ಆ್ಯಪ್ನಗರ

ಗೋವುಗಳನ್ನು ಪ್ರೀತಿಸುವವರು ಗೋ ಮಾಂಸ ರಫ್ತು ನಿಲ್ಲಿಸಲಿ: ರಾಮಲಿಂಗಾ ರೆಡ್ಡಿ

ಗೋವುಗಳ ಮೇಲೆ‌ ಪ್ರೀತಿ ಇರುವವರು ಗೋಮಾಂಸ ರಫ್ತು ನಿಲ್ಲಿಸಲಿ.ಯಾವ ಪ್ರಾಣಿಯನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಗೋವು‌ ಮಾತ್ರ ಅಲ್ಲ, ಎಲ್ಲಾ‌ ಪ್ರಾಣಿಗಳ‌ ಹತ್ಯೆ ನಿಷೇಧಿಸಲಿ. ಬಿಜೆಪಿಯವರು ಗೋಸುಂಬೆಗಳು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Vijaya Karnataka Web 4 Apr 2018, 3:00 pm
ಚಿಕ್ಕಬಳ್ಳಾಪುರ: ಗೋವು ‌ಮಾತ್ರ ಅಲ್ಲ, ಎಲ್ಲಾ ಪ್ರಾಣಿಗಳ‌ ಬಲಿ ನಿಲ್ಲಿಸಲಿ. ಗೋವುಗಳ ಮೇಲೆ‌ ಪ್ರೀತಿ ಇರುವವರು ಗೋಮಾಂಸ ರಫ್ತು ನಿಲ್ಲಿಸಲಿ.ಯಾವ ಪ್ರಾಣಿಯನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಗೋವು‌ ಮಾತ್ರ ಅಲ್ಲ, ಎಲ್ಲಾ‌ ಪ್ರಾಣಿಗಳ‌ ಹತ್ಯೆ ನಿಷೇಧಿಸಲಿ. ಬಿಜೆಪಿಯವರು ಗೋಸುಂಬೆಗಳು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
Vijaya Karnataka Web ramalinga reddy 2


ಬಿಜೆಪಿಯವರು ಏನ್ ಕಡಿದು ಕಟ್ಟಿಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ ಗೃಹ ಸಚಿವರು, ಬಿಜೆಪಿಯವರು 150 ಸೀಟು ಗೆಲ್ಲುವುದಕ್ಕೆ ಏನು ಸಾಧನೆ ಮಾಡಿದ್ದಾರೆ, ಆಡಳಿತದ ಐದು ವರ್ಷದಲ್ಲಿ‌ 3 ಮಂದಿ ಮುಖ್ಯಮಂತ್ರಿಗಳಾದರು. ಸಚಿವರು, ಶಾಸಕರು, ಜೈಲಿಗೆ ಹೋಗಿ ಬಂದಿದ್ದೇ ಬಿಜೆಪಿಯವರ ಸಾಧನೆ ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಅಪರೇಷನ್ ಕಮಲ, ರೆಸಾರ್ಟ್ ರಾಜಕಾರಣ, ಗಣಿ ಧೂಳಿಗೆ ಬಿಜೆಪಿ ಖ್ಯಾತಿಯಾಗಿದೆ.ಮಾಡಬಾರದ್ದನ್ನೆಲ್ಲ ಮಾಡಿ ಬಿಜೆಪಿಯವರು ಮನಗೆ ಹೋದರು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ