಾಲಾಜಿ, ಪತ್ರಿಕಾ ಸಂಗ್ರಹಕ ಕೆ.ಎನ್.ಕಲ್ಯಾಣ್ ಕುಮಾರ್, ಕನ್ನಡಪರ ಹೋರಾಟಗಾರ ಬಿ.ಸಿ.ಜನಾರ್ಧನ್, ಅಂಜನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.