ಆ್ಯಪ್ನಗರ

ಫಲಿತಾಂಶದ ಬಳಿಕ ಸಿದ್ದರಾಮಯ್ಯ ಜಾತಕ ಬಿಚ್ಚಿಡುತ್ತೇನೆ: ಸುಧಾಕರ್‌

ಕರ್ನಾಟಕದಲ್ಲಿ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಹಿರಂಗ ಚುನಾವಣೆ ಪ್ರಚಾರ ಮಂಗಳವಾರ ಕೊನೆಗೊಂಡಿದೆ. ಪ್ರಚಾರದ ಮೇಲೆ ನಾಯಕರ ಆರೋಪ-ಪ್ರತ್ಯಾರೋಪ ಮುಗಿಲು ಮುಟ್ಟಿದೆ.

Vijaya Karnataka Web 3 Dec 2019, 4:56 pm
ಚಿಕ್ಕಬಳ್ಳಾಪುರ: ನಾಯಕರಾದವರು ಹಿರಿತನಕ್ಕೆ, ಅನುಭವಕ್ಕೆ ತಕ್ಕಂತೆ ಮಾತನಾಡಬೇಕು. ವೈಯಕ್ತಿಕ ನಿಂದನೆ, ಅಪಪ್ರಚಾರ ಮಾಡಬಾರದು ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
Vijaya Karnataka Web ಸುಧಾಕರ್
ಸುಧಾಕರ್


ಚಿಕ್ಕಬಳ್ಳಾಪುರದಲ್ಲಿ ಬೈಕ್ ಮೆರವಣಿಗೆಗೆ ಚಾಲನೆ ಕೊಟ್ಟ ಬಳಿಕ ಸುಧಾಕರ್ ಮಾತನಾಡಿ ಸಿದ್ದರಾಮಯ್ಯ ಆರೋಪಗಳಿಗೆ ತಿರುಗೇಟು ನೀಡಿದರು.

ನಾಯಕರಾದವರು ಹಿರಿತನಕ್ಕೆ, ಅನುಭವಕ್ಕೆ ತಕ್ಕಂತೆ ಮಾತಾಡಬೇಕು. ವೈಯಕ್ತಿಕ ನಿಂದನೆ, ಅಪಪ್ರಚಾರ ಮಾಡುವುದು ಸಿದ್ದರಾಮಯ್ಯಗೆ ಶೋಭೆ ತರಲ್ಲ. ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರ ಕೆಲವು ಸತ್ಯಗಳನ್ನು ಜನತೆ ಮುಂದಿಡುತ್ತೇನೆ ಎಂದರು.

ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಟ್ಟಿದ್ದು ಸಿದ್ದರಾಮಯ್ಯ ಅಲ್ಲ. ನನ್ನ ರಾಜಕೀಯ ಗುರು ಎಸ್ ಎಂ ಕೃಷ್ಣ. ನನಗೆ ಟಿಕೆಟ್ ಕೊಡಿಸಿದ ಕ್ರೆಡಿಟ್ ಪರಮೇಶ್ವರ್ ಅವರಿಗೂ ಹೋಗುತ್ತೆ ಎಂದು ತಿಳಿಸಿದರು.

ಅನರ್ಹ ಶಾಸಕರು ಕೋತಿಗಳು ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಪಕ್ಕೂ ರಮೇಶ್‌ ಪ್ರತ್ಯುತ್ತರ ನೀಡಿದರು.

ರಮೇಶ್ ಕುಮಾರ್ ಅವರ ಬಗ್ಗೆನೂ ಕೆಲವು ವಿಚಾರಗಳನ್ನು ಚುನಾವಣೆ ನಂತರ ಬಹಿರಂಗ ಪಡಿಸ್ತೇನೆ. ರಮೇಶ್ ಕುಮಾರ್ ಅವ್ರು ಹಿಂದೆ ಯಾವುದೋ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಅವ್ರು ನಟನೆಯನ್ನೇ ಮುಂದುವರೆಸಿಕೊಂಡು ಹೋಗಲಿ ಎಂದರು.

ಘನತೆವೆತ್ತ ಹುದ್ದೆಯಲ್ಲಿ ಇದ್ದ ಕಾಂಗ್ರೆಸ್ ನಾಯಕರು ಹಾಸ್ಯ ನಟರಂತೆ ಮಾತಾಡ್ತಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ನಾಯಕರಿಗೆ ಏನೂ ಕೆಲಸ ಇರಲ್ಲ ಎಂದು ಸುಧಾಕರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ