ಆ್ಯಪ್ನಗರ

ಪಂಚೆ, ಸೀರೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ನಗರದ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆ (ಎಸ್‌ಜೆಸಿಐಟಿ) ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ ದಿನ (ಎಥ್ನಿಕ್‌ ಡೇ) ಕಾರ‍್ಯಕ್ರಮದಲ್ಲಿ ಭಾರತದ ಭಿನ್ನ ಸಂಸ್ಕೃತಿಗಳ ಉಡುಗೆ ತೊಡುಗೆಗಳನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧರಿಸಿ ಗ್ರಾಮೀಣ ಪರಂಪರೆಯನ್ನು ಪ್ರತಿನಿಧಿಸಿದರು.

Vijaya Karnataka 5 May 2019, 3:15 pm
ಚಿಕ್ಕಬಳ್ಳಾಪುರ : ನಗರದ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆ (ಎಸ್‌ಜೆಸಿಐಟಿ) ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ ದಿನ (ಎಥ್ನಿಕ್‌ ಡೇ) ಕಾರ‍್ಯಕ್ರಮದಲ್ಲಿ ಭಾರತದ ಭಿನ್ನ ಸಂಸ್ಕೃತಿಗಳ ಉಡುಗೆ ತೊಡುಗೆಗಳನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧರಿಸಿ ಗ್ರಾಮೀಣ ಪರಂಪರೆಯನ್ನು ಪ್ರತಿನಿಧಿಸಿದರು.
Vijaya Karnataka Web students shining in sari lungi
ಪಂಚೆ, ಸೀರೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು


ನಿತ್ಯ ಕಾಲೇಜಿಗೆ ಜೀನ್ಸ್‌, ಟೀಶರ್ಟ್‌, ಕಾಲೇಜಿನ ಯೂನಿಫಾರಂ ಧರಿಸಿ ಬರುತ್ತಿದ್ದ ವಿದ್ಯಾರ್ಥಿಗಳು ಎಥ್ನಿಕ್‌ ಡೇ ಅಂಗವಾಗಿ ಪಂಚೆ, ಸೀರೆ ತೊಟ್ಟು ಥೇಟ್‌ ಸಾಂಪ್ರದಾಯಸ್ಥರ ಶೈಲಿಯಲ್ಲಿ ಮಿಂಚಿದರು. ಇನ್ನೂ ಕಾಲೇಜಿನ ಅಂಗಳದಲ್ಲಿ ಹಬ್ಬದ ವಾತಾವರಣ ಎಲ್ಲೆಡೆ ಮನೆ ಮಾಡಿತ್ತು.

ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಂಚೆ, ಜುಬ್ಬಾ, ಲಂಗಾ ದಾವಣಿ, ಸೀರೆ ತೊಟ್ಟು ಬಂದಿದ್ದ ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಅಹಮದಾಬಾದ್‌, ಕೇರಳ ಸೇರಿದ ಭಾರತೀಯ ಭಿನ್ನ ಭಿನ್ನ ಶೈಲಿಯಲ್ಲಿ ಹಿಂದೂ, ಮುಸನ್ಮಾನ, ಜೈನ, ಸಿಖ್‌, ಕ್ರಿಶ್ಚಿಯನ್‌ ಸೇರಿದಂತೆ ಹಲವು ಧರ್ಮಗಳ ಉಡುಗೆ ತೊಡುಗೆಗಳನ್ನು ಸಾಂಕೇತಿಕವಾಗಿ ಧರಿಸುವ ಮೂಲಕ ಭಾವೈಕ್ಯತೆ ಮೆರೆದರು.

ಕಾಲೇಜಿನ ಅಂಗಳದಲ್ಲಿ ವಿದ್ಯಾರ್ಥಿಗಳು ತಮಟೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ, ನೃತ್ಯ ಮಾಡಿ ಸಂಭ್ರಮಿಸಿದರು. ವಿದ್ಯಾರ್ಥಿನಿಯರು ರೇಷ್ಮೆ ಸೀರೆ ಉಟ್ಟು, ಬಗೆ ಬಗೆಯ ಆಭರಣ ತೊಟ್ಟು ಗೆಳತಿಯರೊಂದಿಗೆ ಮೊಬೈಲ್‌ ಮೂಲಕ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ವಿದ್ಯಾರ್ಥಿಗಳು ತಮಟೆ ವಾದನಕ್ಕೆ ಬಹುಭಾಷೆ ಹಾಡುಗಳಿಗೆ ನೃತ್ಯ ಮಾಡಿ ಸಂತಸ ಹಂಚಿಕೊಂಡರು. ವೇದಿಕೆಯಲ್ಲಿ ವೇಷಭೂಷಣ, ಫ್ಯಾಷನ್‌ ಷೋ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರನ್ನು ಮನರಂಜಿಸಿದರು.

ಎಸ್‌ಜೆಸಿಐಟಿ ಕಾಲೇಜಿನ ಪ್ರಾಶುಂಪಾಲ ಕೆ.ಎಂ.ರವಿಕುಮಾರ್‌ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಎಲ್ಲ ದೇಶಗಳಿಗಿಂತ ಭಾರತೀಯ ಸಂಸ್ಕೃತಿ ಪುರಾತನವಾದುದು. ಮುಂದಿನ ಪೀಳಿಗೆಗೂ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.

ಕುಲಸಚಿವ ಸುರೇಶ್‌, ಎಲ್ಲ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಸಾಥ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ