ಆ್ಯಪ್ನಗರ

ಕ್ಯಾಂಪಸ್‌ಗೆ ರಂಗು ತುಂಬಿದ ವಿದ್ಯಾರ್ಥಿಗಳು

ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಎನಿಸಿಕೊಂಡು ಪಂಚೆ, ಜುಬ್ಬಾ, ಲಂಗ, ದಾವಣಿ, ಸೀರೆ ತೊಟ್ಟು ಬಂದಿದ್ದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿದ್ಯಾರ್ಥಿನಿಯರಂತೂ ನಾನಾ ರಾಜ್ಯದ ಸಂಸ್ಕೃತಿ ಬಿಂಬಿಸುವ ಸೀರೆಗಳನ್ನು ಉಟ್ಟು ಬಂದು ಕ್ಯಾಂಪಸ್‌ಗೆ ರಂಗು ತುಂಬಿದರು.

Vijaya Karnataka 7 Oct 2019, 5:00 am
ಚಿಕ್ಕಬಳ್ಳಾಪುರ: ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಎನಿಸಿಕೊಂಡು ಪಂಚೆ, ಜುಬ್ಬಾ, ಲಂಗ, ದಾವಣಿ, ಸೀರೆ ತೊಟ್ಟು ಬಂದಿದ್ದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿದ್ಯಾರ್ಥಿನಿಯರಂತೂ ನಾನಾ ರಾಜ್ಯದ ಸಂಸ್ಕೃತಿ ಬಿಂಬಿಸುವ ಸೀರೆಗಳನ್ನು ಉಟ್ಟು ಬಂದು ಕ್ಯಾಂಪಸ್‌ಗೆ ರಂಗು ತುಂಬಿದರು.
Vijaya Karnataka Web students who paint the campus
ಕ್ಯಾಂಪಸ್‌ಗೆ ರಂಗು ತುಂಬಿದ ವಿದ್ಯಾರ್ಥಿಗಳು


ನಗರದ ಹೊರವಲಯದ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯ (ಎಸ್‌ಜೆಸಿಐಟಿ) ಕ್ಯಾಂಪಸ್‌ನಲ್ಲಿಶನಿವಾರ ಬಿಜಿಎಸ್‌ ನಿರ್ವಹಣಾ ಅಧ್ಯಯನ ಸಂಸ್ಥೆ ಸಾಂಸ್ಕೃತಿಕ ಮತ್ತು ಸಾಂಪ್ರಾದಾಯಿಕ ಉಡುಗೆ ದಿನ ಕಾರ್ಯಕ್ರಮದಲ್ಲಿಕಂಡು ಬಂದ ದೃಶ್ಯ.

ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಡಗಿನ ಕ್ರೀಡೆಗಳಾದ ಅಳುಗುಳಿಮನೆ, ಚೌಕಬಾರ, ಲಂಗೋರಿ, ಮಡಕೆ ಒಡೆಯುವುದು, ಸ್ಪರ್ಧೆಗಳ ಜತೆಗೆ ಗಾಯ, ರಂಗೋಲಿ, ಮದರಂಗಿ, ಫ್ಯಾಷನ್‌ ಶೋ ಸೇರಿದಂತೆ ನಾನಾ ಸಾಂಸ್ಕೃತಿಕ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಮುಗುಳುನಗೆ ಬೀರಿದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿತೊಡಗಿಸಿಕೊಂಡಾಗ ಕಲಿಕೆಯಲ್ಲಿಆಸಕ್ತಿ ಮೂಡುತ್ತದೆ. ಇದರಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್‌.ಶಿವರಾಮ ರೆಡ್ಡಿ ಮಾತನಾಡಿ, ಬಿಜಿಎಸ್‌ ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರುಗಳಲ್ಲಿಪ್ರವಹಿಸುವ ನಿಟ್ಟಿನಲ್ಲಿಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಇಂಡಿಯನ್‌ ಮೆಮೋರಿ ಕೌನ್ಸಿಲ್‌ ಅಧ್ಯಕ್ಷ ಜಯಸಿಂಹ, ಪ್ರಿನ್ಸಿಪಾಲ್‌ ವೆಂಕಟೇಶ್‌ ಬಾಬು ಹಾಗೂ ಡೀನ್‌ ದೊಡ್ಡೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ