ದಲಿತರ ಕಷ್ಟ ಕೇಳದ ಜನಪ್ರತಿನಿಧಿಗಳು, ಅಧಿಕಾರಿಗಳು
ಶಿಡ್ಲಘಟ್ಟ: ನಿವೇಶನ ಹಾಗೂ ವಸತಿಗೆ ಆಗ್ರಹಿಸಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಗಾನಹಳ್ಳಿಯ ದಲಿತ ಕುಟುಂಬಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿದೆ.
ಆದರೆ ಇದುವರೆಗೂ ದಲಿತ ಕುಟುಂಬಗಳ ಕಷ್ಟ ಕೇಳಲು ಸ್ಥಳಕ್ಕೆ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಭೇಟಿ ಕೊಟ್ಟಿಲ್ಲ. ಈ ಮಧ್ಯೆ ಕರ್ನಾಕಟ ದಲಿತ ಸಂಘರ್ಷ ಸಮಿಯ ಮುಖಂಡರಷ್ಟೇ ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಪ ವಿಭಾಗಾಧಿಕಾರಿ ಶಿವಸ್ವಾಮಿಯನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ದಢಂಘಟ್ಟ ತಿರುಮಲೇಶ್ ಹಾಗೂ ಇತರ ಮುಖಂಡರು ನಡೆಸಿದ್ದಾರೆ.
ಉಪ ವಿಭಾಗಾಧಿಕಾರಿ ಶಿವಸ್ವಾಮಿ ಅವರು, ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರಿಗೆ ಕರೆ ಮಾಡಿ ಸಮಸ್ಯೆಯ ವಿವರ ಪಡೆದಿದ್ದು, ಕಡತವನ್ನು ತರಲು ತಿಳಿಸಿದ್ದಾರಲ್ಲದೆ, ಮೂರು ದಿನಗಳಲ್ಲಿ ಕಡತ ವಿಲೇವಾರಿ ಮಾಡಿ ಸದರಿ ಸ್ಥಳವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಸೂಚಿಸಿದರು ಎನ್ನಲಾಗಿದೆ. ಅಲ್ಲದೇ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸುವುದಾಗಿಯೂ, ವಸತಿ ನಿವೇಶನ ಇಲ್ಲದ ದಲಿತ ಕುಟುಂಬಗಳಿಗೆ ನಿವೇಶನಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ.
ಶಿಡ್ಲಘಟ್ಟ: ನಿವೇಶನ ಹಾಗೂ ವಸತಿಗೆ ಆಗ್ರಹಿಸಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಗಾನಹಳ್ಳಿಯ ದಲಿತ ಕುಟುಂಬಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿದೆ.
ಆದರೆ ಇದುವರೆಗೂ ದಲಿತ ಕುಟುಂಬಗಳ ಕಷ್ಟ ಕೇಳಲು ಸ್ಥಳಕ್ಕೆ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಭೇಟಿ ಕೊಟ್ಟಿಲ್ಲ. ಈ ಮಧ್ಯೆ ಕರ್ನಾಕಟ ದಲಿತ ಸಂಘರ್ಷ ಸಮಿಯ ಮುಖಂಡರಷ್ಟೇ ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಪ ವಿಭಾಗಾಧಿಕಾರಿ ಶಿವಸ್ವಾಮಿಯನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ದಢಂಘಟ್ಟ ತಿರುಮಲೇಶ್ ಹಾಗೂ ಇತರ ಮುಖಂಡರು ನಡೆಸಿದ್ದಾರೆ.
ಉಪ ವಿಭಾಗಾಧಿಕಾರಿ ಶಿವಸ್ವಾಮಿ ಅವರು, ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರಿಗೆ ಕರೆ ಮಾಡಿ ಸಮಸ್ಯೆಯ ವಿವರ ಪಡೆದಿದ್ದು, ಕಡತವನ್ನು ತರಲು ತಿಳಿಸಿದ್ದಾರಲ್ಲದೆ, ಮೂರು ದಿನಗಳಲ್ಲಿ ಕಡತ ವಿಲೇವಾರಿ ಮಾಡಿ ಸದರಿ ಸ್ಥಳವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಸೂಚಿಸಿದರು ಎನ್ನಲಾಗಿದೆ. ಅಲ್ಲದೇ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸುವುದಾಗಿಯೂ, ವಸತಿ ನಿವೇಶನ ಇಲ್ಲದ ದಲಿತ ಕುಟುಂಬಗಳಿಗೆ ನಿವೇಶನಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ.